Jul 9, 2018, 1:04 PM IST
ಮಹಾಭಾರತದಲ್ಲಿ ಹಲವು ಪ್ರಸಂಗಗಳನ್ನು ಮನಸ್ಸಿಗೆ ಬಂದಂತೆ ವಿಶ್ಲೇಷಿಸಬಾರದು. ಧುರ್ಯೋಧನ ಹಲವು ವಿಷಯಗಳಲ್ಲಿ ವಿಲನ್ ಆಗಿರಬಹುದು. ಆದರೆ ಕರ್ಣನ ವಿಷಯದಲ್ಲಿ ಧುರ್ಯೋಧನ ಮಹಾನುಭಾವ ಎಂದು ಹೇಳಿದ ಮಜವಾದ ಪ್ರಸಂಗಕ್ಕೆ ಇಂದಿನ ವಿಧಾನಸಭಾ ಅಧಿವೇಶನ ಸಾಕ್ಷಿಯಾಯಿತು.
ಏತನ್ಮಧ್ಯೆ ಮುನಿರತ್ನ ಮಧ್ಯ ಪ್ರವೇಶಿಸಿ, ನಮ್ಮ ಸಿನಿಮಾ ಕುರುಕ್ಷೇತ್ರದ ಕಥೆಯನ್ನು ಇಲ್ಲಿ ವಿವರಿಸಬೇಡಿ. ನಮ್ಮ ಸಿನಿಮಾದ ಅರ್ಧ ಕಥೆ ನೀವೇ ಹೇಳಿದಂತೆ ಕಾಣ್ತಿದೆ ಎಂದರು. ನಿಮ್ಮ ಸಿನಿಮಾಗೆ ಒಳ್ಳೆ ಪ್ರಚಾರ ಆಗುತ್ತೆ ಬಿಡಿ ಎಂದು ಸಿಎಂ ಕುಮಾರಸ್ವಾಮಿ ಹಾಸ್ಯ ಚಟಾಕಿ ಹಾರಿಸಿದರು.