ಸಚಿವ ಸ್ಥಾನ ಬರುತ್ತದೆ ಹೋಗುತ್ತದೆ. ಆದರೆ ಧರ್ಮ ಮುಖ್ಯ. ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ ಅದು ಈಡೇರುವವರೆಗೆ ಸಚಿವ ಸಂಪುಟ ಸಭೆಗೆ ಹೋಗುವುದಿಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ: ಸಚಿವ ಸ್ಥಾನ ಬರುತ್ತದೆ ಹೋಗುತ್ತದೆ. ಆದರೆ ಧರ್ಮ ಮುಖ್ಯ. ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ ಅದು ಈಡೇರುವವರೆಗೆ ಸಚಿವ ಸಂಪುಟ ಸಭೆಗೆ ಹೋಗುವುದಿಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವರನ್ನು ನಂಬುತ್ತೇನೆ.
ಸಚಿವ ಸ್ಥಾನಕ್ಕಿಂತ ದೇವರ ಮೇಲಿನ ನಂಬಿಕೆ ನನಗೆ ಮುಖ್ಯ. ಕೆಲ ವಿಚಾರದಲ್ಲಿ ದೇವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದೇ ರೀತಿ ಯಾವುದೋ ವಿಷಯವಾಗಿ ದೇವರಲ್ಲಿ ಏನನ್ನು ಕೇಳಿಕೊಂಡಿದ್ದೇನೆ.
ಆ ಕೆಲಸ ಆಗುವವರೆಗೆ ಸರ್ಕಾರಿ ಕಾರು ಉಪಯೋಗಿಸುವುದಿಲ್ಲ. ಸಚಿವ ಸಂಪುಟ ಸಭೆಗೂ ಹೋಗುವುದಿಲ್ಲ ಎಂದು ಪುನರುಚ್ಚರಿಸಿದರು. ಇದುವರೆಗೂ 5 ಸಚಿವ ಸಂಪುಟ ಸಭೆಗೆ ಗೈರಾಗಿದ್ದಾನೆ ಎಂದರು.