ಬಾಲಕಿ ಮೇಲೆ 55 ವರ್ಷದ ಕಾಮುಕನ ಕಣ್ಣು: ಅವಳ ಕಥೆ ಮುಗಿಸಿ ಹುಡುಕೋ ನಾಟಕವಾಡಿದ್ದ..!

Oct 14, 2022, 10:51 AM IST

ಮಂಡ್ಯ(ಅ.14):  ಅದು 10 ವರ್ಷದ ಅಮಾಯಕ ಹೆಣ್ಣು ಮಗಳು. ಓದು, ಪಾಠ, ಆಟ ಬಿಟ್ರೆ ಇನ್ನೇನೂ ಗೊತ್ತಿಲ್ಲ. ಆದ್ರೆ ಅವತ್ತು ಟ್ಯೂಷನ್‌ಗೆ ಅಂತ ಹೋದವಳು ನಾಪತ್ತೆ. ಎಲ್ಲಿ ಹೋದಳು ನಮ್ಮ ಮಗಳು ಅಂತ ಹೆತ್ತವರು ಹುಡುಕುತ್ತಿದ್ರು. ಆದ್ರೆ ಅವರ ಜೊತೆ ಒಬ್ಬ ಕಾಮುಕ ಕೂಡ ಆ ಹೆಣ್ಣುಮಗಳನ್ನ ಹುಡುಕುವ ಕೆಲಸ ಮಾಡ್ತಿದ್ದ. ಆ ಮಗುವನ್ನ ತನ್ನ ಕಾಮದ ದಾಹಕ್ಕೆ ಬಳಸಿಕೊಂಡು ಆಕೆಯನ್ನ ಅಮಾನುಷವಾಗಿ ಕೊಂದು ಹಾಕಿದ್ದ. ನಂತರ ಆಕೆಯ ಹೆತ್ತವರ ಜೊತೆಗೆ ಸೇರಿಕೊಂಡು ಒಂದು ಹೈಡ್ರಾಮವನ್ನೇ ಮಾಡಿದ್ದ. ಹೀಗೆ ಮೃಗದ ರೂಪದ ಮನುಷ್ಯನೊಬ್ಬ ಏನೂ ಅರಿಯದ ಬಾಲಕಿಯ ಕಥೆ ಮುಗಿಸಿ ಇನ್ನಿಲ್ಲದಂತೆ ನಾಟಕವಾಡಿದ ಕಾಮುಕನ ಕಥೆಯೇ ಇವತ್ತಿನ ಎಫ್ಐಆರ್.

ಈ ತಂದೆಯ ಮಾತುಗಳನ್ನ ಕೇಳ್ತಿದ್ರೆ ನಮ್ಮ ಕಣ್ಣುಗಳೇ ಒದ್ದೆಯಾಗಿಬಿಡ್ತಾವೆ. ಇನ್ನೂ ಹೆಣ್ಣು ಹೆತ್ತವರು ಒಂದು ಕ್ಷಣ ತಮ್ಮ ಮಕ್ಕಳ ಬಗ್ಗೆ ಯೋಚನೆ ಮಾಡಿಬಿಡ್ತಾರೆ. ಆದರೆ ಈ ಹೆಣ್ಣು ಮಗಳಿಗೆ ಆದ ಅನ್ಯಾಯ ಯಾರಿಗೂ ಆಗೋದು ಬೇಡ. ಅಷ್ಟಕ್ಕೂ ಈಕೆಯ ಮೇಲೆ ಮೃಗನಂತೆ ಎರಗಿದ ಆ ಕಾಮುಕ ಯಾರು ಗೊತ್ತಾ..? ಆಕೆ ಹೋಗ್ತಿದ್ದ ಟ್ಯೂಶನ್ನ ಮೇಲ್ವಿಚಾರಕ. ಟ್ಯೂಷನ್ ಇದೆ ಬಾ ಅಂತ ಮಟಮಟ ಧ್ಯಾಹ್ನಾ ಆ ಬಾಲಕಿಯನ್ನ ಕರೆಸಿಕೊಂಡು ಈ ನೀಚ ಮಾಡಬಾರದ ಕೆಲಸ ಮಾಡಿದ್ದ.

ಗೋಬಿ ತಿನ್ಲಿಲ್ಲ ಅಂತಾ ಲಟ್ಟಣಿಗೆಯಲ್ಲಿ ಅಜ್ಜಿಗೆ ಕೊಟ್ಟ ಏಟು, 6 ವರ್ಷದ ನಂತ್ರ ಮೊಮ್ಮಗನಿಗೆ ತೆರೆದ ಜೈಲು ಗೇಟು!

ಅಮಾನುಷವಾಗಿ ಹೆಣ್ಣು ಮಗುವಿನ ಮೆಲೆ ಎರಗಿ ಆಕೆಯ ಕಥೆ ಮುಗಿಸಿದ ಕಾಂತರಾಜ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಒಂದು ಪ್ಲಾನ್ ಮಾಡಿದ್ದ. ಬಾಲಕಿಯನ್ನ ಸಂಪಿನೊಳಗೆ ಹಾಕಿ ನಂತರ ಆಕೆಯ ಪೋಷಕರ ಜೊತೆ ಸೇರಿಕೊಂಡುಬಿಟ್ಟ. ಕಾಣೆಯಾದ ಮಗುವಿನ ಹುಡುಕಾಟಕ್ಕೆ ಈತನೂ ಸೇರಿಕೊಂಡ. ಆದ್ರೆ ಆತನ ಮೊಬೈಲ್ ಅವನಿಗೆ ಕೈಕೊಟ್ಟಿತ್ತು. ಈತನ ನಾಟಕ ಹೆಚ್ಚು ಹೊತ್ತು ನಡೆಯಲಿಲ್ಲ. ಪೊಲೀಸರ ಕೈಗೆ ತಗ್ಲಾಕೊಂಡ.

ನಿಜಕ್ಕೂ ಇಂಥಹ ಕೃತ್ಯಗಳು ನಡೆಯಬಾರದು. ಆದ್ರೆ ನಮ್ಮ ಜೊತೆಯಲ್ಲೇ ಇರುವ ಕೆಲ ಮನುಷ್ಯ ರೂಪದ ರಾಕ್ಷಸರು ಇಂಥಹ ಕೆಲಸವನ್ನ ಮಾಡಿ ಮನುಕುಲವೇ ನಾಚಿಕೆ ಪಡುವಂತೆ ಮಾಡಿಬಿಡ್ತಾರೆ. ಇಂಥಹ ಪರಮ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ನೀಚ ಕಾಂತರಾಜುವಿಗೆ ಗಲ್ಲು ಶಿಕ್ಷೆಯಾಗಲೇ ಬೇಕು ಆಗ ಮಾತ್ರ ಆ ಅಮಾಯಕ ಆತ್ಮಕ್ಕೆ ಶಾಂತಿ ಸಿಗೋದು.