ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸಿಟಿ (CT) ಮತ್ತು ಎಂಆರ್ಐ (MRI) ಸ್ಕ್ಯಾನಿಂಗ್ ಸೇವೆಗಳನ್ನು ನೀಡುತ್ತಿದ್ದ ಖಾಸಗಿ ಸಂಸ್ಥೆಯೊಂದು ದಿಢೀರ್ ಸೇವೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ರೋಗಿಗಳಿಗೆ ತೊಂದರೆಯಾಗದಂತೆ ಕರ್ನಾಟಕ ಸರ್ಕಾರವು ತಕ್ಷಣದ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ.

01:01 PM (IST) Feb 20
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ತರುಣ್, ತಮಗಿಬ್ಬರಿಗೂ ಮೊದಲ ಪ್ರೀತಿ ಬೇರೆಯದ್ದೇ ಇದೆ ಎಂದಿದ್ದಾರೆ. ಈ ಸಮಾನ ಮನಸ್ಥಿತಿಯೇ ತಮ್ಮ ಸುಗಮ ದಾಂಪತ್ಯಕ್ಕೆ ಕಾರಣ ಎಂದಿದ್ದಾರೆ.
12:45 PM (IST) Feb 20
ಹಾಸನದಲ್ಲಿ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣವು, ಕೊಲೆ ಶಂಕೆ ಹುಟ್ಟಿಸಿದ್ದ ಈ ಘಟನೆಯು, ಪೊಲೀಸರ ತನಿಖೆ ಹಾಗೂ ಸಾಂತ್ವಾನ ಕೇಂದ್ರದ ಸಮಾಲೋಚನೆಯ ನಂತರ, ಪ್ರಿಯಾಂಕ ತನ್ನ ತಪ್ಪನ್ನು ಅರಿತು ಪತಿ ಮತ್ತು ಕುಟುಂಬದೊಂದಿಗೆ ಒಂದಾಗುವುದರೊಂದಿಗೆ ಸುಖಾಂತ್ಯ ಕಂಡಿದೆ.
12:43 PM (IST) Feb 20
ಕೇವಲ 3 ತಿಂಗಳ ಸಾಲದ ಕಂತು ಬಾಕಿ, ಇಷ್ಟೇ ನೋಡಿ ಬರೋಬ್ಬರಿ 8 ವರ್ಷಗಳಿಂದ ನಿಯತ್ತಾಗಿ ಗೃಹ ಸಾಲ ಕಟ್ಟಿದ್ದರೂ ಬ್ಯಾಂಕ್ ಕೇಳಲಿಲ್ಲ. ಮನೆಯಲ್ಲಿ ಬ್ಯಾಂಕ್ 90 ಲಕ್ಷಕ್ಕೆ ಹರಾಜು ಹಾಕಿದ ಕಣ್ಣೀರಿನ ಘಟನೆ ಬೆಂಗಳೂರಲ್ಲಿ ನಡೆದಿದೆ.
12:40 PM (IST) Feb 20
ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪಂಕಾ ಮಸೀದಿ ಬಳಿ ನಡೆದ ಈ ಘಟನೆಯಲ್ಲಿ ಎಸ್ಪಿ ಸಿದ್ಧಾರ್ಥ ಗೋಯಲ್ ಸೇರಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
12:23 PM (IST) Feb 20
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಸಾಫ್ಟ್ವೇರ್ ಇಂಜಿನಿಯರ್ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ 18 ವರ್ಷದ ಯುವಕನೇ ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
12:20 PM (IST) Feb 20
Simple easy Kitchen Scraps for Garden: ನಿಮ್ಮ ಮನೆಯಲ್ಲಿ ಉಳಿದ ಆಹಾರ ಕೂಡ ಮಣ್ಣನ್ನು ಫಲವತ್ತಾಗಿಸಬಹುದು. ಬಾಳೆಹಣ್ಣಿನ ಸಿಪ್ಪೆ, ಕಾಫಿ, ಮೊಟ್ಟೆಯ ಚಿಪ್ಪು ಮತ್ತು ಹುಳಿ ಹಣ್ಣುಗಳ ಸಿಪ್ಪೆ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಕೀಟಗಳನ್ನು ದೂರವಿಡುವ ಸುಲಭ ಮನೆಮದ್ದುಗಳ ಬಗ್ಗೆ ತಿಳಿಯಿರಿ.
12:18 PM (IST) Feb 20
12:00 PM (IST) Feb 20
ರಾಜ್ಯದ ದೇವಾಲಯಗಳಲ್ಲಿ ಹೆಚ್ಚುತ್ತಿರುವ ರೀಲ್ಸ್ ಮತ್ತು ವೀಡಿಯೋ ಚಿತ್ರೀಕರಣಕ್ಕೆ ಕಡಿವಾಣ ಹಾಕಲು, ಮುಜರಾಯಿ ಇಲಾಖೆಯು ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಇನ್ನುಮುಂದೆ ಸಿನಿಮಾ, ಧಾರಾವಾಹಿ, ಅಥವಾ ಯಾವುದೇ ವೃತ್ತಿಪರ ಚಿತ್ರೀಕರಣಕ್ಕೆ ಪೂರ್ವಾನುಮತಿ ಹಾಗೂ ನಿಗದಿತ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.
11:57 AM (IST) Feb 20
ನಿಮ್ಮ ಪರ್ಸ್ನ ಬಣ್ಣ ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಬಹುದು ಅನ್ನೋದು ನಿಮಗೆ ಗೊತ್ತಾ? ನೀಲಿಯಿಂದ ಕೆಂಪು ಬಣ್ಣದವರೆಗೆ, ಯಾವ ಬಣ್ಣದ ಪರ್ಸ್ ನಿಮಗೆ ಹಣ ಮತ್ತು ಯಶಸ್ಸನ್ನು ತಂದುಕೊಡುತ್ತೆ ಅಂತ ತಿಳಿಯಿರಿ!
11:43 AM (IST) Feb 20
ಚೈತ್ರಾ ಕುಂದಾಪುರ ಅವರು ಪತಿ ಶ್ರೀಕಾಂತ್ ಕಶ್ಯಪ್ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರೀಕಾಂತ್ ಕಶ್ಯಪ್ ಅವರ ಪರಿಚಯ ಆದ ದಿನದಿಂದ ಹಿಡಿದು, ಇಲ್ಲಿಯವರೆಗಿನ ಫೋಟೋಗಳನ್ನು ಹಂಚಿಕೊಂಡು ಜೊತೆಯಾಗಿ ಬಂದ ಸ್ನೇಹ, ಪ್ರೀತಿ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
11:29 AM (IST) Feb 20
ಇಂದು ಕರ್ನಾಟಕದಾದ್ಯಂತ ಒಣಹವೆ ಮುಂದುವರಿದಿದೆ. ಆಕಾಶವು ಶುಭ್ರವಾಗಿದ್ದು, ರಾತ್ರಿಗಳು ತಂಪಾಗಿರಲಿವೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ವಿಜಯಪುರದಲ್ಲಿ ಕನಿಷ್ಠ ತಾಪಮಾನ 15°C ನಷ್ಟು ಕಡಿಮೆ ದಾಖಲಾಗಿದೆ.
10:47 AM (IST) Feb 20
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಆಪ್ತನೆಂದು ಹೇಳಿಕೊಂಡು ಅಮ್ರಪಾಲಿ ಸುರೇಶ್ ಎಂಬಾತ, ಅದಾನಿ ಗ್ರೂಪ್ನಿಂದ 100 ಕೋಟಿ ಸಿಎಸ್ಆರ್ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 35 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.