Jun 26, 2018, 10:17 PM IST
ಮಡಿಕೇರಿ(ಜೂ.26): ಸೋಮವಾರಪೇಟೆಯ ಸೋಮೇಶ್ವರ ದೇವಾಲಯದಲ್ಲಿ ಖಾಲಿ ಹುಂಡಿ ಕದ್ದಿದ್ದ ಕಳ್ಳ ಮತ್ತೆ ತನ್ನ ಕೈಚಳಕ ತೋರಿಸಿ ಸಿಕ್ಕಿಬಿದ್ದಿದ್ದಾನೆ. ಪಟ್ಟಣದ ಬಿಟಿಸಿಜಿ ಪದವಿ ಕಾಲೇಜಿಗೆ ನುಗ್ಗಿದ ಕಳ್ಳ ಪ್ರಾಂಶುಪಾಲರ ಕಚೇರಿಯಲ್ಲಿದ್ದ 250 ಹಣ ಕಳುವು ಮಾಡಿ ಪರಾರಿಯಾಗಿದ್ದಾನೆ.
ಆದರೆ ಕಳ್ಳನ ಚೋರತನ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಕಾಲೇಜು ಸಿಬ್ಬಂದಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..