Published : Nov 25, 2025, 06:48 AM ISTUpdated : Nov 25, 2025, 11:58 PM IST

Karnataka News Live: ಉಡುಪಿ ಭೇಟಿ ವೇಳೆ ಪ್ರಧಾನಿ ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಡಿಸಿ ಸೂಚನೆ

ಸಾರಾಂಶ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಹಿರಿಯ ನಾಯಕ ದೇವೇಗೌಡರ ಮಾತಿಗೆ ನಾನು ಕೌಂಟರ್ ಕೊಡಲು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ಪತನ ಆಗಲು ಮೂಲಕಾರಣ ಡಿ.ಕೆ.ಶಿವಕುಮಾರ್‌. ಅವರು ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರ ಕೆಡವಿದೆ. ನನ್ನ ಜೊತೆಗೆ ಮಿತ್ರ ಮಂಡಳಿ ಕೂಡ ಇತ್ತು. ಈಗ ಏನಾಗುತ್ತೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

 

11:58 PM (IST) Nov 25

ಉಡುಪಿ ಭೇಟಿ ವೇಳೆ ಪ್ರಧಾನಿ ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಡಿಸಿ ಸೂಚನೆ

ಉಡುಪಿ ಭೇಟಿ ವೇಳೆ ಪ್ರಧಾನಿ ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಡಿಸಿ ಸೂಚನೆ ನೀಡಿದ್ದಾರೆ. ಇದೇ ವೇಳೆ ಮೋದಿ ಸಂಚರಿಸು ಮಾರ್ಗಗಳಲ್ಲೂ ನಿರ್ಬಂಧ ಹೇರಲಾಗಿದೆ. ಜಿಲ್ಲಾಧಿಕಾರಿ ಆದೇಶದಲ್ಲಿ ಯಾವೆಲ್ಲಾ ನಿರ್ಬಂಧ ಹೇರಲಾಗಿದೆ?

Read Full Story

11:18 PM (IST) Nov 25

ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು

ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು ಮಾಡಲಾಗಿದೆ. ಓರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story

10:47 PM (IST) Nov 25

ರೊಟ್ಟಿ ವ್ಯಾಪಾರ ಮಾಡಿ ಮಹಾಂತೇಶ್ ಬೀಳಗಿ ಸಾಕಿದ್ದ ತಾಯಿ, IAS ಅಧಿಕಾರಿ ಹುಟ್ಟೂರಿನಲ್ಲಿ ನೀರವ ಮೌನ

ರೊಟ್ಟಿ ವ್ಯಾಪಾರ ಮಾಡಿ ಮಹಾಂತೇಶ್ ಬೀಳಗಿ ಸಾಕಿದ್ದ ತಾಯಿ, IAS ಅಧಿಕಾರಿ ಹುಟ್ಟೂರಿನಲ್ಲಿ ನೀರವ ಮೌನ, ಅಪಘಾತದಲ್ಲಿ ಮೃತಪಟ್ಟ ಮಹಾಂತೇಶ್ ಬೀಳಗಿ ಬದುಕೇ ಒಂದು ಸ್ಪೂರ್ತಿ, ಒಂದು ಹೊತ್ತಿನ ಊಟಕ್ಕೂ ಪರಡಾಡುತ್ತಿದ್ದ ಕುಟುಂಬದಿಂದ ಬಂದು ಉನ್ನತ ಸ್ಥಾನಕ್ಕೇರಿದ್ದರು.

Read Full Story

09:19 PM (IST) Nov 25

ರಾಜ್ಯಕ್ಕೆ ಆಘಾತ ನೀಡಿದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು, ಸಿಎಂ ಸೇರಿ ಹಲವರಿಂದ ಸಂತಾಪ

ರಾಜ್ಯಕ್ಕೆ ಆಘಾತ ನೀಡಿದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು, ಸಿಎಂ ಸೇರಿ ಹಲವರಿಂದ ಸಂತಾಪ, ಜೇವರ್ಗಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮಹಾಂತೇಶ ಬೀಳಗಿ ಮೃತಪಟ್ಟಿದ್ದಾರೆ. ಇವರ ಜೊತೆ ಸೋದರ ಸಂಬಂಧಿಗಳು ಮೃತಪಟ್ಟಿದ್ದಾರೆ.

Read Full Story

08:46 PM (IST) Nov 25

ನವೆಂಬರ್ 28ಕ್ಕೆ ಉಡುಪಿ ಜಿಲ್ಲೆಯ ಮೂರು ಠಾಣಾ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಣೆ

ನವೆಂಬರ್ 28ಕ್ಕೆ ಉಡುಪಿ ಜಿಲ್ಲೆಯ ಮೂರು ಠಾಣಾ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಅಂಗನವಾಡಿಯಿಂದ ಹಿಡಿದು ಪ್ರೌಢಶಾಲೆ ವರೆಗೆ ರಜೆ ನೀಡಲಾಗಿದೆ.

