ಗಂಡ ಮಾಡಿದ ಎಡವಟ್ಟು, ವಾಂತಿ ಮಾಡಿಕೊಂಡ ನಯನತಾರಾ; ಗುಡ್ ನ್ಯೂಸ್ ಅಲ್ಲ ಬ್ಯಾಡ್ ನ್ಯೂಸ್

Aug 11, 2022, 3:50 PM IST

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಗಣ್ಯರು ಹಾರಜಾಗಿದ್ದರು. ಶಾರುಖ್ ಖಾನ್ , ರಜನಿಕಾಂತ್, ಮಣಿರತ್ನಂ ಸೇರಿದಂತೆ ಅನೇಕ ಗಣ್ಯರು ಹಾಜರಾಗಿದ್ದರು. ಮದುವೆಯಾಗಿ ಎರಡು ತಿಂಗಳಾಗಿಯು. ಇದೀಗ ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಗಂಡ ಮಾಡಿದ ಎಡವಟ್ಟಿನಿಂದ ನಯನತಾರಾ ವಾಂತಿ ಮಾಡಿಕೊಂಡರಂತೆ. ಹಾಗಂತ ಇದು ಗುಡ್ ನ್ಯೂಸ್ ಅಂತ ಅಂದ್ಕೋಬೇಡಿ.  ಬ್ಯಾಡ್ ನ್ಯೂಸ್. ಹೌದು, ವಿಘ್ನೇಶ್ ಶಿವನ್ ಮಾಡಿದ ಅಡುಗೆ ತಿಂದು ನಯನತಾರಾಗೆ ಅಜೀರ್ಣವಾಗಿತ್ತಂತೆ. ಹೊಟ್ಟೆ ಹಾಳಾಗಿ ಬಳಿಕ ಆಸ್ಪತ್ರೆ ದಾಖಲಾಗಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ.