ಅಂಬರೀಷ್ ವಿದಾಯ: ಮಂಡ್ಯ ಮಹಾಜನತೆಗೆ ಧನ್ಯವಾದ ಅರ್ಪಿಸಿದ ಸಿಎಂ

Nov 26, 2018, 12:29 PM IST

ಮಂಡ್ಯ ತನ್ನ ಮಣ್ಣಿನ ಮಗನಿಗೆ ಅಂತಿಮ ವಿದಾಯ ಹೇಳಿದೆ. ಜಿಲ್ಲೆಯ ಅಭಿಮಾನಿಗಳ ಒತ್ತಾಯದ ಬಳಿಕ ಸರ್ಕಾರ, ಅಂಬಿ ಅಂತಿಮ ದರ್ಶನದ ವ್ಯವಸ್ಥೆಯನ್ನು ಮಂಡ್ಯದಲ್ಲಿ ಮಾಡಿತ್ತು. ಲಕ್ಷಾಂತರ ಅಭಿಮಾನಿಗಳು ಭಾರವಾದ ಹೃದಯದೊಂದಿಗೆ ತಮ್ಮ ‘ಹೀರೋ’ನನ್ನು ನೋಡಿ ಕಣ್ತುಂಬಿಸಿಕೊಂಡರು. ಈ ಸಂದರ್ಭದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಮಹಾಜನತೆ ನೀಡಿದ ಸಹಕಾರ ಹಾಗೂ ಪ್ರೀತಿಗೆ ಕೃತಜ್ಞತೆ ಅರ್ಪಿಸಿದ್ದಾರೆ.  

ಮಂಡ್ಯದ ಜನತೆ ಹಾಗೂ ಎಲ್ಲರೂ ಅಂಬರೀಷ್ ಅವರ ಮೇಲಿಟ್ಟಿರುವ ಪ್ರೀತಿ ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ.
ಸುಮಾರು ಎರಡೂವರೆ ಲಕ್ಷ ಜನ ಮಂಡ್ಯ ನಗರದಲ್ಲಿ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ‌‌. ಎಲ್ಲರ ಶಾಂತಿಯುತ ಸಹಕಾರಕ್ಕೆ ನಾನು ಆಬಾರಿ. pic.twitter.com/aI9CnsrRCN

— CM of Karnataka (@CMofKarnataka)