ಸುವರ್ಣ ನ್ಯೂಸ್‌ನಿಂದ ಮಡಿಕೇರಿ ತಲುಪಿತು ಸಾರ್ವಜನಿಕರ ನೆರವು

Aug 19, 2018, 10:35 AM IST

ಎಡೆಬಿಡದೇ ಸುರಿಯುವ ಮಹಾಮಳೆಗೆ ಕೊಡಗು ಅಕ್ಷರಶಃ ತತ್ತರಿಸಿ ಹೋಗಿದೆ. ಸಾಕಷ್ಟು ಜನ ಸೂರು ಕಳೆದುಕೊಂಡಿದ್ದಾರೆ. ಊಟ-ತಿಂಡಿ ಇಲ್ಲದೇ ಪರದಾಡುತ್ತಿದ್ದಾರೆ. ಇಂತವರ ನೆರವಿಗೆ ಧಾವಿಸುವಂತೆ ಸುವರ್ಣ ನ್ಯೂಸ್ ಕರೆ ಕೊಟ್ಟಿತ್ತು. ಕರೆಗೆ ಓಗುಟ್ಟು ಸಾಕಷ್ಟು ಜನ ಕಚೇರಿಗೆ ಬಂದು ಅಗತ್ಯ ವಸ್ತುಗಳನ್ನು ಕೊಟ್ಟು ನೆರವಿನ ಹಸ್ತ ಚಾಚಿದ್ದಾರೆ. ಅಷ್ಟೂ ಅಗತ್ಯ ವಸ್ತುಗಳು ಇದೀಗ ಮಡಿಕೇರಿ ತಲುಪಿದೆ.