ದ್ವೇಷ ರಾಜಕಾರಣಕ್ಕೆ ಆದಿ ಅಂತ್ಯ ಎರಡೂ ಇಲ್ಲ| ಗುಂಡಿಟ್ಟು ಬಿಜೆಪಿ ಪ್ರಮುಖ ಮುಖಂಡನ ಬರ್ಬರ ಹತ್ಯೆ| ಶಂಕಿತ ಉಗ್ರರಿಂದ ಕಣಿವೆಯ ಬಿಜೆಪಿ ಮುಖಂಡನ ಹತ್ಯೆ| ಅನಂತ್ ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಗುಲ್ ಮೊಹ್ಮದ್ ಮಿರ್| ಘಟನೆಯನ್ನು ತೀವ್ರವಾಗಿ ಖಂಡಿಸಿದ ರಾಜ್ಯ ಬಿಜೆಪಿ ಘಟಕ|
ಶ್ರೀನಗರ(ಮೇ.05): ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮುಖಂಡನೋರ್ವನನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಅನಂತ್ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಗುಲ್ ಮೊಹ್ಮದ್ ಮಿರ್ ಅವರನ್ನು ಅಪರಚಿತ ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
BJP leader shot dead in South Kashmir
Read Story | https://t.co/Z0L81JXIAz pic.twitter.com/NiAIF9UC2a
ಮೊಹ್ಮದ್ ಮಿರ್ ಮನೆಗೆ ನುಗ್ಗಿದ ಮೂವರು ಶಂಕಿತ ಉಗ್ರರು, ಮಿರ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ತುಸು ದೂರ ಹೋದ ಬಳಿಕ, ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ ಘಟಕ, ಗುಲ್ ಮೊಹ್ಮದ್ ಮಿರ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಿದೆ.