ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪೇಜಾವರ ಶ್ರೀ

Jun 3, 2018, 5:11 PM IST

ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಪೇಜಾವರ ಶ್ರೀ ಮತ್ತೊಮ್ಮೆ ಅಸಮಾಧಾನ ಹೊರಗೆಡಹಿದ್ದಾರೆ. ವಿದೇಶದಲ್ಲಿರುವ ಕಪ್ಪುಹಣ ವಾಪಾಸು ತರುವ ಬಗ್ಗೆ ಚುನಾವಣಾಪೂರ್ವದಲ್ಲಿ ಮೋದಿ ಭರವಸೆ ನೀಡಿದ್ದರು, ದೇಶದಲ್ಲಿ ‘ಅಚ್ಛೇ ದಿನ್‘ ಜಾರಿಯಾಗಬೇಕಾಗಿದೆ ಎಂದು ಹೇಳಿರುವ ಪೇಜಾವರ ಶ್ರೀ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಹೇಳಕ್ಕಾಗಲ್ಲ ಎಂದಿದ್ದಾರೆ.