Published : Jul 02, 2025, 07:02 AM ISTUpdated : Jul 02, 2025, 11:54 PM IST

Karnataka News Live: ಈ 7 ಲಕ್ಷಣಗಳನ್ನು ಕಾಣಿಸಿದರೆ ನಿಮ್ಮ ಫೋನ್ ಹ್ಯಾಕ್ ಆಗಿರಬಹುದು ಎಚ್ಚರ!

ಸಾರಾಂಶ

ಬೆಂಗಳೂರು: ಕಾಂಗ್ರೆಸ್ಸಿನ 140 ಶಾಸಕರ ಪೈಕಿ ಸಾಕಷ್ಟು ಶಾಸಕರ ಬೆಂಬಲ ಡಿ.ಕೆ.ಶಿವಕುಮಾರ್‌ ಅವರಿಗೆ ಇದೆ. ಹೀಗಾಗಿ ಅವರಿಗೆ ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರು ಬಿಟ್ಟು ಕೊಡಬೇಕು ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಈ ಹೇಳಿಕೆ ಸಂಬಂಧ ಇಕ್ಬಾಲ್ ಹುಸೇನ್ ಅವರಿಗೆ ಕೆಪಿಸಿಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ನಾಯಕತ್ವ ಬದಲಾವಣೆ ಬಗ್ಗೆ ಕೆಪಿಸಿಸಿ ಬಹಿರಂಗ ಹೇಳಿಕೆ ನೀಡಬಾರದು ಎಂದು ಸತತ ಎಚ್ಚರಿಕೆ ನೀಡಿದ ನಂತರವೂ ಇಕ್ಬಾಲ್‌ ಹುಸೇನ್‌ ಮಂಗಳವಾರ ಮತ್ತೊಮ್ಮೆ ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ.

 

11:06 PM (IST) Jul 02

ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗ, ಬೇಡಿಕೆ ಡಬಲ್

ಹೆಚ್ಚು ಸುರಕ್ಷತೆ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಜನಪ್ರಿಯ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗವಾಗಿದೆ. ಈ ವರದಿ ಬಹಿರಂಗವಾಗುತ್ತಿದ್ದಂತೆ ಕಾರಿನ ಬೇಡಿಕೆ ಹೆಚ್ಚಾಗುತ್ತಿದೆ.

 

Read Full Story

10:50 PM (IST) Jul 02

ರಕ್ಷಿಸಿದ ನಾಯಿ ಮರಿ ಕಚ್ಚಿ ಕಬಡ್ಡಿ ಪಟುವಿಗೆ ತೀವ್ರಗೊಂಡ ರೇಬಿಸ್, ನರಳಾಡಿ ಪ್ರಾಣಬಿಟ್ಟ ಬೃಿಜೇಶ್

ಒಂದು ತಿಂಗಳ ಮೋರಿಯಿಂದ ರಕ್ಷಿಸಿದ್ದ ನಾಯಿ ಮರಿಯನ್ನು ಕಚ್ಚಿ ರಾಜ್ಯ ಕಬಡ್ಡಿ ಪಟು ರೇಬಿಸ್‌ನಿಂದ ಮೃತಪಟ್ಟ ಘಟನೆ ನಡೆದಿದೆ. ಸಣ್ಣ ಹಲ್ಲಿನ ಗಾಯ ಎಂದು ಲಸಿಕೆ ಪಡೆಯದ ಕಬಡ್ಡಿ ಪಟು ಅಂತಿಮ ಕ್ಷಣದಲ್ಲಿ ನರಳಾಡಿ ಪ್ರಾಣ ಬಿಟ್ಟ ದುರಂತ ಘಟನೆ ನಡೆದಿದೆ.

 

Read Full Story

10:33 PM (IST) Jul 02

Hassan Heart Attack Deaths - ಹಾಸನದಲ್ಲಿ ಹೃದಯಾಘಾತದಿಂದ ಮತ್ತೊಂದು ಸಾವು!

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವುಗಳ ಸರಣಿ ಮುಂದುವರೆದಿದ್ದು, ಇತ್ತೀಚೆಗೆ ಸಂಪತ್ ಕುಮಾರ್ (53) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ 42 ದಿನಗಳಲ್ಲಿ 28 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ నెలకొಂಡಿದೆ.
Read Full Story

10:08 PM (IST) Jul 02

ರಾಯಚೂರು - ಅಪ್ರಾಪ್ತೆಗೆ ಲೈ*ಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ!

ಸಿಂಧನೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತೆಗೆ 7.5 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
Read Full Story

10:03 PM (IST) Jul 02

ಕರ್ನಾಟಕದಲ್ಲಿ ಹೆಚ್ಚಾದ ಮಳೆ ಅಬ್ಬರ, ನಾಳೆ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆ (ಜು.02) ರಾಜ್ಯದ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Read Full Story

09:55 PM (IST) Jul 02

ಕೊಟ್ಟಿಯೂರು ಶಿವನ ದೇಗುಲದಲ್ಲಿ ನಟ ಜಗ್ಗೇಶ್​ - ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಇದರ ವಿಶೇಷತೆ ನೋಡಿ...

ಕೊಟ್ಟಿಯೂರು ದೇಗುಲಕ್ಕೆ ನಟ, ಸಂಸದ ಜಗ್ಗೇಶ್​ ಭೇಟಿ ನೀಡಿದ್ದಾರೆ. ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಈ ದೇವಾಲಯದ ವಿಶೇಷತೆ ಏನು?

 

Read Full Story

09:47 PM (IST) Jul 02

Car Battery Care Tips - ಮಳೆಗಾಲದಲ್ಲಿ ಕಾರಿನ ಬ್ಯಾಟರಿ ಸೇಫ್ ಇರಲು ಇಷ್ಟು ಮಾಡಿ ಸಾಕು!

ಮಳೆಗಾಲದಲ್ಲಿ ಕಾರ್ ಬ್ಯಾಟರಿ ಮೇಂಟೆನೆನ್ಸ್ ಮುಖ್ಯ. ಬ್ಯಾಟರಿ ಕ್ಲೀನ್ ಮಾಡಿ, ಸರಿಯಾಗಿ ಫಿಕ್ಸ್ ಮಾಡಿ, ಕಾರನ್ನ ನೆರಳಲ್ಲಿ ಪಾರ್ಕ್ ಮಾಡಿ, ಆಗಾಗ್ಗೆ ಚೆಕ್ ಮಾಡಿ.

Read Full Story

09:33 PM (IST) Jul 02

ಭಾರಿ ಮಳೆಯಿಂದ ಈ ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

ರಾಜ್ಯದ ಕೆಲ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕೆಲ ಜಿಲ್ಲೆಯ ತಾಲೂಕುಗಳ, ಹೋಬಳಿಗೆ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ

Read Full Story

09:25 PM (IST) Jul 02

ಗಂಡ-ಮಕ್ಕಳ ವಿಷ್ಯದಲ್ಲಿ ಬಹುತೇಕ ಮಹಿಳೆಯರು ಮಾಡುತ್ತಿದ್ದಾರೆ ಈ ಬಹುದೊಡ್ಡ ತಪ್ಪು! ವೈದ್ಯೆ ಮಾತು ಕೇಳಿ...

ಬೇಡದ್ದೆಲ್ಲಾ ತಿನ್ನದಿದ್ದರೂ, ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದರೂ ಬಹುತೇಕ ಮಹಿಳೆಯರಿಗೆ ಅನಾರೋಗ್ಯ ಉಂಟಾಗಲು ಕಾರಣವೇನು? ಅವರು ಮಾಡ್ತಿರೋ ತಪ್ಪೇನು? ಖ್ಯಾತ ವೈದ್ಯೆ ಮಾತು ಕೇಳಿ...

 

Read Full Story

09:06 PM (IST) Jul 02

ಪಾಕಿಸ್ತಾನಿಯರ ಯೂಟ್ಯೂಬ್, ಸೋಶಿಯಲ್ ಮೀಡಿಯಾ ನಿಷೇಧ ತೆರವು, ಹಲವರ ಆಕ್ರೋಶ

ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನಿಯರ ಹಲವು ಯೂಟ್ಯೂಬ್, ಸೋಶಿಯಲ್ ಮೀಡಿಯಾ ಖಾತೆಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿತ್ತು. ಇದೀಗ ಈ ನಿಷೇಧ ತೆರವುಗೊಳಿಸಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

08:16 PM (IST) Jul 02

ನಮ್ಮ ಕಾಂಗ್ರೆಸ್ ಸೇರಿ 8 ಪಕ್ಷಗಳ ಮಾನ್ಯತೆ ರದ್ದುಗೊಳಿಸಲು ನೊಟೀಸ್ ಜಾರಿಗೊಳಿಸಿದ ಚುನಾವಣಾ ಆಯೋಗ!

ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದ ನಮ್ಮ ಕಾಂಗ್ರೆಸ್ ಸೇರಿ 8 ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ. ಜುಲೈ 18, 2025 ರಂದು ವಿಚಾರಣೆ ನಡೆಸಿ, ಪಕ್ಷಗಳಿಗೆ ತಮ್ಮ ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗುವುದು.

Read Full Story

08:11 PM (IST) Jul 02

ಅಲುಗಾಡುತ್ತಿದೆಯಾ ಐಟಿ ಕ್ಷೇತ್ರ? ಮೈಕ್ರೋಸಾಫ್ಟ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ

ಮೈಕ್ರೋಸಾಫ್ಟ್‌ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವಾಗುತ್ತಿದೆ. ಈ ಬಾರಿ 9,000 ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ಇದೀಗ ಐಟಿ ಕ್ಷೇತ್ರದಲ್ಲಿ ಮತ್ತೆ ಆತಂಕ ಮನೆ ಮಾಡುತ್ತಿದೆ.

 

Read Full Story

07:49 PM (IST) Jul 02

ಮಂಡ್ಯದಲ್ಲಿ ಒಂದೇ ಸೀರೆಗೆ ಕೊರಳೊಡ್ಡಿದ ತಾಯಿ-ಮಗಳು; ಡೆತ್ ನೋಟ್‌ನಲ್ಲಿ ಬಯಲಾಯ್ತು ಸತ್ಯ!

ಮಂಡ್ಯದಲ್ಲಿ ತಾಯಿಯೊಬ್ಬಳು 9 ವರ್ಷದ ಮಗಳನ್ನು ನೇಣು ಹಾಕಿ ಕೊಂದು, ತಾನೂ ಅದೇ ಸೀರೆಗೆ ಕೊರಳೊಡ್ಡಿ ಸಾವಿಗೆ ಶರಣಾದ ಘಟನೆ ನಡೆದಿದೆ. ಅವರ ಪಕ್ಕದಲ್ಲಿ ಸಿಕ್ಕಿದ ಡೆತ್ ನೋಟ್‌ನಲ್ಲಿ ಗಂಡನ ಕಿರುಕುಳದ ಬಗ್ಗೆ ಮಹಿಳೆ ಬರೆದಿಟ್ಟಿದ್ದಾಳೆ.

Read Full Story

07:45 PM (IST) Jul 02

ನೂರಾರು ಪ್ರವಾಸಿಗರ ಕೈಬೀಸಿ ಸೆಳೆಯುತ್ತಿದೆ ಹಯಸಿಂಥ್ ಕಿಲ್ಲರ್ ಹೂವು!

ಕೊಡಗಿನ ಕುಶಾಲನಗರದ ತಾವರೆ ಕೆರೆಯಲ್ಲಿ ವಾಟರ್ ಹಯಸಿಂಥ್ ಎಂಬ ತ್ಯಾಜ್ಯ ಗಿಡ ಹರಡಿ ಲಕ್ಷಾಂತರ ಹೂವುಗಳು ಅರಳಿವೆ. ಇದು ನೋಡುಗರನ್ನು ಆಕರ್ಷಿಸುತ್ತಿದ್ದರೂ, ನೀರಿನ ಗುಣಮಟ್ಟ ಹಾಳುಮಾಡುವ ಅಪಾಯಕಾರಿ ಗಿಡವಾಗಿದೆ.
Read Full Story

07:33 PM (IST) Jul 02

ಬೀರ್ ಕುಡಿಯುತ್ತಲೇ ಆನ್‌ಲೈನ್ ವಿಚಾರಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಭಾಗಿ - ವೀಡಿಯೋ

ಗುಜರಾತ್ ಹೈಕೋರ್ಟ್‌ನ ಆನ್‌ಲೈನ್ ವಿಚಾರಣೆಯಲ್ಲಿ ಹಿರಿಯ ವಕೀಲರೊಬ್ಬರು ಬಿಯರ್ ಕುಡಿಯುತ್ತಾ ಕಾಣಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನ್ಯಾಯಾಲಯವು ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.
Read Full Story

07:22 PM (IST) Jul 02

ಸಿಂಗಲ್ಲಾಗಿದ್ದೀನಿ ಬಾ ಅಂತ, ಮನೆಗೆ ಕರೆಸಿಕೊಂಡು ಪ್ರೇಮಿಯ ಖಾಸಗಿ ಭಾಗ ಕತ್ತರಿಸಿ ಕಳಿಸಿದ ಪ್ರೇಯಸಿ!

ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಯ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರೇಮಿಯನ್ನು ಕರೆಸಿಕೊಂಡ ಯುವತಿ, ಜಗಳದ ಬಳಿಕ ಈ ಕೃತ್ಯ ಎಸಗಿದ್ದಾಳೆ. ಗಂಟೆಗಳ ಕಾಲ ರಕ್ತಸ್ರಾವವಾಗಿದ್ದು, ಪ್ರೇಮಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
Read Full Story

07:13 PM (IST) Jul 02

ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಹುಟ್ಟುಹಬ್ಬಕ್ಕೆ ಸರ್ಪ್ರೈಸ್

ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್. ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಸಿನಿಮಾ ತಂಡ ಜುಲೈ 7ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದೆ. ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಚಿತ್ರತಂಡ ನೀಡುತ್ತಿರುವುದೇನು?

Read Full Story

07:10 PM (IST) Jul 02

ಮೇಡ್‌ ಇನ್ ಚೀನಾ ಗೊಬ್ಬರ ಚೀಲಗಳ ಮೇಲೆ ಮೋದಿ ಫೋಟೋ - ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಚೀನಾದಿಂದ ರಸಗೊಬ್ಬರ ಪೂರೈಕೆ ನಿಂತಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Read Full Story

06:58 PM (IST) Jul 02

ಜುಟ್ಟುಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು - ಮುಂಬೈ ಲೋಕಲ್ ರೈಲಿನಲ್ಲಿ ನಾರಿಶಕ್ತಿ ಅನಾವರಣ!

ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

06:47 PM (IST) Jul 02

ಹೆಸರಿಗೆ ಬ್ರಹ್ಮಗಂಟು ಆದ್ರೆ, ಅಣ್ಣ-ತಂಗಿ ಸಂಬಂಧಕ್ಕೆ ಬೆಲೆನೇ ಇಲ್ವೇ! ಚಿರು-ಸಂಜನಾ ರೊಮ್ಯಾನ್ಸ್‌ಗೆ ಆಕ್ರೋಶ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಚಿರು ಮತ್ತು ಸಂಜನಾ ನಡುವಿನ ರೊಮ್ಯಾನ್ಸ್ ದೃಶ್ಯಗಳು ವಿವಾದಕ್ಕೆ ಕಾರಣವಾಗಿವೆ. ವರಸೆಯಲ್ಲಿ ಅಣ್ಣ-ತಂಗಿ ಆಗಿದ್ದರೂ ಕೆಲ ದೃಶ್ಯಗಳು ಸಂಪ್ರದಾಯ ಗಡಿ ಮೀರಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಚಿರು ಮತ್ತು ಸಂಜನಾ ರೊಮ್ಯಾನ್ಸ್ ದೃಶ್ಯ ಸಂಪ್ರದಾಯಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

06:39 PM (IST) Jul 02

30ಕ್ಕೂ ಅಧಿಕ ಮಹಿಳಾ ಉದ್ಯೋಗಿಗಳ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ ಟೆಕ್ಕಿಯನ್ನು ವಜಾ ಮಾಡಿದ ಇನ್ಫೋಸಿಸ್‌!

ಉದ್ಯೋಗಿಯನ್ನು 28 ವರ್ಷದ ಸ್ವಪ್ನಿಲ್ ನಾಗೇಶ್ ಮಲಿ ಎಂದು ಗುರುತಿಸಲಾಗಿದ್ದು, ಈತ ಮಹಾರಾಷ್ಟ್ರದವನಾಗಿದ್ದಾನೆ. ಆತನ ಫೋನ್‌ನಲ್ಲಿ ವಿವಿಧ ಮಹಿಳಾ ಉದ್ಯೋಗಿಗಳ 30 ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಕಂಡುಬಂದಿವೆ.

 

Read Full Story

06:29 PM (IST) Jul 02

ಕೋ 5 ಹುಲಿ ಸಾವು ಮಾಸುವ ಮುನ್ನವೇ 18ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ!

