ಕುಮಾರಣ್ಣ, ಸಿದ್ದು ನಡುವೆ ಪ್ರತಿಷ್ಠೆಯ ಗೋಡೆ?

Jun 19, 2018, 9:25 PM IST

ಬೆಂಗಳೂರ([ಜೂ.19): ರಾಜ್ಯದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಇನ್ನೂ ಧೃಢ ಹೆಜ್ಜೆಗಳನ್ನು ಇಡಲು ಅಳುಕುತ್ತಿದೆ. ಮೈತ್ರಿಯ ಆಯಸ್ಸು ಕುರಿತು ಈಗಾಗಲೇ ತರಹೇವಾರಿ ಮಾತುಗಳು ಎರಡೂ ಪಕ್ಷಗಳಿಂದಲೂ ಕೇಳಿ ಬರುತ್ತಿವೆ. 

ಪ್ರಸಕ್ತ ಸಮ್ಮಿಶ್ರ ಸರ್ಕಾರ ಆಡಳಿತದ ಹಳಿ ಮೇಲೆ ಬರದಿರಲು ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಾಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಪ್ರತಿಷ್ಠೆ ಎಂಬುದು ದೋಸ್ತಿಗಳಲ್ಲೇ ಕೇಳಿ ಬರುತ್ತಿರುವ ಮಾತಾಗಿದೆ.

ಹಾಗಾದರೆ ಹಾಲಿ ಮತ್ತು ಮಾಜಿ ಸಿಎಂಗಳ ನಡುವೆ ಅದೆಂತಾ ಪ್ರತಿಷ್ಠೆ ಅಡ್ಡಗೋಡೆಯಾಗಿ ನಿಂತಿದೆ?. ಕುಮಾರಣ್ಣ ಮತ್ತು ಸಿದ್ದು ನಡುವಿನ ಈ ಪ್ರತಿಷ್ಠೆ ಮೈತ್ರಿ ಸರ್ಕಾರಕ್ಕೆ ಗಂಡಾಂತರ ತರಲಿದೆಯೇ?. ತಿಳಿಯಲು ಈ ವಿಡಿಯೋ ನೊಡಿ.