ಬೆಂಗಳೂರು (ಏ.10): ಜನಧನ್ ಖಾತೆಗೆ ಬಿದ್ದ ಹಣ ತೆಗೆದುಕೊಳ್ಳದೆ ಹೋದರೆ ಇಂದೇ ವಾಪಸ್ ಹೋಗತ್ತೆ. ಇಂಥದ್ದೊಂದು ವದಂತಿ ನಂಬಿ ರಾಜ್ಯಾದ್ಯಂತ ಹಲವೆಡೆ ಜನರು ಬ್ಯಾಂಕ್, ಎಟಿಎಂ ಗಳಿಗೆ ಮುಗಿಬಿದ್ದಿದ್ದಾರೆ. ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಖಾತೆಗೆ ಬಂದ ಹಣ ಯಾವುದೇ ಕಾರಣಕ್ಕೂ ಹಿಂದೆ ಹೋಗುವುದಿಲ್ಲ ಎಂದು SBI Chief ಜನರಲ್ ಮ್ಯಾನೇಜರ್ ಅಭಿಜಿತ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ನೋಡಿ |
ರಾಜ್ಯದ 18 ಜಿಲ್ಲೆಗಳಲ್ಲಿ ಸೀಲ್ ಡೌನ್ಗೆ ಮುಂದಾದ ಸರ್ಕಾರ...
ಖಾತೆಗೆ ಬಂದ ಹಣವನ್ನು ಯಾವಾಗ ಬೇಕಿದ್ದರೂ ಪಡೆಯಬಹುದು. ತುರ್ತು ಅಗತ್ಯವಿದ್ದರೆ ಮಾತ್ರ ಹಣ ತೆಗೆದುಕೊಳ್ಳಿ, ಇಲ್ಲದಿದ್ದರೆ ಲಾಕ್ ಡೌನ್ ಕಾಲ ಮುಗಿದ ನಂತರ ಹಣ ಪಡೆಯುವಂತೆ ವಿನಂತಿಸಿದ್ದಾರೆ.
ಬೆಂಗ್ಳೂರಿನ 13 ವಾರ್ಡ್ಗಳಲ್ಲಿ ಸೀಲ್ಡೌನ್; ಶುರುವಾಯ್ತು ಕೌಂಟ್ಡೌನ್...
"