Read Full Story

08:00 PM (IST) Nov 25

ಭೀಕರ ಅಪಘಾತದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಸಾವು

ಭೀಕರ ಅಪಘಾತದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಸಾವು, ತೀವ್ರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಂತಾಜನಕ ಸ್ಥಿತಿಯಲ್ಲಿ ಬೀಳಗಿ ಮೃತಪಟ್ಟಿದ್ದಾರೆ.

Read Full Story

07:31 PM (IST) Nov 25

ಕೆಟ್ಟುನಿಂತ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಡ್ರಾಪ್, ರ‍್ಯಾಪಿಡೋ ಚಾಲಕನ ಹೊಗಳಿದ ಬೆಂಗಳೂರು ಮಹಿಳೆ

ಕೆಟ್ಟುನಿಂತ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಡ್ರಾಪ್, ರ‍್ಯಾಪಿಡೋ ಚಾಲಕನ ಹೊಗಳಿದ ಬೆಂಗಳೂರು ಮಹಿಳೆ , ಮಹಿಳೆ ಮನೆ ತಲುಪುವಷ್ಟರಲ್ಲಿ ರಾತ್ರಿ 1 ಗಂಟೆ. ಆದರೆ ಸುರಕ್ಷಿವಾಗಿ ಮನೆ ತಲುಪಿದ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ನಡೆದ ಘಟನೆ ಹೇಳಿದ್ದಾಳೆ.

 

Read Full Story

06:27 PM (IST) Nov 25

ಧರ್ಮಧ್ವಜ ಏರಿಸುವ ವೇಳೆ ಮೋದಿ ಕೈಗಳು ನಡುಗಿದ್ಯಾಕೆ?

ಅಯೋಧ್ಯೆ ರಾಮ ಮಂದಿರದ ಶಿಖರದಲ್ಲಿ ಧರ್ಮ ಧ್ವಜ ಹಾರಿಸುವಾಗ ಪ್ರಧಾನಿ ಮೋದಿಯವರ ಕೈಗಳು ನಡುಗಿದವು. ಇದನ್ನು ಹಿಂದೂ ಧರ್ಮದಲ್ಲಿ 'ಸಾತ್ವಿಕ ಭಾವ' ಎನ್ನಲಾಗಿದ್ದು, ಇದು ಅವರ ಪರಮ ಭಕ್ತಿ ಮತ್ತು ಭಾವನಾತ್ಮಕ ಉತ್ತುಂಗವನ್ನು ಪ್ರದರ್ಶಿಸಿತು.

Read Full Story

06:22 PM (IST) Nov 25

ವಿದ್ಯಾರ್ಥಿನಿಗೆ I Love You ಮೆಸೇಜ್, 2 ವರ್ಷ ಬಳಿಕ ಉಪನ್ಯಾಸಕನ ವಿರುದ್ಧ ಕೊಟ್ಟ ದೂರಿನಿಂದ ಹೈಡ್ರಾಮ

ವಿದ್ಯಾರ್ಥಿನಿಗೆ I Love You ಮೆಸೇಜ್, 2 ವರ್ಷ ಬಳಿಕ ಉಪನ್ಯಾಸಕನ ವಿರುದ್ಧ ಕೊಟ್ಟ ದೂರಿನಿಂದ ಹೈಡ್ರಾಮ ಸೃಷ್ಟಿಯಾಗಿದೆ. 2 ವರ್ಷಗಳ ಹಿಂದೆ ಉಪನ್ಯಾಸ ಮಾಡಿದ್ದ ಮೆಸೇಜ್‌ಗ ಈಗ ದೂರು ನೀಡಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Read Full Story

06:11 PM (IST) Nov 25

ಸ್ಯಾಂಡಲ್​ವುಡ್​ ಸ್ಟಾರ್​ ನಟರೆಲ್ಲಾ ಒಂದೇ ಫ್ರೇಮ್​ನಲ್ಲಿ ಇದ್ರೆ ಹೇಗಿರತ್ತೆ? ಫ್ಯಾನ್ಸ್​ ಕನಸು ನನಸಾದ ಕ್ಷಣದ ಫೋಟೋಗಳು

ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ಯಶ್, ಸುದೀಪ್, ದರ್ಶನ್, ಮತ್ತು ಉಪೇಂದ್ರರಂತಹ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

05:31 PM (IST) Nov 25

Bigg Boss - ಗಿಲ್ಲಿ ನಟ- ಅಶ್ವಿನಿ ಗೌಡ ಜೋಡಿ ಬಗ್ಗೆ ಧನುಷ್ ಹೇಳಿಕೆ! ಗಿಲ್ಲಿ ಫ್ಯಾನ್ಸ್​ ಕೆಂಡಾಮಂಡಲ - ಹೇಳಿದ್ದೇನು?

