ಕಣಿವೆಯಲ್ಲಿ ಹರಿದ ಕೇಸರಿ ರಕ್ತ: ಬಿಜೆಪಿ ಕಾರ್ಯದರ್ಶಿ, ಸಹೋದರ ಹತ್ಯೆ!

By Web DeskFirst Published Nov 2, 2018, 11:18 AM IST
Highlights

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ! ರಾಜ್ಯ ಬಿಜೆಪಿ ಕಾರ್ಯದರ್ಶಿ, ಸಹೋದರ ಹತ್ಯೆ! ಗುಂಡಿಕ್ಕಿ ಅನಿಲ್ ಪರಿಹರ್, ಸಜಿತ್ ಪರಿಹರ್ ಹತ್ಯೆ! ಭೀಕರ ಗುಂಡಿನ ದಾಳಿಗೆ ಬಲಿಯಾದ ಪರಿಹರ್ ಸಹೋದರರು! ದುಷ್ಕೃತ್ಯದ ಹಿಂದೆ ಉಗ್ರರ ಕೈವಾಡದ ಶಂಕೆ ಎಂದ ಪೊಲೀಸರು

ಶ್ರೀನಗರ(ನ.2): ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಸ ಮೆರೆದಿದ್ದು, ಇಲ್ಲಿನ ಕಿಶ್ತವಾರ್ ನಲ್ಲಿ ಅಪರಿಚಿತ ಬಂದೂಕುದಾರಿಗಳು ರಾಜ್ಯ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹರ್  ಹಾಗೂ ಅವರ  ಸಹೋದರ ಅಜಿತ್ ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಅನಿಲ್ ಪರಿಹರ್ ಹಾಗೂ ಅಜಿತ್ ತಮ್ಮ ಸ್ಟೇಷನರಿ ಅಂಗಡಿ ಮುಚ್ಚಿ ಮನೆಗೆ  ಮರಳುತ್ತಿದ್ದಾಗ ಅವರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ.

BJP J&K secretary Anil Parihar and his brother were shot by terrorists in Kishtwar around 8 pm today. They were taken to hospital immediately where they succumbed to injury: BJP State President Ravinder Raina. pic.twitter.com/BoPuJRzfm2

— ANI (@ANI)

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ  ಅನಿಲ್ ಪರಿಹರ್  ಹಾಗೂ ಅನಿಲ್ ಅವರನ್ನು  ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಉಗ್ರರು ಈ ದಾಳಿ ನಡೆಸಿರುವ ಸಾಧ್ಯತೆ ಇದ್ದು, ಸದ್ಯ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Just got the tragic news of killing of Shri Anil Parihar, Secretary , and his brother by terrorists in Kishtwar. This is a cowardly act that shames humanity. I grieve the death of my valued colleague and pray that God gives his family strength to bear this untimely loss.

— Amit Shah (@AmitShah)

ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳು ಮುಂದುವರೆಯಲಿವೆ ಎಂದು ತಿಳಿಸಿದೆ. ಸದ್ಯ ಘಟನೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ. 

click me!