BJP-JDS ಪಕ್ಷಗಳನ್ನು ನಾಯಿಗೆ ಹೋಲಿಸಿದ ಮುಖ್ಯಮಂತ್ರಿ ಚಂದ್ರು

By Suvarna Web DeskFirst Published Apr 13, 2018, 1:54 PM IST
Highlights

ನಾವು ಇನ್ನು ಮುಂದೆ ಬಾಗಿಲಿಗೆ ನಾಯಿಯಿದೆ ಎಚ್ಚರಿಕೆ ಅನ್ನೋ ಬದಲು ಬಿಜೆಪಿಯಿದೆ ಎಚ್ಚರಿಕೆ, ಜೆಡಿಎಸ್ ಇದೆ ಎಚ್ಚರಿಕೆ ಅಂತ ಬೋರ್ಡ್ ಹಾಕಿಕೊಳ್ಳಬೇಕಿದೆ ಎಂದು ಹೇಳುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕ್ವಿಟ್ ಇಂಡಿಯಾ ಮೂಲಕ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಅಂತಾ ಇದ್ವಿ. ಈಗ ಬಿಜೆಪಿಯವರೇ ಭಾರತ ಬಿಟ್ಟು ತೊಲಗಿ ಎನ್ನುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಸಂವಿಧಾನ ಉಳಿಸಿ, ಕೋಮುವಾದ ಅಳಿಸಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಂದ್ರು, ಬಿಜೆಪಿಯವರೇ ಭಾರತ ಬಿಟ್ಟು ತೊಲಗಿ, ಜೆಡಿಎಸ್'ನವರೇ ಜಾತಿ ಬಿಟ್ಟು ತೊಲಗಿ. ಒಂದು ಕಡೆ ಕೋಮುವಾದ ಇನ್ನೊಂದು ಕಡೆ ಜಾತಿವಾದ. ಆದರೆ ಕಾಂಗ್ರೆಸ್ ಎಲ್ಲರನ್ನು ಒಂದಾಗಿ ಕರೆದುಕೊಂಡು ಹೋಗುತ್ತದೆ ಎಂದರು.

ನಾವು ಇನ್ನು ಮುಂದೆ ಬಾಗಿಲಿಗೆ ನಾಯಿಯಿದೆ ಎಚ್ಚರಿಕೆ ಅನ್ನೋ ಬದಲು ಬಿಜೆಪಿಯಿದೆ ಎಚ್ಚರಿಕೆ, ಜೆಡಿಎಸ್ ಇದೆ ಎಚ್ಚರಿಕೆ ಅಂತ ಬೋರ್ಡ್ ಹಾಕಿಕೊಳ್ಳಬೇಕಿದೆ ಎಂದು ಹೇಳುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

 

click me!