ಬಿಗ್ ಬಾಸ್ 12 ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಸಂಬಂಧದ ಬಗ್ಗೆ ಧನುಷ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಗಿಲ್ಲಿಗೆ ಕಂಟೆಂಟ್ ಹಾಗೂ ಮೈಲೇಜ್‌ಗಾಗಿ ಅಶ್ವಿನಿ ಬೇಕು ಎಂದು ಕಾವ್ಯಾ ಬಳಿ ಹೇಳಿದ್ದು, ಇದು ಗಿಲ್ಲಿ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

05:21 PM (IST) Nov 25

ಕನ್ನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರಾಕರಣೆ ಆದೇಶಕ್ಕೆ ತಡೆ, ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್

ಕನ್ನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರಾಕರಣೆ ಆದೇಶಕ್ಕೆ ತಡೆ, ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್, ಜಿಲ್ಲಾಧಿಕಾರಿ ವಿಧಿಸಿದ್ದ ನಿರ್ಬಂಧ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ತೆರವು ಮಾಡಿದೆ.

Read Full Story

04:55 PM (IST) Nov 25

Karna - ನಿಧಿ ಜೊತೆ ಬೆಡ್​ ಮೇಲೆ ಸಿಕ್ಕಿಬಿದ್ದ ಕರ್ಣ! ಗುಟ್ಟು ರಿವೀಲ್​ ಆಗತ್ತಾ? ನಿತ್ಯಾ ನಡೆ ಏನು?

ಕರ್ಣನ ತಮ್ಮ ಮತ್ತು ಅಪ್ಪ ಸೇರಿ ನಿಧಿ ಮತ್ತು ಕರ್ಣನನ್ನು ಸಿಕ್ಕಿಹಾಕಿಸಲು ಪ್ಲ್ಯಾನ್ ಮಾಡುತ್ತಾರೆ. ನೋಟ್ಸ್ ಸುಟ್ಟುಹೋದಾಗ ಸಮಾಧಾನ ಮಾಡಲು ಬಂದ ಕರ್ಣ, ತಿಳಿಯದೆ ನಿಧಿಯ ಕೋಣೆಯಲ್ಲೇ ಮಲಗಿಬಿಡುತ್ತಾನೆ. ಇದನ್ನೇ ಅಸ್ತ್ರವಾಗಿಸಿಕೊಂಡು ಮನೆಯವರೆಲ್ಲರ ಮುಂದೆ ಇಬ್ಬರನ್ನೂ ದೋಷಿಗಳನ್ನಾಗಿ ನಿಲ್ಲಿಸಲಾಗುತ್ತದೆ.
Read Full Story

04:50 PM (IST) Nov 25

Shivamogga - ಮದುವೆಯಾದ ಏಳೇ ತಿಂಗಳಿಗೆ ಗಂಡನ ಮನೆಯವರ ಹಿಂಸೆ ತಾಳಲಾರದೆ ನಾಲೆಗೆ ಹಾರಿದ ಗೃಹಿಣಿ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ, ಗಂಡನ ಮನೆಯವರ ಕಿರುಕುಳದಿಂದ ನೊಂದ ಲತಾ ಎಂಬ ನವವಿವಾಹಿತೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತಿ ಗುರುರಾಜ್ ಸೇರಿದಂತೆ ಐದು ಮಂದಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಪೊಲೀಸರು ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.
Read Full Story

04:25 PM (IST) Nov 25

Amrthadhdaare - ಇದೇನಾಗೋಯ್ತು? ವಿಲನ್​ ಜೈದೇವ್​ ಕೈಯಲ್ಲಿ ಸಿಕ್ಕಿಬಿದ್ದ ಆಕಾಶ್​, ಮಿಂಚು- ಮುಂದೇನು?

ಕೋಟಿ ಕೋಟಿ ಆಸ್ತಿಗಾಗಿ ಕಾನೂನಿನ ತೊಡಕಿನಲ್ಲಿ ಸಿಲುಕಿರುವ ಜೈದೇವ್, ಪ್ರಾಪರ್ಟಿ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕಿಕೊಂಡು ಮಾಲ್‌ಗೆ ಬರುತ್ತಾನೆ. ಅಲ್ಲಿ ಮಕ್ಕಳೊಂದಿಗೆ ಇರುವ ಮಲ್ಲಿ, ಅಡಗಿಕೊಳ್ಳುತ್ತಾಳೆ. ಆದರೆ ಜೈದೇವ್, ಮಕ್ಕಳ ಬಳಿಯೇ ಮಲ್ಲಿಯ ಫೋಟೋ ತೋರಿಸಿ ವಿಚಾರಿಸುತ್ತಾನೆ.

