ನಡುರಸ್ತೆಯಲ್ಲೇ ಹೆಣವಾದ ಫೇಮಸ್ ಟೈಲರ್‌  : ಶಿಷ್ಯನೇ ಅವನ ಕಥೆ ಮುಗಿಸಿದ್ಯಾಕೆ ?

ನಡುರಸ್ತೆಯಲ್ಲೇ ಹೆಣವಾದ ಫೇಮಸ್ ಟೈಲರ್‌ : ಶಿಷ್ಯನೇ ಅವನ ಕಥೆ ಮುಗಿಸಿದ್ಯಾಕೆ ?

Published : Oct 06, 2023, 02:26 PM ISTUpdated : Oct 06, 2023, 03:03 PM IST

ಅನ್ನ ಹಾಕಿದವನನ್ನೇ ಅವನು ಮುಗಿಸಿದ್ದೇಕೆ..?
ಸಂಬಳ ಜಾಸ್ತಿ ಕೇಳಿದಕ್ಕೆ ಕೆಲಸದಿಂದಲೇ ತೆಗೆದ..!
ಕೆಲಸದಿಂದ ತೆಗೆದಿದಕ್ಕೆ ಕೊಲೆ ಮಾಡಿಬಿಟ್ಟ..!

ಅವನು ಆ ನಗರದ ಪ್ರತಿಷ್ಠಿತ ಟೇಲರ್.. ಸೆಲಬ್ರಿಟಿಗಳು, ಪೊಲೀಸರಿಂದ ಹಿಡಿದು ಎಲ್ಲರೂ ಅವನ ಬಳಿ ಬಟ್ಟೆ ಹೊಲಿಸಿಕೊಳ್ತಿದ್ರು. ಹೀಗೆ ಫುಲ್ ಫೇಮಸ್ ಆಗಿದ್ದ ಆ ಟೇಲರ್(Tailor) ಆವತ್ತೊಂದು ದಿನ ಹಾಡಹಗಲಲ್ಲೇ ನಡುರಸ್ತೆಯಲ್ಲಿ ಹೆಣವಾಗಿ ಹೋಗಿದ್ದ. ಅವನನ್ನ ಹಂತಕರು ಕಲ್ಲು ಎತ್ತಿಹಾಕಿ ಕೊಂದುಬಿಟ್ಟಿದ್ರು. ಆದ್ರೆ ಇದೇ ಕೊಲೆ(Murder) ಕೇಸ್‌ನ ಬೆನ್ನುಬಿದ್ದ ಪೊಲೀಸರಿಗೆ ಕೊಲೆಗಾರನನ್ನ ಕಂಡುಹಿಡಿಯೋದು ಸುಲಭದ ಕೆಲಸವಾಗಿರಲಿಲ್ಲ. ಕಾರಣ ಆ ಟೇಲರ್ ಅಷ್ಟು ಫೇಮಸ್ ಆಗಿದ್ರೂ ಯಾರೊಂದಿಗೂ ಒರಟಾಗಿ ಮಾತನ್ನಾಡಿವನಲ್ಲ. ಶತೃಗಳಂತೂ ಇಲ್ವೇ ಇಲ್ಲ. ನಿಜಕ್ಕೂ ಈಕೆಯ ಮಾತು ಕೇಳಿದ್ರೆ ಬೇಸರವಾಗುತ್ತೆ. ಇಷ್ಟು ಚಿಕ್ಕ ವಯಸಿನಲ್ಲೇ ಆತನಿಗೆ ಬಂದ ಸಾವು ಹೆಂಡತಿ ಮಕ್ಕಳನ್ನ ದಿಕ್ಕಿಲ್ಲದಂತೆ ಮಾಡಿದೆ. ಆದ್ರೆ ಅಷ್ಟು ಒಳ್ಳೆಯ ವ್ಯಕ್ತಿಯಾಗಿದ್ದ ಸುರೇಶ್‌ನನ್ನ ಕೊಂದಿದ್ಯಾರು ಅನ್ನೋದು ಮಾತ್ರ ಅಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರು(Police) ಕೊಲೆಯಾದ 24 ಗಂಟೆಗಳಲ್ಲೇ ಕೊಲೆಗಾರನನ್ನ ಪತ್ತೆ ಹಚ್ಚಿದ್ರು. ಅಷ್ಟೇ ಅಲ್ಲ ಅರೆಸ್ಟ್ ಕೂಡ ಮಾಡಿಬಿಟ್ಟಿದ್ರು. ಊರಲ್ಲೆಲ್ಲಾ ಒಳ್ಳೆಯವನ್ನಹಾಗಿದ್ರೂ ತನ್ನ ಅಂಗಡಿಯಲ್ಲಿ ಕೆಲಸ ಮಾಡುವವರ ಪಾಲಿಗೆ ಮಾತ್ರ ಆತ ವಿಲನ್ ಆಗಿದ್ದ. 12 ವರ್ಷದಿಂದ ಅವನ ಬಳಿ ಕೆಲಸ ಮಾಡ್ತಿದ್ದವನು ಸಂಬಳ ಜಾಸ್ತಿ ಮಾಡಿ ಅಂತ ಕೇಳಿದ ಅಷ್ಟೇ. ಅಷ್ಟಕ್ಕೇ ಕೆಲಸದಿಂದ ತೆಗದು ಹಾಕಿದಲ್ಲದೇ ಸಂಬಳವನ್ನೂ ಕೊಡಲಿಲ್ಲ. ಫೇಮಸ್ ಅಂಗಡಿಯಲ್ಲಿ ಕೆಲಸದಿಂದ ತೆಗೆದು ಹಾಕಿದ್ರಿಂದ ಬೇರೆ ಎಲ್ಲೂ ಕೆಲಸ ಸಿಗದಂತೆ ಆಗಿಬಿಡ್ತು. ಇದ್ರಿಂದ ಕುಪಿತನಾದ ಆತ ಅನ್ನ ಹಾಕಿದ್ದ ಧಣಿಯನ್ನೇ ಕೊಲ್ಲೋ ನಿರ್ಧಾರ ಮಾಡಿಬಿಟ್ಟ. ಸಂಬಳ ಜಾಸ್ತಿ ಮಾಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಅನ್ನ ಹಾಕಿದವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿಕೊಂದಿದ್ದಾನೆ . 

ಇದನ್ನೂ ವೀಕ್ಷಿಸಿ: ಅಕ್ರಮ ಸಂಬಂಧ : ಪತ್ನಿ-ಮಕ್ಕಳನ್ನ ತವರಿಗಟ್ಟಿ, ಮತ್ತೊಬ್ಬಳ ಜತೆ ಚೆಲ್ಲಾಟ..!

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more