ಬಿಗ್ 3 ಇಂಪ್ಯಾಕ್ಟ್: ಬಳ್ಳಾರಿ ಸರ್ಕಾರಿ ಶಾಲೆಗೆ ಕೊನೆಗೂ ಕಾಯಕಲ್ಪ

Jun 29, 2018, 8:37 PM IST

ಅಭಿವೃದ್ಧಿ ಮತ್ತು ಪರಿಹಾರ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವ ಸುವರ್ಣನ್ಯೂಸ್ ಇದೀಗ ಹೊಸತೊಂದು ಪ್ರಯೋಗಕ್ಕೆ ಕೈಹಾಕಿದೆ. ಸುವರ್ಣನ್ಯೂಸ್ ಆರಂಭಿಸಿರುವ ‘ಬಿಗ್ 3’ ಕಾರ್ಯಕ್ರಮವು ರಾಜ್ಯದಲ್ಲಿ ಸಂಚಲನ ಹುಟ್ಟು ಹಾಕಿದೆಯಲ್ಲದೇ, ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಅಧಿಕಾರಿ ವರ್ಗ/ಜನ ಪ್ರತಿನಿಧಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದೆ.

ಬಳ್ಳಾರಿಯ ಕುಡುತೆನಿ ಸರ್ಕಾರಿ ಶಾಲೆಯ ದುಸ್ಥಿತಿ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಣ ಸಚಿವ ಎನ್. ಮಹೇಶ್ ಡಿಡಿಪಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಶಾಲೆಗೆ ತೆರಳಿ ಕಟ್ಟಡ ರಿಪೇರಿ ಮಾಡಿಸಿ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.