ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಿಗ್ EXCLUSIVE ಸುದ್ದಿ: ಬಿಟ್ ಕಾಯಿನ್ ಹಗರಣ..ಶ್ರೀಕಿಗೆ ಕೃಪಾಕಟಾಕ್ಷ..?

ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಿಗ್ EXCLUSIVE ಸುದ್ದಿ: ಬಿಟ್ ಕಾಯಿನ್ ಹಗರಣ..ಶ್ರೀಕಿಗೆ ಕೃಪಾಕಟಾಕ್ಷ..?

Published : Sep 07, 2023, 12:38 PM IST

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದ್ದು ಮಾಡಿದ್ದ ಬಿಟ್‌ ಕಾಯಿನ್ ಹಗರಣ ಮರುಜೀವ ಪಡೆದಿದೆ. ಕಾಂಗ್ರೆಸ್ ಸರ್ಕಾರ ಆಕ್ರಮ ಬಯಲು ಮಾಡುತ್ತೆ ಅಂದುಕೊಂಡವರಿಗೆ ಶಾಕ್ ಆಗಿದೆ. ವಿಚಾರಣೆ ವೇಳೆ ಅಧಿಕಾರಿಗಳಿಗೇ ಆರೋಪಿ ಶ್ರೀಕಿ ಅವಾಜ್ ಹಾಕಿದ್ದನಂತೆ. ಸರ್ಕಾರವೇ ಆರೋಪಿ ರಕ್ಷಣೆಗೆ ನಿಂತಿದ್ಯಾ ಎಂಬ ಅನುಮಾನ ಮೂಡಿದ್ರೆ. ಇತ್ತ ಇನ್ಸ್‌ಪೆಕ್ಟರ್‌ಯೇ ಎಡಿಜಿಪಿಗೆ ಪತ್ರ ಬರೆದ್ದು, ಈ ಲೇಟರ್ ಸುವರ್ಣನ್ಯೂಸ್‌ಗೆ ಸಿಕ್ಕಿದೆ.
 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ ಕಾಯಿನ್(Bitcoin) ಹಗರಣ ಮತ್ತೆ ಮರುಜೀವ ಪಡೆದಿದೆ. ಹಗರಣ ಹಿಂದೆ ಯಾಱರು ಇದ್ದಾರೆ ಎಂದು ಖಾಕಿ ತನಿಖೆ ಮಾಡುತ್ತಿದೆ. ಇದರ ಮಧ್ಯೆಯೇ ಏಷ್ಯಾನೆಟ್ ಸುವರ್ಣನ್ಯೂಸ್ EXCLUSIVE ಸುದ್ದಿ ಬ್ರೇಕ್ ಮಾಡಿದ್ದು. ಆರೋಪಿ ಶ್ರೀಕಿಗೆ ಕಾಂಗ್ರೆಸ್(COngress)  ಸರ್ಕಾರದ ಅವಧಿಯಲ್ಲೂ ರಕ್ಷಣೆ ನೀಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ. ವಿಚಾರಣೆ ವೇಳೆ ಸತ್ಯ ಬಾಯಿಬಿಡಬೇಕಿದ್ದ ಆರೋಪಿಯೇ ಪೊಲೀಸರಿಗೆ ಅವಾಜ್ ಹಾಕಿದ್ದನಂತೆ. ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ(Srikrishna) ಪರ ರಾಜ್ಯ ಸರ್ಕಾರ ನಿಂತಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳೇ ಈ ಬಾರಿ ಮತ್ತೆ ತನಿಖೆ ಮಾಡುತ್ತಿದ್ದಾರೆ.ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳಿಗೆ ಶ್ರೀಕಿ ಬೆದರಿಕೆ ಹಾಕಿದ್ದು ಸ್ವತಹ ಇನ್ಸ್‌ಪೆಕ್ಟರ್ ಚಂದ್ರಧರ್ ಎಡಿಜಿಪಿಗೆ ಪತ್ರ ಬರೆದಿದ್ದಾರೆ..ಈ ಲೇಟರ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.ಬಿಟ್ ಕಾಯಿನ್ ಹಗರಣ ಆಚೆ ಬರುತ್ತೆ..ಆರೋಪಿಗೆ ಶಿಕ್ಷೆ ಆಗುತ್ತೆ ಅಂತಾ ರಾಜ್ಯವೇ ಕಾಯ್ತಿದೆ. ಆದ್ರೆ ಇಲ್ಲಿ ಆರೋಪಿಗೆ ದೊಡ್ಡ ನಾಯಕರ ಕೃಪಕಟಾಕ್ಷ ಇದ್ದು ಕಾಂಗ್ರೆಸ್‌ ಸರ್ಕಾರವೂ ಕೂಡ ಶ್ರೀಕೃಷ್ಣನ ಪರವಾಗಿಯೇ ಇದ್ಯಾ ಎಂಬ ದೊಡ್ಡ ಅನುಮಾನ ಮೂಡಿದೆ.

ಇದನ್ನೂ ವೀಕ್ಷಿಸಿ:  ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮೃದುವಾಗಿ ಮಾತನಾಡಿದ್ದಾರೆ: ಎ. ರಾಜಾ

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more