ಸಿಲಿಕಾನ್‌ ಸಿಟಿಯಲ್ಲಿ ಸಿನಿಮೀಯ ರೀತಿ ಘಟನೆ: 10 ಸೆಕೆಂಡ್‌ನಲ್ಲಿ ಲಕ್ಷಧೀಶನಾದ ಬೈಕ್ ಸವಾರ !

Sep 14, 2023, 1:21 PM IST

ಬೆಂಗಳೂರು: 10 ಸೆಕೆಂಡ್‌ನಲ್ಲೇ ಬೈಕ್‌ ಸವಾರನೊಬ್ಬ ಲಕ್ಷಧೀಶನಾಗಿರುವ ಘಟನೆ ಬೆಂಗಳೂರಿನ(Bengaluru) ಚಂದ್ರಲೇಔಟ್‌ನಲ್ಲಿ ಸಿನಿಮೀಯ ಶೈಲಿಯಲ್ಲಿ ನಡೆದಿದೆ. ಪ್ರಮೋದ್‌ ಎಂಬುವವರಿಗೆ ಸೇರಿದ 94 ಲಕ್ಷ ಹಣ(Money) ಮಿಸ್ಸಿಂಗ್‌ ಆಗಿತ್ತು. ಸೈಟ್‌ ಖರೀದಿಸಲು ಈ ಹಣವನ್ನು ತರಲಾಗಿತ್ತು. ಹಣವನ್ನು ತೆಗೆದುಕೊಂಡು ಹೋಗಿದ್ದ ಬೈಕ್‌ ಸವಾರ ವರುಣ್‌ ಗೌಡ, ಅದನ್ನು ಶ್ರೀನಗರದ ಮನೆಯಲ್ಲಿ ಆರು ದಿನ ಇಟ್ಟುಕೊಂಡಿದ್ದರು. ಅಲ್ಲದೇ ಸೆಕೆಂಡ್‌ ಹ್ಯಾಡ್‌ ಇನ್ನೋವಾ ಕಾರ್ ಖರೀದಿಸಲು ಚಿಂತಿಸಿದ್ದನಂತೆ. ಪ್ರಮೋದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಆಗ ವರುಣ್‌ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ವೀಕ್ಷಿಸಿ:  ರಾಜ್ಯದ ಆ ಜಿಲ್ಲೆಗೂ ಕಾಲಿಟ್ಟಿದ್ದಾರಾ ಉಗ್ರರು ? ಐಸಿಸ್‌ ನಂಟು ಇರುವ ಶಂಕೆ !