Read Full Story

04:17 PM (IST) Nov 25

ದರ್ಶನ್‌ಗೆ ರೌಡಿಗಳ ಕಾಟ..! ವೈರಲ್ ವಿಡಿಯೋ ಹಿಂದೆ ಗುಬ್ಬಚ್ಚಿ ಸೀನ & ನಾಗನ ನೆರಳು..?

ಈ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರ್ತಡೇ ಆಚರಿಸಿಕೊಂಡಿದ್ದ ಗುಬ್ಬಚ್ಚಿ ಸೀನನನ್ನೂ ಬೆಳಗಾವಿಗೆ ಎತ್ತಂಗಡಿ ಮಾಡಲಾಗಿತ್ತು. ಈಗ ಅದೇ ಸೀನ್ ಅಂಡ್ ನಾಗ ಸೇರಿ ಪರಪ್ಪನ ಅಗ್ರಹಾರ ವಿಡಿಯೋ ವೈರಲ್ ಮಾಡಿದ್ದಾರೆ ಅನ್ನೋ ಆರೋಪ ಬಂದಿದೆ. ಇವರು ದರ್ಶನ್​ಗಾಗಿ ಇದನ್ನ ಮಾಡಿದ್ರಾ?  ತನಿಖೆ ನಡೀತಾ ಇದೆ.

Read Full Story

02:57 PM (IST) Nov 25

BBK 12 - ಮಾಜಿ ಸ್ಪರ್ಧಿಗಳಿಂದ ಗಿಲ್ಲಿಗೆ ಖಡಕ್ ವಾರ್ನಿಂಗ್; ಬಿಟ್ಟಿ ಕಾಮಿಡಿಗೆ ಕೆಂಡವಾದ ರಜತ್?

ಬಿಗ್‌ಬಾಸ್ ಮನೆಯು 'ಬಿಬಿ ಪ್ಯಾಲೇಸ್' ಎಂಬ ರೆಸ್ಟೋರೆಂಟ್ ಆಗಿ ಬದಲಾಗಿದ್ದು, ಸೀಸನ್ 11ರ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಟಾಸ್ಕ್‌ನಲ್ಲಿ, ಗಿಲ್ಲಿ ನಟನ ಮಾತುಗಳಿಂದಾಗಿ ಉಗ್ರಂ ಮಂಜು ಮತ್ತು ರಜತ್ ಕೋಪಗೊಂಡು ಖಡಕ್ ಎಚ್ಚರಿಕೆ ನೀಡಿದ್ದಾರೆ.
Read Full Story

01:57 PM (IST) Nov 25

ಜೆನ್ನಿಫರ್ ಲೋಪೆಜ್ ಪರ್ಫಾರ್ಮೆನ್ಸ್‌ನಿಂದ ರಂಗೇರಿದ ಆ ಮದುವೆ.. ಎಲ್ಲರ ಕಣ್ಣು ರಾಮ್ ಚರಣ್ ಮೇಲೆ!

ಪ್ರಸಿದ್ಧ ಫಾರ್ಮಾ ದಿಗ್ಗಜ ರಾಮ ರಾಜು ಮಂತೇನಾ ಅವರ ಪುತ್ರಿ ನೇತ್ರಾ ಮಂತೇನಾ ಅವರ ವಿವಾಹ ಸಮಾರಂಭದಲ್ಲಿ ರಾಮ್ ಚರಣ್ ವಿಶೇಷ ಆಕರ್ಷಣೆಯಾಗಿದ್ದರು. ಜೆನ್ನಿಫರ್ ಲೋಪೆಜ್ ತಮ್ಮ ಡ್ಯಾನ್ಸ್ ಪರ್ಫಾರ್ಮೆನ್ಸ್‌ನಿಂದ ಎಲ್ಲರನ್ನೂ ರಂಜಿಸಿದರು.