ಚಾಮರಾಜನಗರದಲ್ಲಿ 18ಕ್ಕೂ ಹೆಚ್ಚು ಕೋತಿಗಳು ವಿಷಪ್ರಾಶನದಿಂದ ಸಾವನ್ನಪ್ಪಿವೆ. ಕಿಡಿಗೇಡಿಗಳು ಚೀಲಗಳಲ್ಲಿ ಕೋತಿಗಳ ಶವಗಳನ್ನು ತಂದು ಬಿಸಾಡಿರುವುದು ಕಂಡುಬಂದಿದೆ. ಈ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ ನಡೆದಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
Read Full Story

06:27 PM (IST) Jul 02

ಫ್ಯಾಮಿಲಿ ಟ್ರಿಪ್ ವೇಳೆ ಸೊಳ್ಳೆ ಕಚ್ಚಿದ್ದಷ್ಟೇ ಬ್ರೈನ್ ಡೆಡ್‌, ಕೋಮಾಗೆ ಜಾರಿದ ಮಹಿಳೆ

2 ವರ್ಷದ ತಾಯಿಯೊಬ್ಬರು ತಮ್ಮ ಕುಟುಂಬದೊಂದಿಗೆ ಟೆನೆರೈಫ್‌ಗೆ ಪ್ರವಾಸ ಹೋಗಿದ್ದು, ಅಲ್ಲಿ ಸೊಳ್ಳೆಯೊಂದು ಕಚ್ಚಿದ ನಂತರ ಅವರ ಮಿದುಳು ನಿಷ್ಕ್ರಿಯಗೊಂಡು ಅವರು ಕೋಮಾಗೆ ಜಾರಿದಂತಹ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.

Read Full Story

06:07 PM (IST) Jul 02

ದಕ್ಷಿಣ ಕನ್ನಡ - ಕೇವಲ 6 ತಿಂಗಳಲ್ಲಿ 85 ಜನ ಹೃದಯಾಘಾತದಿಂದ ಸಾವು! ಆರೋಗ್ಯಾಧಿಕಾರಿಯಿಂದ ಶಾಕಿಂಗ್ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 85 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 20 ರಿಂದ 60 ವರ್ಷ ವಯಸ್ಸಿನವರಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.
Read Full Story

06:05 PM (IST) Jul 02

ಜಾಬ್ ಕಳ್ಕೊಂಡ ಟೆಕ್ಕಿಗೆ 80 ಲಕ್ಷ ರೂ ವೇತನದ ಜರ್ಮನಿ ಆಫರ್, ಏನ್ ಮಾಡ್ಲಿ ಎಂದು ಪ್ರಶ್ನೆ

45 ಲಕ್ಷ ರೂಪಾಯಿ ವಾರ್ಷಿಕ ವೇತನದಲ್ಲಿದ್ದ ಟೆಕ್ಕಿ ಉದ್ಯೋಗ ಕಡಿತದಲ್ಲಿ ಜಾಬ್ ಕಳೆದುಕೊಂಡಿದ್ದಾರೆ. ಇದರ ನಡುವೆ ಜರ್ಮನಿಯಿಂದ 80 ಲಕ್ಷ ರೂಪಾಯಿ ವೇತನದ ಆಫರ್ ಬಂದಿದೆ. ಆದರೆ ಈ ಟೆಕ್ಕಿ ಒಪ್ಪಿಕೊಳ್ಳಬೇಕಾ, ಬೇಡ್ವಾ ಅನ್ನೋ ಗೊಂದಲದಲ್ಲಿದ್ದಾನೆ. ಉತ್ತಮ ವೇತನ ಬಂದರೂ ಮನಸ್ಸಿಲ್ಲದಿರುವುದು ಯಾಕೆ?

Read Full Story

05:50 PM (IST) Jul 02

ಕಳ್ಳ-ಕಾಕರಿಗೆ ಸ್ವರ್ಗವಾದ ಬೆಂಗಳೂರು; ಈ ವರ್ಷ 3325 ಕಳ್ಳತನ, 1 ಕೇಸಲ್ಲಿ ಮಾತ್ರ ಶಿಕ್ಷೆ!

ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ 35,832 ಕಳ್ಳತನ ಪ್ರಕರಣ ವರದಿಯಾಗಿದ್ದು, ಶಿಕ್ಷೆ ಪ್ರಮಾಣ ಕೇವಲ 0.44% ರಷ್ಟಿದೆ. 2025ರ ಮೇ ವರೆಗೆ 3,321 ಪ್ರಕರಣಗಳು ದಾಖಲಾಗಿದ್ದು, 1 ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಸಾಕ್ಷ್ಯಾಧಾರ ಕೊರತೆ, ದೂರುದಾರರ ನಿರಾಸಕ್ತಿಯಿಂದ ಶಿಕ್ಷೆ ಪ್ರಮಾಣ ಕುಸಿತವಾಗಿದೆ.

