ಕೆರಿಬಿಯನ್ನರಿಗೆ ಬೆದರಿದ್ರಾ ಬಿಸಿಸಿಐ ಬಿಗ್’ಬಾಸ್’ಗಳು..?

Oct 26, 2018, 5:00 PM IST

ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಮೂರು ಏಕದಿನ ಪಂದ್ಯಗಳಿಗೆ 15 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದಿದ್ದ ವಿರಾಟ್ ಪಡೆ, ಎರಡನೇ ಪಂದ್ಯದಲ್ಲಿ ಪ್ರಯಾಸಪಟ್ಟು ಟೈ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಅಂತಿಮ ಮೂರು ಪಂದ್ಯಗಳಿಗೆ ಬಲಿಷ್ಠ ಟೀಂ ಇಂಡಿಯಾವನ್ನು ಕಣಕ್ಕಿಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ.

ಮೊಹಮ್ಮದ್ ಶಮಿಗೆ ರೆಸ್ಟ್ ನೀಡಿ, ಸೀಮಿತ ಓವರ್’ಗಳ ತಂಡದ ಸ್ಪೆಷಲಿಸ್ಟ್’ಗಳು ಎನಿಸಿರುವ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್’ಗೆ ಮಣೆಹಾಕಲಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ತಪ್ಪಿಸಿಕೊಂಡ ಭಾರತ ಇದೀಗ ಎಚ್ಚೆತ್ತುಕೊಂಡಿದೆ...