Read Full Story

01:12 PM (IST) Nov 25

'ಇನ್ನೆರಡು ದಿನದಲ್ಲಿ ಡಿಕೆಶಿ ಸಿಎಂ ಆಗ್ಬೇಕು, ಇಲ್ಲದೇ ಇದ್ರೆ...' ಸ್ವಾಮೀಜಿ ಸ್ಪೋಟಕ ಹೇಳಿಕೆ

ಮೈಸೂರಿನಲ್ಲಿ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಹಗತಿಗಳ ಪ್ರಕಾರ, ಇನ್ನೆರಡು ದಿನಗಳಲ್ಲಿ ಡಿಕೆಶಿ ಸಿಎಂ ಆಗಬೇಕು, ಇಲ್ಲದಿದ್ದರೆ ಈ ಜನ್ಮದಲ್ಲಿ ಆ ಯೋಗವಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
Read Full Story

12:55 PM (IST) Nov 25

ಬ್ಲೂ ಫಿಲ್ಮ್ ಕೇಸ್‌ನಲ್ಲಿ ಸುಮನ್‌ಗೆ ಬೆಂಬಲ ನೀಡಿದ ಇಬ್ಬರು ನಟಿಯರು ಯಾರು? ಹೀರೋ ಬಿಚ್ಚಿಟ್ಟ ಸತ್ಯವೇನು?

ಹೀರೋ ಸುಮನ್ ಬ್ಲೂ ಫಿಲ್ಮ್ ಕೇಸ್‌ನಲ್ಲಿ ತುಂಬಾ ಕಷ್ಟಪಟ್ಟಿದ್ದರು. ಜೈಲಿಗೆ ಹೋಗಿ.. ಹೊರಗೆ ಬಂದು.. ಮೂರು ವರ್ಷಗಳ ಕಾಲ ಕೇಸ್ ಎದುರಿಸಿದ್ದರು. ಈ ಕೇಸ್ ವಿಚಾರದಲ್ಲಿ ಇಡೀ ಚಿತ್ರರಂಗವೇ ಸುಮ್ಮನಿದ್ದಾಗ ಸುಮನ್ ಪರವಾಗಿ ಮಾತನಾಡಿದ ಆ ಇಬ್ಬರು ನಟಿಯರು ಯಾರು ಗೊತ್ತಾ?

Read Full Story

12:23 PM (IST) Nov 25

ರಾಜ್ಯದ ಯೋಜನೆಗಳಿಗೆ ಕೇಂದ್ರ ತನ್ನ ಬೆನ್ನುತಟ್ಟಿಕೊಳ್ಳುವುದು ಹೊಸದೇನಲ್ಲ - ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನೂ ಅಲ್ಲ ಎಂದು ಪಂಚಾಯತ್ ರಾಜ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

Read Full Story

12:16 PM (IST) Nov 25

ವರ್ತೂರು ಸಂತೋಷ್​ ಘೋಷಿಸಿರೋ 10 ಲಕ್ಷ ಬಹುಮಾನ ಪಡೆಯುವ Bigg Boss 12 ಸ್ಪರ್ಧಿ ಯಾರು? ಷರತ್ತೇನು?

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ಮುಂಬರುವ ಬಿಗ್​ಬಾಸ್​ 12ರ ಎರಡನೇ ರನ್ನರ್​ ಅಪ್​ಗೆ 10 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಈ ಹಣವನ್ನು ಬಿಗ್​ಬಾಸ್​ ವೇದಿಕೆಯಲ್ಲೇ ನೀಡಲು ಅವಕಾಶ ನೀಡಬೇಕೆಂಬ ಷರತ್ತು ವಿಧಿಸಿದ್ದು, ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
Read Full Story

12:04 PM (IST) Nov 25

ಬೆಂಗಳೂರು - ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಯುವಕನ ಕೊ*ಲೆ!

ಬೆಂಗಳೂರಿನ ಯಶವಂತಪುರದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ 32 ವರ್ಷದ ನರಸಿಂಹರಾಜು ಎಂಬ ಯುವಕನನ್ನು ನಡುರಸ್ತೆಯಲ್ಲಿ ಥಳಿಸಿ ಕೊಲೆ ಮಾಡಲಾಗಿದೆ. ಮಹಿಳೆಯ ಕುಟುಂಬಸ್ಥರು ಈ ಕೃತ್ಯ ಎಸಗಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read Full Story

11:50 AM (IST) Nov 25

ಹೆಣ್ಣು ಬೆ*ತ್ತಲೆಯಾಗಿ ನಿಂತಿದ್ದರೂ ಆಕೆಯನ್ನು ಕಣ್ಣೆತ್ತಿ ನೋಡಬಾರದು - ನಟಿ ನಿಶ್ವಿಕಾ ನಾಯ್ಡು ಗರಂ

ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಬ್ಯಾಕ್‌ಲೆಸ್‌ ಡೀಪ್‌ ಕಟ್‌ ಗೌನ್‌ ಧರಿಸಿ ಬಂದಿದ್ದರು. ಅದನ್ನು ಕಿಡಿಗೇಡಿಯೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ವೀಡಿಯೋ ಮಾಡಿ ಹಂಚಿಕೊಂಡಿದ್ದ. ಇದು ವೈರಲ್‌ ಆಗಿತ್ತು.

