LIVE NOW
Published : Feb 20, 2026, 10:03 AM ISTUpdated : Feb 20, 2026, 01:01 PM IST

Karnataka News Live: ಮದ್ವೆಯಾದ್ರೂ ನಾವಿಬ್ಬರೂ ನಮ್ಮ ಮೊದಲ ಪ್ರೀತಿ ಮರೆತಿಲ್ಲ - ಇದೇನಿದು Tarun Sudhir ಕೊಟ್ಟ ಸ್ಟೇಟ್​ಮೆಂಟ್​?

ಸಾರಾಂಶ

ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸಿಟಿ (CT) ಮತ್ತು ಎಂಆರ್‌ಐ (MRI) ಸ್ಕ್ಯಾನಿಂಗ್ ಸೇವೆಗಳನ್ನು ನೀಡುತ್ತಿದ್ದ ಖಾಸಗಿ ಸಂಸ್ಥೆಯೊಂದು ದಿಢೀರ್ ಸೇವೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ರೋಗಿಗಳಿಗೆ ತೊಂದರೆಯಾಗದಂತೆ ಕರ್ನಾಟಕ ಸರ್ಕಾರವು ತಕ್ಷಣದ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ.

Tharun Sudhir and Sonal Monteiro

01:01 PM (IST) Feb 20

ಮದ್ವೆಯಾದ್ರೂ ನಾವಿಬ್ಬರೂ ನಮ್ಮ ಮೊದಲ ಪ್ರೀತಿ ಮರೆತಿಲ್ಲ - ಇದೇನಿದು Tarun Sudhir ಕೊಟ್ಟ ಸ್ಟೇಟ್​ಮೆಂಟ್​?

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ತರುಣ್, ತಮಗಿಬ್ಬರಿಗೂ  ಮೊದಲ ಪ್ರೀತಿ  ಬೇರೆಯದ್ದೇ  ಇದೆ ಎಂದಿದ್ದಾರೆ.  ಈ ಸಮಾನ ಮನಸ್ಥಿತಿಯೇ ತಮ್ಮ ಸುಗಮ ದಾಂಪತ್ಯಕ್ಕೆ ಕಾರಣ ಎಂದಿದ್ದಾರೆ.

 

Read Full Story

12:45 PM (IST) Feb 20

ಸತ್ತಂತೆ ಕಥೆ ಕಟ್ಟಿದ್ದ ಹಾಸನದ ವಿವಾಹಿತೆ - ಪ್ರಿಯಕರ ಡೇವಿಡ್‌ಗೆ ಕೈ ಕೊಟ್ಟು ಗಂಡನ ಜೊತೆ ಹೋಗಲು ಒಪ್ಪಿದ ಪ್ರಿಯಾಂಕ!

ಹಾಸನದಲ್ಲಿ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣವು,  ಕೊಲೆ ಶಂಕೆ ಹುಟ್ಟಿಸಿದ್ದ ಈ ಘಟನೆಯು, ಪೊಲೀಸರ ತನಿಖೆ ಹಾಗೂ ಸಾಂತ್ವಾನ ಕೇಂದ್ರದ ಸಮಾಲೋಚನೆಯ ನಂತರ, ಪ್ರಿಯಾಂಕ ತನ್ನ ತಪ್ಪನ್ನು ಅರಿತು ಪತಿ ಮತ್ತು ಕುಟುಂಬದೊಂದಿಗೆ  ಒಂದಾಗುವುದರೊಂದಿಗೆ ಸುಖಾಂತ್ಯ ಕಂಡಿದೆ.

Read Full Story

12:43 PM (IST) Feb 20

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ₹1.2ಕೋಟಿ ಫ್ಲಾಟ್ ಕಳೆದುಕೊಂಡ ಬೆಂಗಳೂರಿಗನ ಕಣ್ಣೀರು

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ಇಷ್ಟೇ ನೋಡಿ ಬರೋಬ್ಬರಿ 8 ವರ್ಷಗಳಿಂದ ನಿಯತ್ತಾಗಿ ಗೃಹ ಸಾಲ ಕಟ್ಟಿದ್ದರೂ ಬ್ಯಾಂಕ್ ಕೇಳಲಿಲ್ಲ. ಮನೆಯಲ್ಲಿ ಬ್ಯಾಂಕ್ 90 ಲಕ್ಷಕ್ಕೆ ಹರಾಜು ಹಾಕಿದ ಕಣ್ಣೀರಿನ ಘಟನೆ ಬೆಂಗಳೂರಲ್ಲಿ ನಡೆದಿದೆ.

 

Read Full Story

12:40 PM (IST) Feb 20

ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಮೇಲೆ ಕಲ್ಲು ತೂರಾಟ; ಎಸ್‌ಪಿ ಸಿದ್ಧಾರ್ಥ ಗೋಯಲ್‌ಗೆ ಗಾಯ!

ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪಂಕಾ ಮಸೀದಿ ಬಳಿ ನಡೆದ ಈ ಘಟನೆಯಲ್ಲಿ ಎಸ್‌ಪಿ ಸಿದ್ಧಾರ್ಥ ಗೋಯಲ್ ಸೇರಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

Read Full Story

12:23 PM (IST) Feb 20

ಬೆಂಗಳೂರು ಮಹಿಳಾ ಟೆಕ್ಕಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್; ಹಂತಕನ ವಿಕೃತಿಗೆ ಪೊಲೀಸರೇ ಶಾಕ್!

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ 18 ವರ್ಷದ ಯುವಕನೇ ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. 

Read Full Story

12:20 PM (IST) Feb 20

ನಿಮ್ಮ ಮನೇಲಿರೋ ಈ ವೇಸ್ಟ್‌ ಹಾಕ್ರೀ ಸಾಕು, ಕರಿಬೇವು, ಪುದಿನಾ, ಕುತ್ತುಂಬರಿ ಗಿಡವಂತೂ ಸೋಂಪಾಗಿ ಬೆಳೆಯುತ್ತೆ!

Simple easy Kitchen Scraps for Garden: ನಿಮ್ಮ ಮನೆಯಲ್ಲಿ ಉಳಿದ ಆಹಾರ ಕೂಡ ಮಣ್ಣನ್ನು ಫಲವತ್ತಾಗಿಸಬಹುದು. ಬಾಳೆಹಣ್ಣಿನ ಸಿಪ್ಪೆ, ಕಾಫಿ, ಮೊಟ್ಟೆಯ ಚಿಪ್ಪು ಮತ್ತು ಹುಳಿ ಹಣ್ಣುಗಳ ಸಿಪ್ಪೆ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಕೀಟಗಳನ್ನು ದೂರವಿಡುವ ಸುಲಭ ಮನೆಮದ್ದುಗಳ ಬಗ್ಗೆ ತಿಳಿಯಿರಿ.

 

Read Full Story

12:18 PM (IST) Feb 20

ಶೂಟಿಂಗ್​ನಲ್ಲಿ ಅವಘಡದ ಮುನ್ನ ಆಗಿದ್ದೇನು? Naa Ninna Bidalaare ಅಂಬಿಕಾ ಆಸ್ಪತ್ರೆಯಿಂದ್ಲೇ ವಿಡಿಯೋ ಶೇರ್​!

'ನಾ ನಿನ್ನ ಬಿಡಲಾರೆ' ಸೀರಿಯಲ್‌ನ ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಶೂಟಿಂಗ್ ವೇಳೆ ಸ್ಟಂಟ್ ಮಾಡುವಾಗ ಕಾಲು ಮುರಿದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಕೆಲವು ದಿನಗಳ ಕಾಲ ಚಿತ್ರೀಕರಣದಿಂದ ದೂರ ಉಳಿಯಲಿದ್ದಾರೆ.
Read Full Story

12:00 PM (IST) Feb 20

ದೇಗುಲಗಳಲ್ಲಿ ರೀಲ್ಸ್, ಶೂಟಿಂಗ್ ಮಾಡಲು ಇನ್ನು ಅನುಮತಿ ಜೊತೆಗೆ ಶುಲ್ಕವೂ ಕಡ್ಡಾಯ! ಮುಜರಾಯಿ ಇಲಾಖೆ ಹೊಸ ಸುತ್ತೋಲೆ

ರಾಜ್ಯದ ದೇವಾಲಯಗಳಲ್ಲಿ ಹೆಚ್ಚುತ್ತಿರುವ ರೀಲ್ಸ್ ಮತ್ತು ವೀಡಿಯೋ ಚಿತ್ರೀಕರಣಕ್ಕೆ ಕಡಿವಾಣ ಹಾಕಲು, ಮುಜರಾಯಿ ಇಲಾಖೆಯು ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಇನ್ನುಮುಂದೆ ಸಿನಿಮಾ, ಧಾರಾವಾಹಿ, ಅಥವಾ ಯಾವುದೇ ವೃತ್ತಿಪರ ಚಿತ್ರೀಕರಣಕ್ಕೆ ಪೂರ್ವಾನುಮತಿ ಹಾಗೂ ನಿಗದಿತ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.

