ಅತ್ತಿಗೆಯ ಕೊಲೆಗೆ ಮೈದುನನಿಂದಲೇ ಸುಪಾರಿ! ಯೋಧನಿಗೆ ಅತ್ತಿಗೆ ಕೆಲಸದ ಮೇಲೆ ಕಣ್ಣು!

Sep 4, 2022, 2:53 PM IST

ವಿಜಯಪುರ, (ಸೆಪ್ಟೆಂಬರ್.04): ಸುಪಾರಿ ಪಡೆದ ಹಂತಕರೇ ಯಾಮಾರಿ ಸಿಕ್ಕಿಬಿದ್ದ ರೋಚಕ ಸ್ಟೋರಿ.. ಸರ್ಕಾರಿ ನೌಕರಸ್ಥೆಯನ್ನ ಕತ್ತು ಕತ್ತರಿಸೋಕೆ ಸುಪಾರಿ ಪಡೆದಿದ್ದ ಗ್ಯಾಂಗ್ ಕೈಯಿಂದ ಆಕೆ ಬದುಕಿ ಬಂದಿದ್ದೆ ಮತ್ತೊಂದು ರೋಚಕ ಸಂಗತಿ. ಹಣದ ಆಸೆಗೆ ಬಿದ್ದು ಅಚಾನಕ್ಕಾಗಿ ಪ್ಲಾನ್ ಚೆಂಜ್ ಮಾಡಿಕೊಂಡ ಹಂತಕರು ಸಲೀಸಾಗಿ ಖಾಕಿ ಬಲೆಗೆ ಬೀಳ್ತಾರೆ..

Bengaluru Crime: ಪ್ರೇಯಸಿಗಾಗಿ ಸ್ನೇಹಿತನನ್ನೇ ಕೊಂದ ಬಾಲ್ಯಸ್ನೇಹಿತ

ಯೆಸ್‌, ಕಹಾನಿ ಮೇಲೆ ಟ್ವಿಸ್ಟ್‌ ಅಂದ್ರೆ ಇದೆ ನೋಡಿ.. ಹಾಗಿದ್ರೆ ಗಂಡನನ್ನ ಕಳೆದುಕೊಂಡು ಸರ್ಕಾರಿ ನೌಕರಿಯಲ್ಲಿದ್ದ ಲಕ್ಷ್ಮೀ ಸೊನ್ನದ್‌ ಹತ್ಯೆಗೆ ಸುಪಾರಿ ನೀಡಿದ್ಯಾರು? ಅಷ್ಟಕ್ಕು ಸುಪಾರಿ ನೀಡಿದ ಆ ವ್ಯಕ್ತಿಯ ಪೋಟೊ ನೋಡಿ ಆಕೆ ಅಷ್ಟೊಂದು ಗಾಭರಿಗೆ ಒಳಗಾಗಿದ್ದು ಯಾಕೆ.. ಈ ಕಹನಿಯಲ್ಲಿರುವ ಆ ಟ್ವಿಸ್ಟ್‌ ಏನು? ಕ್ರೈಂ ಥ್ರಿಲ್ಲರ್ ಆಂಡ್ ಆಕ್ಷನ್ ಮೂವಿ ಹೋಲುವ ಸ್ಟೋರಿಯೇ ಇಂದಿನ ಎಫ್ ಐ ಆರ್.