Read Full Story

11:50 AM (IST) Nov 25

ಅಶ್ವಿನಿ ಗೌಡರನ್ನು ಹೊಗಳುತ್ತಲೇ Bigg Boss 12 ವಿನ್ನರ್​ ಯಾರೆಂದು ಘೋಷಿಸಿಯೇ ಬಿಟ್ಟ ರಿಷಾ ಗೌಡ

ಬಿಗ್​ಬಾಸ್​ 12 ಮನೆಯಿಂದ ಎಲಿಮಿನೇಟ್​ ಆಗಿ ಹೊರಬಂದಿರುವ ರಿಷಾ ಗೌಡ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಶ್ವಿನಿ ಗೌಡರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ ಅವರು, ತಮ್ಮ ಪ್ರಕಾರ ಟಾಪ್-5 ಸ್ಪರ್ಧಿಗಳು ಯಾರು ಮತ್ತು ಈ ಬಾರಿ ಗಿಲ್ಲಿ ನಟ ವಿನ್ನರ್ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
Read Full Story

11:32 AM (IST) Nov 25

ನಾನೂ ಕೂಡ ಐದು ಬಾರಿ ಶಾಸಕ.. ಸಂಪುಟ ವಿಸ್ತರಣೆ ವೇಳೆ ನನಗೂ ಸಚಿವ ಸ್ಥಾನ ನೀಡಿ - ಶಾಸಕ ರಾಜು ಕಾಗೆ

ಉತ್ತರ ಕರ್ನಾಟಕದಲ್ಲಿ ಹಿರಿಯ ಶಾಸಕನಾಗಿದ್ದು, ನಾನೂ ಸಚಿವಾಕಾಂಕ್ಷಿಯಾಗಿದ್ದೇನೆ. ಸಂಪುಟ ವಿಸ್ತರಣೆ ಸಮಯದಲ್ಲಿ ನನಗೂ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಈಗಾಗಲೇ ಆಗ್ರಹಿಸಿರುವೆ ಎಂದು ಶಾಸಕ ರಾಜು ಕಾಗೆ ಹೇಳಿದರು.

Read Full Story

11:20 AM (IST) Nov 25

ರಾಜ್ಯದಲ್ಲಿ 10 ಕಡೆ ಲೋಕಾಯುಕ್ತ ದಾಳಿ, ಕಂಡ ಕಂಡಲೆಲ್ಲಾ ಚಿನ್ನ, ಬೆಳ್ಳಿ ಹಣ ಪತ್ತೆ

ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸಗಳಿಂದ ಲಕ್ಷಾಂತರ ರೂಪಾಯಿ ನಗದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.

Read Full Story

11:18 AM (IST) Nov 25

ಮೆಕ್ಕೆಜೋಳ ದರ ಕುಸಿತವಾದರೂ ಸ್ಪಂದಿಸದ ಸರ್ಕಾರ - ಮಾಜಿ ಸಚಿವ ಬಿ.ಸಿ. ಪಾಟೀಲ್

ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯುತ್ತಿಲ್ಲ. ದಿನೇ ದಿನೇ ರೈತ ಸಮೂದಾಯ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಕಾಂಗ್ರೆಸ್ ಸರ್ಕಾರವು ರೈತರ ಸಂಕಷ್ಟಕ್ಕೂ ಕಿವಿಗೊಡದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದರು.

Read Full Story

11:17 AM (IST) Nov 25

Bigg Boss Kannada 12 - ಗಿಲ್ಲಿಗೆ ಅಶ್ವಿನಿ ಕೊಟ್ರು ಚಮಕ್! ರಾಜಮಾತೆ ಗಿಮಿಕ್‌ಗೆ ಗಪ್‌ಚುಪ್!

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ಮಾತಿನ ಸಮರ ಮುಂದುವರೆದಿದೆ. ತನ್ನನ್ನು 'ವಂಶದ ಕುಡಿ' ಎಂದು ಕರೆದಿದ್ದ ಗಿಲ್ಲಿ ನಟರನ್ನೇ ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡಿದ್ದಕ್ಕೆ, ಅಶ್ವಿನಿ ಗೌಡ ಗಿಲ್ಲಿಗೆ ಅವರದೇ ರೀತಿಯಲ್ಲಿ ಮಾತನಾಡಿ ಚಮಕ್ ನೀಡಿದ್ದಾರೆ.

Read Full Story

10:45 AM (IST) Nov 25

ಅಂಡರ್‌ ವಲ್ಡ್‌ಗೂ ಕ್ಯಾರೇ ಅನ್ನುತ್ತಿರಲಿಲ್ಲ ಧರ್ಮೇಂದ್ರ - ಡ್ರೀಮ್‌ ಗರ್ಲ್‌ ಜತೆ 2ನೇ ವಿವಾಹ ಆಗಿದ್ದೇಕೆ?

