ಜಲಮಂಡಳಿ ವಿರುದ್ಧ ಕ್ರಮಕ್ಕೆ ಸಂತೋಷ್ ಹೆಗ್ಡೆ  ಎನ್ ಜಿಟಿಗೆ ಪತ್ರ

Apr 30, 2019, 11:27 PM IST

ಬೆಂಗಳೂರು ಜಲಮಂಡಳಿ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದು ಹಸಿರು ನ್ಯಾಯಾಧೀಕರಣಕ್ಕೆ[ಎನ್ ಜಿಟಿ]  ಪತ್ರ ಬರೆಯುತ್ತೇನೆ ಎಂದು ನಿವೃತ್ತ ಲೋಕಾಯುಕ್ತ, ಎನ್ ಜಿಟಿ ನೇಮಕ ಮಾಡಿರುವ ಬೆಂಗಳೂರು ಕೆರೆ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಜಸ್ಟೀಸ್ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ಆಗರ ಕೆರೆಯನ್ನು ಮಂಗಳವಾರ ಪರಿಶೀಲನೆ ನಡೆಸಿದ ನಂತರ ಜಲಮಂಡಳಿ ಕಾರ್ಯಚಟುವಟಿಕೆ ಕಂಡು ಅಸಮಾಧಾನಗೊಂಡ ಹೆಗ್ಡೆ ಪತ್ರ ಬರೆಯುವುದಾಗಿ ತಿಳಿಸಿದರು.