ರೈಲಿಗೆ ತಲೆ ಕೊಟ್ಟು ನಿವೃತ್ತ ಜಡ್ಜ್, ಪತ್ನಿ ಆತ್ಮಹತ್ಯೆ

By Web DeskFirst Published Oct 7, 2018, 12:11 PM IST
Highlights

ನಿವೃತ್ತ ಜಡ್ಜ್ ಮತ್ತು ಅವರ ಪತ್ನಿ ಇಬ್ಬರೂ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮ ಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. 
 

ತಿರುಪತಿ: ಆಂಧ್ರಪ್ರದೇಶದ ನಿವೃತ್ತ ಜಡ್ಜ್ ಮತ್ತು ಅವರ ಪತ್ನಿ ಇಬ್ಬರೂ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮ ಹತ್ಯೆ ಮಾಡಿಕೊಂಡ ದಾರುಣಘಟನೆ ನಡೆದಿದೆ. 

ತಿರುಪತಿ ನಿವಾಸಿ ನಿವೃತ್ತ ಜಡ್ಜ್ ಪಿ.ಸುಧಾಕರ್(65) ಶುಕ್ರ ವಾರ ರಾತ್ರಿ ತಿರುಪತಿ- ರೇನಿಗುಂಟಾ ಮಾರ್ಗದಲ್ಲಿ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿ ದ್ದರು. 

ಅವರ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅವರ ಪತ್ನಿ ವರಲಕ್ಷ್ಮೀ ಕೂಡಾ ಇನ್ನೊಂದು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಾವಿನ ಸ್ಥಳದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ತೀವ್ರ ನೊಂದಿದ್ದು, ಅದನ್ನು ತಡೆಯಲಾಗದೇ ಆತ್ಮಹತ್ಯೆಗೆ ಶರಣಾಗಿರು ವುದಾಗಿ ಸುಧಾಕರ್ ಪತ್ರ ಬರೆದಿಟ್ಟಿದ್ದು ಕಂಡುಬಂದಿದೆ. 

click me!