ಅಂಡರ್‌ವಲ್ಡ್‌ನಿಂದ ಯಾವುದೇ ಕರೆ ಬಂದರೂ ಸಿನಿಮಾ ಮಂದಿ ನಡುಗುತ್ತಿದ್ದ ಹೊತ್ತಿನಲ್ಲಿ ಧರ್ಮೇಂದ್ರ ಅದಕ್ಕೆಲ್ಲ ಕ್ಯಾರೇ ಅನ್ನುತ್ತಿರಲಿಲ್ಲ. ಒಂದು ಬಾರಿ ಧರ್ಮೇಂದ್ರ ಅವರಿಗೂ ಅಂಡರ್‌ ವಲ್ಡ್‌ನಿಂದ ಕರೆ ಬಂದಿತ್ತಂತೆ.

Read Full Story

10:10 AM (IST) Nov 25

ಬಾಲಿವುಡ್ ಹೀಮ್ಯಾನ್‌ ಧರ್ಮೇಂದ್ರಗೂ ರಾಮನಗರಕ್ಕೂ ನಂಟು ಬೆಸೆದ ಶೋಲೆ - ಮರೆಯಲಾಗದ ಪ್ರಯಾಣ

70 - 80ರ ದಶಕದಲ್ಲಿ ನಿರ್ಮಾಣಗೊಂಡ ‘ಶೋಲೆ’ ಸಿನಿಮಾದಲ್ಲಿ ನಟ ಧರ್ಮೇಂದ್ರ ‘ವೀರು’ ಪಾತ್ರದಲ್ಲಿ ಅಭಿನಯಿಸಿದ್ದರು. ವಿಶೇಷ ಎಂದರೆ ಈ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿತ್ತು.

Read Full Story

09:42 AM (IST) Nov 25

BBK 12 - ಜಾನ್ವಿ-ಅಶ್ವಿನಿ ಗೌಡ ಸ್ನೇಹದ ಬಗ್ಗೆ ಇದೆಂಥಾ ಮಾತು? ಧ್ರುವಂತ್ ಸ್ಫೋಟಕ ವಿಶ್ಲೇಷಣೆ!

ಬಿಗ್‌ಬಾಸ್ ಮನೆಯಲ್ಲಿ, ಗಾರ್ಡನ್ ಏರಿಯಾದಲ್ಲಿ ಗಿಲ್ಲಿ ನಟನ ಬಳಿ ಧ್ರುವಂತ್ ಅವರು ಜಾನ್ವಿ ಮತ್ತು ಅಶ್ವಿನಿ ಗೌಡರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಧ್ರುವಂತ, 'ದೊಡ್ಡವನು' ಮತ್ತು 'ಚಿಕ್ಕವನು' ಎಂಬ ಕೋಡ್ ವರ್ಡ್ ಬಳಸಿ ಗಿಲ್ಲಿ ಜೊತೆ ಚರ್ಚಿಸಿದ್ದಾರೆ.

Read Full Story

09:39 AM (IST) Nov 25

ರೈಲ್ವೆ ಗುಮಾಸ್ತನಿಂದ ಆ್ಯಕ್ಷನ್‌ ಹೀರೋ ತನಕ - ಡಾ.ರಾಜ್‌ರ ‘ಗಂಧದ ಗುಡಿ’ರೀಮೇಕ್ ಮಾಡಿದ್ದ ಧರ್ಮೇಂದ್ರ

ಚಿತ್ರರಂಗಕ್ಕೆ ಬರುವ ಮುನ್ನ ರೈಲ್ವೆ ಇಲಾಖೆಯಲ್ಲಿ ಗುಮಾಸ್ತರಾಗುವ ಜೊತೆಗೆ ಬೇರೆ ಬೇರೆ ಕೆಲಸಗಳನ್ನು ಮಾಡಿದವರು ಧರ್ಮೇಂದ್ರ. ಫಿಲಂಫೇರ್‌ ಆಯೋಜಿಸಿದ್ದ ಪ್ರತಿಭಾನ್ವೇಷಣೆಯ ಸ್ಪರ್ಧಿಯಾಗಿ ಪಂಜಾಬಿನಿಂದ ಬಂದು ಸ್ಪರ್ಧೆಯಲ್ಲಿ ಗೆದ್ದವರು.

