ಕಾಂಗ್ರೆಸ್ ಪಾಲಿಗೆ ಬೂದಿ ಮುಚ್ಚಿದ ಕೆಂಡವಾಗಿರುವ ಬಳ್ಳಾರಿ!

Oct 11, 2018, 1:13 PM IST

ಉಪಚುನಾವಣೆಯ ದಿನ ಸಮೀಪಿಸುತ್ತಿದ್ದರೂ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಾಲಿಗೆ ಬಳ್ಳಾರಿ ಕಗ್ಗಾಂಟಾಗಿದೆ. ಯಾರನ್ನು ಕಣಕ್ಕಿಳಿಸಬೇಕು? ಎಂಬುವುದೇ ಕೈನಾಯಕರಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಶಾಸಕ ನಾಗೇಂದ್ರ ಸಹೋದರನಿಗೆ ಟಿಕೆಟ್ ನೀಡಲು ಹೈಕಮಾಂಡ್ ಬಯಸಿದ್ದು, ಉಳಿದ ಶಾಸಕರು ಅದನ್ನು ಒಪ್ಪುತ್ತಿಲ್ಲ. ಶಾಸಕರನ್ನು ಸಮಾಧಾನ ಮಾಡಲು ಕಾಗ್ರೆಸ್ ನಾಯಕಾರು ಬೇರೆ ಬೇರೆ ರೀತಿಯ ಲೆಕ್ಕಾಚಾರ ಹಾಕುತ್ತಿದ್ದಾರೆ.