ಡಿಕೆಶಿ ಬರಮಾಡಿಕೊಳ್ಳಲು ಹೋದವರ ಮೇಲೆ ಕೇಸ್, ಯಾಕಾಗಿ?

Oct 29, 2019, 6:04 PM IST

ಬೆಂಗಳೂರು[ಅ. 29]  ಡಿಕೆಶಿ ಅಭಿಮಾನಿಗಳು ನನ್ನ ಮೇಲೆ ಅಟ್ಯಾಕ್ ಮಾಡಲು ಪ್ರುಯತ್ನಪಟ್ಟಿದ್ದು ಅಲ್ಲದೇ ನನ್ನನ್ನು ನಿಂದಿಸಿದ್ದಾರೆ ಎಂದು ಈಶಾನ್ಯ ವಲಯ ಡಿಸಿಪಿ ಗನ್ ಮ್ಯಾನ್ ದೂರು ದಾಖಲು ಮಾಡಿದ್ದಾರೆ.

ಗೇಟ್ ಬಳಿ ಬಾವುಟ ಹಿಡಿದು ನಿಂತವರಿಗೆ ರಸ್ತೆಯಿಂದ ದೂರ ಸರಿಯಿರಿ ಎಂದು ಹೇಳಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಯತ್ನ ಮಾಡಿದರು ಎಂದು ಚಿಕ್ಕಜಾಲ ಪೊಲೀಸ್ ಠಾಣೆಗೆ ಭರಮಪ್ಪ ದೂರು ನೀಡಿದ್ದಾರೆ.