ಮಾಧುಸ್ವಾಮಿ ಪರ ಸಿಎಂ ಕೇಳಿದ್ರು ಸಾರಿ; ಹೆಣ್ಣಿನಾಸೆಗೆ ಕ್ರಿಕೆಟಿಗರ ತಪ್ಪು ದಾರಿ; ನ.20 ರ ಟಾಪ್ 10 ಸುದ್ದಿ!

By Web DeskFirst Published Nov 20, 2019, 4:53 PM IST
Highlights

ಕುರುಬ ಸಮಾಜಕ್ಕೆ ಅವಮಾನ ಮಾಡಿರುವ ಮಾಧುಸ್ವಾಮಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿರುವ ಸಮುದಾಯ ಬಂದ್‌ಗೆ ಕರೆ ನೀಡಿದೆ. ಇತ್ತ ಮಾಧುಸ್ವಾಮಿ ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಿಲ್‌ಗೇಟ್ಸ್ ಜೊತೆಗಿನ ಫೋಟೋ ಹಂಚಿಕೊಳ್ಳೋ ಮೂಲಕ ಕೇಂದ್ರ ಸಚಿವೆ ಸ್ಮತಿ ಇರಾನಿ ಹಳೇ ಸೇಡು ತೀರಿಸಿಕೊಂಡಿದ್ದಾರೆ. ಕೆಪಿಎಲ್ ಫಿಕ್ಸಿಂಗ್ ಹೊಸ ತಿರುವು ಪಡೆದುಕೊಂಡಿದೆ. ಹೆಣ್ಣಿನ ಆಸೆಗೆ ಕ್ರಿಕೆಟಿಗರು ಫಿಕ್ಸಿಂಗ್ ನಡೆಸಿದ್ರಾ ಅನ್ನೋ ಅನುಮಾನ ಕಾಡತೊಡಗಿದೆ. ಇತ್ತ ನಟಿ ರಶ್ಮಿಕಾ ಮಂದಣ್ಣ ಪ್ರೀತಿ ಬಲೆಯಲ್ಲಿ ಬಿದ್ದಿದ್ದಾರಾ? ಇದಕ್ಕೆ ಮಂದಣ್ಣಾ ಉತ್ತರಿಸಿದ್ದಾರೆ. ಹೀಗೆ ನವೆಂಬರ್ 20 ರಂದು ಗಮನಸೆಳೆದ ಟಾಪ್ 10 ಸುದ್ದಿಗಲ ಆಗರ ಇಲ್ಲಿದೆ.

click me!