ಅಖಿಲೇಶ್ ಪಾಲಾದ ಸೈಕಲ್, ಮುಲಾಯಂ ಸಿಂಗ್ ಗೆ ಹಿನ್ನೆಡೆ

By Suvarna Web DeskFirst Published Jan 16, 2017, 2:40 PM IST
Highlights

ಉತ್ತರ ಪ್ರದೇಶದಲ್ಲಿ ಸೈಕಲ್ ಕಿತ್ತಾಟ ತಾರ್ಕಿಕ ಅಂತ್ಯ ಕಂಡಿದೆ. ಚುನಾವಣಾ ಆಯೋಗ ಸೈಕಲನ್ನು ಅಖಿಲೇಶ್ ಯಾದವ್ ಗೆ ನೀಡಿದೆ.

ನವದೆಹಲಿ (ಜ.16): ಉತ್ತರ ಪ್ರದೇಶದಲ್ಲಿ ಸೈಕಲ್ ಕಿತ್ತಾಟ ತಾರ್ಕಿಕ ಅಂತ್ಯ ಕಂಡಿದೆ. ಚುನಾವಣಾ ಆಯೋಗ ಸೈಕಲನ್ನು ಅಖಿಲೇಶ್ ಯಾದವ್ ಗೆ ನೀಡಿದೆ.

ಚುನಾವಣೆ ದೃಷ್ಟಿಯಿಂದ ಚುನಾವಣಾ ಆಯೋಗದ ಈ ನಿರ್ಧಾರ ಮುಲಯಾಂ ಸಿಂಗ್ ಗೆ ದೊಡ್ಡ ಅಘಾತವಾಗಿದೆ.

ನಾಜಿಂ ಜೈದಿ ನೇತೃತ್ವದ ಮೂವರು ಸದಸ್ಯರನ್ನೊಳಗೊಂಡ ಚುನಾವಣಾ ಆಯೋಗ ಜ. 13 ರಂದು ಎರಡೂ ಕಡೆಯ ವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅಖಿಲೇಶ್ ಯಾದವ್ ಪರ ತೀರ್ಪು ನೀಡಿ

ಸೈಕಲ್ ನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ.  

click me!