Read Full Story

05:37 PM (IST) Jul 02

ಇರಾನ್ ಮೇಲೆ ದಾಳಿ ಮಾಡಲು ಹೋದ ಬಿ-2 ಬಾಂಬರ್ ಜೆಟ್ ನಾಪತ್ತೆ, 10 ದಿನ ಕಳೆದ್ರೂ ಟ್ರಂಪ್‌ಗೆ ಅದು ಸಿಗುತ್ತಿಲ್ಲ!

ಇಸ್ರೇಲ್-ಇರಾನ್ ಯುದ್ಧದಲ್ಲಿ ಅಮೆರಿಕದ ಬಿ-೨ ಬಾಂಬರ್ ನಾಪತ್ತೆಯಾಗಿದೆ. ಇರಾನ್ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ನಂತರ ಈ ಜೆಟ್ ಕಾಣೆಯಾಗಿದೆ. ತಾಂತ್ರಿಕ ದೋಷದಿಂದಾಗಿ ಹವಾಯಿಯಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆಯೇ ಅಥವಾ ಇನ್ನೇನಾದರೂ ರಹಸ್ಯವಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
Read Full Story

05:35 PM (IST) Jul 02

ಈ ಬೋಜ್‌ಪುರಿ ನಟಿ ಬಗ್ಗೆ ಯಾಕಿಷ್ಟು ಕ್ರೇಜ್..? ಈ ಮಾದಕ ಕನ್ಯೆ ಫೋಟೋಗೆ ಬಾಯ್‌ ಬಾಯ್ಬಿಡೋ ಬಾಯ್ಸ್ !

ಭೋಜ್‌ಪುರಿ ನಟಿ ಆಕಾಂಕ್ಷಾ ಪುರಿ ತಮ್ಮ ಮುದ್ದು ಮರಿಯೊಂದಿಗೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಆಕೆಯ ಪ್ರಾಣಿ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕಾಂಕ್ಷಾ ಶೀಘ್ರದಲ್ಲೇ 'ಸೋ ಲಾಂಗ್ ವ್ಯಾಲಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Read Full Story

05:30 PM (IST) Jul 02

'ಬುರುಡೆ ಬಿಡೋದನ್ನ ಯಾವಾಗ ನಿಲ್ಲಿಸ್ತೀರಿ?' ಸಿಎಂ ಸಿದ್ಧರಾಮಯ್ಯಗೆ ಪ್ರಶ್ನೆ ಮಾಡಿದ ಕೇಂದ್ರ ಸಚಿವ ವಿ.ಸೋಮಣ್ಣ

ರೈಲ್ವೆ ಟಿಕೆಟ್‌ ದರ ಏರಿಕೆ ಕುರಿತು ಸಿಎಂ ಸಿದ್ದರಾಮಯ್ಯ ಅವರ ಟೀಕೆಗೆ ಕೇಂದ್ರ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಬೆಲೆ ಏರಿಕೆಗಳನ್ನು ಉಲ್ಲೇಖಿಸಿ, ಸೋಮಣ್ಣ 'ಬುರುಡೆ ಬಿಡುವುದನ್ನು ಯಾವಾಗ ನಿಲ್ಲಿಸುತ್ತೀರಿ' ಎಂದು ಪ್ರಶ್ನಿಸಿದ್ದಾರೆ. 

 

Read Full Story

05:23 PM (IST) Jul 02

ದಿನ 3 ಜಿಬಿ, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಉಚಿತ, ಏರ್ಟೆಲ್ 84 ವ್ಯಾಲಿಟಿಡಿ ಪ್ಲಾನ್ ಘೋಷಣೆ

ಏರ್‌ಟೆಲ್ ಇದೀಗ ಭರ್ಜರಿ ಆಫರ್ ಮೂಲಕ ಪ್ಲಾನ್ ಘೋಷಿಸಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿ ದಿನ 3 ಜಿಬಿ ಉಚಿತ ಡೇಟಾ, ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಸೇರಿದಂತೆ ಹಲವು ಸೌಲಭ್ಯವಿದೆ. ಕೈಗೆಟುಕುವ ದರದ ಈ ಪ್ಲಾನ್ ಡಿಟೇಲ್ ಇಲ್ಲಿದೆ.