Read Full Story

09:32 AM (IST) Nov 25

ಅಪಪ್ರಚಾರಕ್ಕೆ ಕಿವಿಕೊಡಬೇಡಿ - ರೈತರಿಗೆ ಸಚಿವ ಶಿವರಾಜ ತಂಗಡಗಿ ಕಿವಿಮಾತು

ಬೇಸಿಗೆಯಲ್ಲಿನ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಲಭ್ಯವಿಲ್ಲ, ಹೀಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ‍್ಯಾರೂ ಸಸಿ ನಾಟಿ ಮಾಡಬೇಡಿ, ಅಪಪ್ರಚಾರಕ್ಕೆ ಕಿವಿಕೊಡಬೇಡಿ ಎಂದು ಸಚಿವ ಶಿವರಾಜ ತಂಗಡಗಿ ರೈತರಿಗೆ ಕಿವಿಮಾತು ಹೇಳಿದರು.

Read Full Story

08:47 AM (IST) Nov 25

ಬೆಸ್ಟ್‌ ಫೋನ್‌ ಹುಡುಕುತ್ತಿದ್ದೀರಾ? ಇಲ್ಲಿದೆ ಬಜೆಟ್‌ ಫ್ರೆಂಡ್ಲಿ ಲಾವಾ ಶಾರ್ಕ್‌ 2 - ಏನಿದರೆ ವಿಶೇಷತೆ?

ಲಾವಾ ಶಾರ್ಕ್‌ 2 4ಜಿ ಸ್ಮಾರ್ಟ್‌ಫೋನ್‌ ಎಷ್ಟು ಸಾಮರ್ಥ್ಯ ಹೊಂದಿದೆ, ಯಾರು ಇದನ್ನು ಭರಿಸಬಹುದು ಎಂಬುದು ಗೊತ್ತಾಗುತ್ತದೆ. ಲಾವಾ ಉದ್ದೇಶವೂ ಅದೇ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಬೇಕು ಅನ್ನುವುದು.

Read Full Story

08:31 AM (IST) Nov 25

Bigg Boss Kannada 12 ಮನೆಗೆ ಬಂದ ಐವರು ಮಾಜಿ ಸ್ಪರ್ಧಿಗಳು - ಯಾರಿಗೆಲ್ಲಾ ಕಾದಿದೆ ಶಾಕ್?

ಈ ವಾರ ಬಿಗ್‌ಬಾಸ್ ಮನೆಯು 'ಬಿಬಿ ಪ್ಯಾಲೇಸ್' ಆಗಿ ಮಾರ್ಪಟ್ಟಿದೆ. ಚೈತ್ರಾ ಕುಂದಾಪುರ, ರಜತ್ ಸೇರಿದಂತೆ ಐವರು ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದು, ಹಾಲಿ ಸ್ಪರ್ಧಿಗಳು ಅವರಿಗೆ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸಬೇಕಿದೆ. ಈ ಹೊಸ ಟಾಸ್ಕ್‌ನಿಂದ ಮನೆಯಲ್ಲಿ ಈಗಾಗಲೇ ಮಾತಿನ ಚಕಮಕಿಗಳು ಆರಂಭವಾಗಿವೆ.
Read Full Story

07:56 AM (IST) Nov 25

ಸಮಸ್ತ ಭಾರತೀಯರ ದಾರಿದೀಪ ಅಂಬೇಡ್ಕರ್‌

ಸಮಸ್ತ ಭಾರತೀಯರ ದಾರಿದೀಪ ಅಂಬೇಡ್ಕರ್‌ , ಬಡವ- ಶ್ರೀಮಂತ, ಜಾತಿ-ಧರ್ಮ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕೊಟ್ಟ ಸಂವಿಧಾನಶಿಲ್ಪಿ

ಪ್ರತಿ ನಾಗರಿಕನ ಧ್ವನಿಯಾಗಿ, ರಾಷ್ಟ್ರನಾಯಕರಾಗಿ ಶಾಶ್ವತವಾಗಿ ಅಂಬೇಡ್ಕರ್‌ ನೆಲೆಸಿದ್ದಾರೆ.

Read Full Story

07:28 AM (IST) Nov 25

Bigg Boss Kannada - ಕಿಚ್ಚನ ಚಪ್ಪಾಳೆ ಸಿಗ್ತಿದ್ದಂತೆ ಮಹಾ ಎಡವಟ್ಟು ಮಾಡ್ಕೊಂಡ ರಕ್ಷಿತಾ ಶೆಟ್ಟಿ!

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು, ತಾನು ಇಲ್ಲದ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಆಧರಿಸಿ ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದ್ದಾರೆ. ತನಗೆ ಗೊತ್ತಿಲ್ಲದ ವಿಷಯವನ್ನು ಕಾರಣವನ್ನಾಗಿ ನೀಡಿದ್ದು ನೋಡುಗರಲ್ಲಿ ಅಚ್ಚರಿಯನ್ನು ಮೂಡಿಸಿದೆ.

Read Full Story

More Trending News