Read Full Story

11:57 AM (IST) Feb 20

ಈ ಕಲರ್ ಪರ್ಸ್ ಬಳಸಿದ್ರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತೆ! ನೀವು ಕಪ್ಪು ವ್ಯಾಲೆಟ್ ಬಳಸ್ತಿದ್ದೀರಾ?

ನಿಮ್ಮ ಪರ್ಸ್‌ನ ಬಣ್ಣ ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಬಹುದು ಅನ್ನೋದು ನಿಮಗೆ ಗೊತ್ತಾ? ನೀಲಿಯಿಂದ ಕೆಂಪು ಬಣ್ಣದವರೆಗೆ, ಯಾವ ಬಣ್ಣದ ಪರ್ಸ್ ನಿಮಗೆ ಹಣ ಮತ್ತು ಯಶಸ್ಸನ್ನು ತಂದುಕೊಡುತ್ತೆ ಅಂತ ತಿಳಿಯಿರಿ!

 

Read Full Story

11:43 AM (IST) Feb 20

2016ರಿಂದ ಇಲ್ಲಿಯವರೆಗೆ..; ಪತಿಯಿಂದ ದೂರ ಮಾಡಲು ಬಂದ್ರವ್ರ ಬಗ್ಗೆ ಫಸ್ಟ್‌ ಟೈಮ್‌ ಬಾಯಿಬಿಟ್ಟ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಪತಿ ಶ್ರೀಕಾಂತ್‌ ಕಶ್ಯಪ್‌ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರೀಕಾಂತ್‌ ಕಶ್ಯಪ್‌ ಅವರ ಪರಿಚಯ ಆದ ದಿನದಿಂದ ಹಿಡಿದು, ಇಲ್ಲಿಯವರೆಗಿನ ಫೋಟೋಗಳನ್ನು ಹಂಚಿಕೊಂಡು ಜೊತೆಯಾಗಿ ಬಂದ ಸ್ನೇಹ, ಪ್ರೀತಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

11:29 AM (IST) Feb 20

Karnataka Weather - ಬೆಂಕಿ ಬಿಸಿಲಿಗೆ ಬ್ರೇಕ್ ಇಲ್ಲ, ಇಬ್ಬನಿ ಚಳಿಗೆ ಕೊನೆಯಿಲ್ಲ - ಇಂದಿನ ರಾಜ್ಯದ ಹವಾಮಾನ ಹೇಗಿದೆ ಗೊತ್ತಾ?

ಇಂದು ಕರ್ನಾಟಕದಾದ್ಯಂತ ಒಣಹವೆ ಮುಂದುವರಿದಿದೆ. ಆಕಾಶವು ಶುಭ್ರವಾಗಿದ್ದು, ರಾತ್ರಿಗಳು ತಂಪಾಗಿರಲಿವೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ವಿಜಯಪುರದಲ್ಲಿ ಕನಿಷ್ಠ ತಾಪಮಾನ 15°C ನಷ್ಟು ಕಡಿಮೆ ದಾಖಲಾಗಿದೆ.

Read Full Story

10:47 AM (IST) Feb 20

ಕಿಮ್ಮನೆ ರತ್ನಾಕರ್ ಆಪ್ತನಿಂದ ಮಹಿಳೆಗೆ ವಂಚನೆ; ಅದಾನಿ ಗ್ರೂಪ್‌ನಿಂದ 100 ಕೋಟಿ ಫಂಡ್ ಕೊಡಿಸೋದಾಗಿ 35 ಲಕ್ಷ ಪಂಗನಾಮ!

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಆಪ್ತನೆಂದು ಹೇಳಿಕೊಂಡು ಅಮ್ರಪಾಲಿ ಸುರೇಶ್ ಎಂಬಾತ, ಅದಾನಿ ಗ್ರೂಪ್‌ನಿಂದ 100 ಕೋಟಿ ಸಿಎಸ್‌ಆರ್ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 35 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

More Trending News