ಕರಾವಳಿ, ಮಲೆನಾಡಲ್ಲಿ ಕುಂಭ ದ್ರೋಣ ಮಳೆ, ಸಮಗ್ರ ವರದಿ

Aug 14, 2018, 3:33 PM IST

ಇದು ನಿಸರ್ಗದ ಕರುಣೆಯೋ , ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ.  ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.