ಬಿಎಸ್​​ವೈ ನಿವಾಸದಲ್ಲಿ ಬಿಜೆಪಿ ನಾಯಕರ ದಂಡು!

Sep 13, 2018, 4:06 PM IST

ಬೆಂಗಳೂರು(ಸೆ.13): ಹಬ್ಬ ಮುಗಿಯುತ್ತಿದ್ದಂತೇ ಆಪರೇಶನ್ ಕಮಲದ ವೇಗ ಹೆಚ್ಚಾಗಬಹುದು ಎಂಬ ಗುಮಾನಿ ಎದ್ದಿದೆ. ಇದಕ್ಕೆ ಪೂರಕ ಎಂಬಂತೆ ಹಬ್ಬದ ದಿನವೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದರು.

ಹಬ್ಬದ ದಿನವೂ ಯಡಿಯೂರಪ್ಪ ನಿವಾಸದಲ್ಲಿ ಶಾಸಕರ ದಂಡು ಕಂಡು ಬಂದಿದ್ದು, ಗಣೇಶ ಹಬ್ಬದ ಪ್ರಯುಕ್ತ ಶುಭಾಶಯ ನೆಪದಲ್ಲಿ ರಾಜಕೀಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಬಿಎಸ್​​ವೈ ನಿವಾಸಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಸುರಪುರ ಬಿಜೆಪಿ ಶಾಸಕ ರಾಜು ಗೌಡ ಸೇರಿದಂತೆ ಹಲವರು ಭೇಟಿ ನೀಡಿದ್ದರು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..