Read Full Story

05:11 PM (IST) Jul 02

36 ರಿಂದ 26 ಸಾವಿರ ಅಡಿ ಎತ್ತರಕ್ಕೆ ಹಠಾತ್ ಕುಸಿದ ವಿಮಾನ - ಹೆದರಿ ವಿಮಾನದಲ್ಲೇ ವಿಲ್ ಬರೆದ ಪ್ರಯಾಣಿಕರು

ಅಹ್ಮದಾಬಾದ್‌ ವಿಮಾನ ದುರಂತದಿಂದ ನಾವಿನೂ ಹೊರಬಂದಿಲ್ಲ, ಅಷ್ಟರಲ್ಲಿ ಜಪಾನ್‌ನಲ್ಲಿ ಸಂಭವಿಸುತ್ತಿದ್ದ ಭಯಾನಕ ವಿಮಾನ ದುರಂತವೊಂದು ಕೂದೆಲೆಳೆ ಅಂತರದಿಂದ ತಪ್ಪಿ ಹೋಗಿದೆ. ಸಾವಿನ ಸಮೀಪ ಹೋಗಿ ಬಂದಂತಹ ಪ್ರಯಾಣಿಕರು ಆ ಭಯಾನಕ ಅನುಭವವನ್ನು ವಿವರಿಸಿದ್ದಾರೆ.

Read Full Story

05:04 PM (IST) Jul 02

ಡ್ರಗ್ಸ್ ಸೇವನೆ ವಿರುದ್ಧ ಕಾರ್ಯಕ್ರಮ ನಡೆಸಿದವನೇ ಪೆಡ್ಲರ್! 1.5 ಕೆಜಿ ಗಾಂಜಾ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್!

ಕಾಂಗ್ರೆಸ್ ನಡೆಸಿದ್ದ ಡ್ರಗ್ಸ್ ವಿರೋಧಿ ಕಾರ್ಯಕ್ರಮದಲ್ಲಿ ಸಚಿನ್ ಸಕ್ರಿಯವಾಗಿ ಭಾಗವಹಿಸಿದ್ದರು.

Read Full Story

04:46 PM (IST) Jul 02

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ, 1700 ಕೋಳಿಗಳ ಪೈಕಿ 700 ಸ್ಥಳದಲ್ಲೇ ಸಾವು, ಮುಗಿಬಿದ್ದ ಜನ!

ಸಾಗರ ತಾಲೂಕಿನ ಮುಂಬಾಳು ಕೆರೆ ಬಳಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 700 ಕೋಳಿಗಳು ಸಾವನ್ನಪ್ಪಿವೆ. ಬಸ್ಸಿಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
Read Full Story

04:25 PM (IST) Jul 02

ಉದ್ಯೋಗಸ್ಥ ತಾಯಂದಿರ ತಪ್ಪಿತಸ್ಥ ಭಾವನೆಗೆ ಮುಕ್ತಿ ನೀಡುವ 4 ವೈದ್ಯರ ಸಲಹೆಗಳು!

ಉದ್ಯೋಗಸ್ಥ ತಾಯಂದಿರು ತಮ್ಮ ಮಕ್ಕಳಿಗೆ ಸಮಯ ಕೊಡುತ್ತಿಲ್ಲ ಎಂಬ ತಪ್ಪಿತಸ್ಥ ಭಾವನೆಯಿಂದ ಹೊರಬರಲು ಡಾ. ಮಿಚೆಲ್ ಶಾ ಕೆಲವು ಸಲಹೆಗಳನ್ನು ನೀಡಿದ್ದಾರೆ. ದೃಷ್ಟಿಕೋನ ಬದಲಿಸುವುದು, ಸಹಾಯ ಪಡೆಯುವುದು, ಡಿಜಿಟಲ್ ಜಾಗವನ್ನು ಸ್ವಚ್ಛಗೊಳಿಸುವುದು ಮತ್ತು ಸ್ವ-ಕರುಣೆ ಮುಖ್ಯ ಎನ್ನುತ್ತಾರೆ.
Read Full Story

04:15 PM (IST) Jul 02

ದಾವಣಗೆರೆ ಬಿಜೆಪಿ ಮುಖಂಡರಿಂದ ಗಂಭೀರ ಆರೋಪ; ಮಾಜಿ ಸಚಿವ ರೇಣುಕಾಚಾರ್ಯ ಉಚ್ಚಾಟನೆಗೆ ಒತ್ತಾಯ!

ಹೊನ್ನಾಳಿ ಕ್ಷೇತ್ರದ ಬಿಜೆಪಿ ನಾಯಕರು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ರೇಣುಕಾಚಾರ್ಯ ಕಾರಣ ಎಂದು ಆರೋಪಿಸಿ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
Read Full Story

04:06 PM (IST) Jul 02

ಬಿಗ್ ಸೀಕ್ರೆಟ್ ರಿವೀಲ್ ಆಗೋಯ್ತು, 'ಡಿಜಾಂಗೋ ಕೃಷ್ಣಮೂರ್ತಿ' ಆಗ್ಬಿಟ್ಟ ಗೋಲ್ಡನ್ ಸ್ಟಾರ್ ಗಣೇಶ್..!

