ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಿಗ್ EXCLUSIVE ಸುದ್ದಿ: ಬಿಟ್ ಕಾಯಿನ್ ಹಗರಣ..ಶ್ರೀಕಿಗೆ ಕೃಪಾಕಟಾಕ್ಷ..?

ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಿಗ್ EXCLUSIVE ಸುದ್ದಿ: ಬಿಟ್ ಕಾಯಿನ್ ಹಗರಣ..ಶ್ರೀಕಿಗೆ ಕೃಪಾಕಟಾಕ್ಷ..?

Published : Sep 07, 2023, 12:38 PM IST

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದ್ದು ಮಾಡಿದ್ದ ಬಿಟ್‌ ಕಾಯಿನ್ ಹಗರಣ ಮರುಜೀವ ಪಡೆದಿದೆ. ಕಾಂಗ್ರೆಸ್ ಸರ್ಕಾರ ಆಕ್ರಮ ಬಯಲು ಮಾಡುತ್ತೆ ಅಂದುಕೊಂಡವರಿಗೆ ಶಾಕ್ ಆಗಿದೆ. ವಿಚಾರಣೆ ವೇಳೆ ಅಧಿಕಾರಿಗಳಿಗೇ ಆರೋಪಿ ಶ್ರೀಕಿ ಅವಾಜ್ ಹಾಕಿದ್ದನಂತೆ. ಸರ್ಕಾರವೇ ಆರೋಪಿ ರಕ್ಷಣೆಗೆ ನಿಂತಿದ್ಯಾ ಎಂಬ ಅನುಮಾನ ಮೂಡಿದ್ರೆ. ಇತ್ತ ಇನ್ಸ್‌ಪೆಕ್ಟರ್‌ಯೇ ಎಡಿಜಿಪಿಗೆ ಪತ್ರ ಬರೆದ್ದು, ಈ ಲೇಟರ್ ಸುವರ್ಣನ್ಯೂಸ್‌ಗೆ ಸಿಕ್ಕಿದೆ.
 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ ಕಾಯಿನ್(Bitcoin) ಹಗರಣ ಮತ್ತೆ ಮರುಜೀವ ಪಡೆದಿದೆ. ಹಗರಣ ಹಿಂದೆ ಯಾಱರು ಇದ್ದಾರೆ ಎಂದು ಖಾಕಿ ತನಿಖೆ ಮಾಡುತ್ತಿದೆ. ಇದರ ಮಧ್ಯೆಯೇ ಏಷ್ಯಾನೆಟ್ ಸುವರ್ಣನ್ಯೂಸ್ EXCLUSIVE ಸುದ್ದಿ ಬ್ರೇಕ್ ಮಾಡಿದ್ದು. ಆರೋಪಿ ಶ್ರೀಕಿಗೆ ಕಾಂಗ್ರೆಸ್(COngress)  ಸರ್ಕಾರದ ಅವಧಿಯಲ್ಲೂ ರಕ್ಷಣೆ ನೀಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ. ವಿಚಾರಣೆ ವೇಳೆ ಸತ್ಯ ಬಾಯಿಬಿಡಬೇಕಿದ್ದ ಆರೋಪಿಯೇ ಪೊಲೀಸರಿಗೆ ಅವಾಜ್ ಹಾಕಿದ್ದನಂತೆ. ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ(Srikrishna) ಪರ ರಾಜ್ಯ ಸರ್ಕಾರ ನಿಂತಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳೇ ಈ ಬಾರಿ ಮತ್ತೆ ತನಿಖೆ ಮಾಡುತ್ತಿದ್ದಾರೆ.ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳಿಗೆ ಶ್ರೀಕಿ ಬೆದರಿಕೆ ಹಾಕಿದ್ದು ಸ್ವತಹ ಇನ್ಸ್‌ಪೆಕ್ಟರ್ ಚಂದ್ರಧರ್ ಎಡಿಜಿಪಿಗೆ ಪತ್ರ ಬರೆದಿದ್ದಾರೆ..ಈ ಲೇಟರ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.ಬಿಟ್ ಕಾಯಿನ್ ಹಗರಣ ಆಚೆ ಬರುತ್ತೆ..ಆರೋಪಿಗೆ ಶಿಕ್ಷೆ ಆಗುತ್ತೆ ಅಂತಾ ರಾಜ್ಯವೇ ಕಾಯ್ತಿದೆ. ಆದ್ರೆ ಇಲ್ಲಿ ಆರೋಪಿಗೆ ದೊಡ್ಡ ನಾಯಕರ ಕೃಪಕಟಾಕ್ಷ ಇದ್ದು ಕಾಂಗ್ರೆಸ್‌ ಸರ್ಕಾರವೂ ಕೂಡ ಶ್ರೀಕೃಷ್ಣನ ಪರವಾಗಿಯೇ ಇದ್ಯಾ ಎಂಬ ದೊಡ್ಡ ಅನುಮಾನ ಮೂಡಿದೆ.

ಇದನ್ನೂ ವೀಕ್ಷಿಸಿ:  ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮೃದುವಾಗಿ ಮಾತನಾಡಿದ್ದಾರೆ: ಎ. ರಾಜಾ

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
Read more