ಬಹು ನಿರೀಕ್ಷಿತ ಹಾಗೂ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ‌‌.

 

Read Full Story

04:00 PM (IST) Jul 02

'ಕಂಡ ಕಂಡ ಅಧಿಕಾರಿಗಳೆಲ್ಲಾ ಟೇಕ್‌ಡೌನ್‌ ಆರ್ಡರ್‌ ನೀಡ್ತಿದ್ದಾರೆ..' ಕರ್ನಾಟಕ ಹೈಕೋರ್ಟ್‌ ಎದುರು ಹೇಳಿದ ಎಲಾನ್‌ ಮಸ್ಕ್‌!

ಎಲಾನ್ ಮಸ್ಕ್‌ರ ಎಕ್ಸ್, 'ಟಾಮ್, ಡಿಕ್ & ಹ್ಯಾರಿ ಅಧಿಕಾರಿಗಳು' ಹೊರಡಿಸುವ ಟೇಕ್‌ಡೌನ್‌ ಆದೇಶಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಹೋರಾಡುತ್ತಿದೆ. ಸೂಕ್ತ ಪ್ರಕ್ರಿಯೆಯನ್ನು ಬೈಪಾಸ್ ಮಾಡುವ ಮತ್ತು ಆನ್‌ಲೈನ್‌ನಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಆದೇಶಗಳನ್ನು ಪ್ರಶ್ನಿಸಿದೆ.
Read Full Story

03:49 PM (IST) Jul 02

ವಿದ್ಯಾರ್ಥಿ ಮೇಲೆ ಸ್ಟಾರ್‌ ಹೊಟೇಲ್‌ಗಳಲ್ಲಿ ವರ್ಷಗಳ ಕಾಲ ಬಲತ್ಕಾರ - ಪ್ರತಿಷ್ಠಿತ ಶಾಲೆಯ ಶಿಕ್ಷಕಿ ಬಂಧನ

ಮುಂಬೈನ ಪ್ರತಿಷ್ಠಿತ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿದ್ದು, ಇದು ನಗರವನ್ನು ಬೆಚ್ಚಿ ಬೀಳಿಸಿದೆ. 

Read Full Story

03:24 PM (IST) Jul 02

ಕೇರಳ ಪ್ರವಾಸೋದ್ಯಮ ಇಲಾಖೆಯಿಂದ ಬ್ರಿಟಿಷ್ ಫೈಟರ್ ಜೆಟ್ ಟ್ರೋಲ್, ಹೊಸ ಜಾಹೀರಾತು ವೈರಲ್

ಇಂಧನ ಸಮಸ್ಯೆ ಎಂದು ಕೇರಳದಲ್ಲಿ ಬಂದಿಳಿದ ಬ್ರಿಟಿಷ್ ಫೈಟರ್ ಜೆಟ್, ಬಳಿಕ ತಾಂತ್ರಿಕ ಸಮಸ್ಯೆ ಸೇರಿದಂತೆ ಹಲವು ಕಾರಣ ನೀಡಿ ಕೇರಳದಲ್ಲೇ ಠಿಕಾಣಿ ಹೂಡಿದೆ.   ಕೇರಳ ಪ್ರವಾಸೋದ್ಯಮ ಇಲಾಖೆಯೂ ಈ ಫೈಟರ್ ಜೆಟ್ ಟ್ರೋಲ್ ಮಾಡಿದೆ. ಈ ಜಾಹೀರಾತು ಭಾರಿ ವೈರಲ್ ಆಗಿದೆ.

Read Full Story

03:00 PM (IST) Jul 02

ಟಾಯ್ಲೆಟಲ್ಲಿ 30ಕ್ಕೂ ಅಧಿಕ ಮಹಿಳಾ ಉದ್ಯೋಗಿಯ ವಿಡಿಯೋ ರೆಕಾರ್ಡ್‌, ಇನ್ಫೋಸಿಸ್‌ ಉದ್ಯೋಗಿ ಅರೆಸ್ಟ್‌!

ಬೆಂಗಳೂರಿನ ಇನ್ಫೋಸಿಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಉದ್ಯೋಗಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ.
Read Full Story

More Trending News