ಸುಖ ಸರ್ಕಾರಕ್ಕೆ 6 ಸೂತ್ರಗಳು

Published : Jun 02, 2018, 07:58 AM IST
ಸುಖ ಸರ್ಕಾರಕ್ಕೆ 6 ಸೂತ್ರಗಳು

ಸಾರಾಂಶ

ನಾಟಕೀಯ ಬೆಳವಣಿಗೆಗಳ ಬಳಿಕ ಕಳೆದ ಮೇ 23ರಂದು ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ‘ಸಂಪುಟ ರಹಸ್ಯ’ ಕಡೆಗೂ ಬಯಲಾಗಿದೆ. ಬರೋಬ್ಬರಿ ಒಂದು ವಾರದ ಹಗ್ಗಜಗ್ಗಾಟ ಬಳಿಕ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವಣ ಖಾತೆಗಳ ಹಂಚಿಕೆ ಅಂತಿಮಗೊಂಡಿದೆ. ಇದೇ ವೇಳೆ, ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಲವು ಮಾರ್ಗಸೂಚಿಗಳನ್ನೂ ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಸರ್ಕಾರ ಟೇಕಾಫ್‌ ಆಗಲು ಅಧಿಕೃತ ಮುನ್ನುಡಿ ಬರೆದಂತಾಗಿದೆ.

ಬೆಂಗಳೂರು (ಜೂ. 02): ನಾಟಕೀಯ ಬೆಳವಣಿಗೆಗಳ ಬಳಿಕ ಕಳೆದ ಮೇ 23ರಂದು ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ‘ಸಂಪುಟ ರಹಸ್ಯ’ ಕಡೆಗೂ ಬಯಲಾಗಿದೆ. ಬರೋಬ್ಬರಿ ಒಂದು ವಾರದ ಹಗ್ಗಜಗ್ಗಾಟ ಬಳಿಕ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವಣ ಖಾತೆಗಳ ಹಂಚಿಕೆ ಅಂತಿಮಗೊಂಡಿದೆ.

ಇದೇ ವೇಳೆ, ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಲವು ಮಾರ್ಗಸೂಚಿಗಳನ್ನೂ ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಸರ್ಕಾರ ಟೇಕಾಫ್‌ ಆಗಲು ಅಧಿಕೃತ ಮುನ್ನುಡಿ ಬರೆದಂತಾಗಿದೆ.


1. ಪೂರ್ಣಾವಧಿ ಸಿಎಂ ಎಚ್‌ಡಿಕೆ

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ತನ್ನ ಸಂಪೂರ್ಣ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಬೇಕು ಎಂಬುದು ಉಭಯ ಪಕ್ಷಗಳ ಬದ್ಧತೆ ಎನ್ನುವ ಮೂಲಕ ಪರೋಕ್ಷವಾಗಿ 5 ವರ್ಷ ಎಚ್‌ಡಿಕೆ ಸಿಎಂ ಎಂದು ಘೋಷಣೆ.

2. ಸಾಮಾನ್ಯ ಕಾರ್ಯಸೂಚಿ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಪ್ರಕಟಿಸಿದ ಪ್ರಣಾಳಿಕೆಗಳನ್ನು ಸಮ್ಮಿಳನಗೊಳಿಸಿ ಸಾಮಾನ್ಯ ಕಾರ್ಯಸೂಚಿಯೊಂದನ್ನು ರೂಪಿಸಿ ರಾಜ್ಯದ ಜನತೆಯ ಮುಂದಿಡುವುದು.

3. ಸಿದ್ದು ಸಮನ್ವಯ ಸಮಿತಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈತ್ರಿಕೂಟದ ಸಮನ್ವಯ, ಮೇಲ್ವಿಚಾರಣಾ ಸಮಿತಿ ರಚನೆ. ಜೆಡಿಎಸ್‌ನ ಡ್ಯಾನಿಷ್‌ ಅಲಿ ಸಂಚಾಲಕ. ವೇಣುಗೋಪಾಲ್‌, ಎಚ್‌ಡಿಕೆ, ಪರಂ ಸದಸ್ಯರು. ತಿಂಗಳಿಗೊಮ್ಮೆ ಇದರ ಸಭೆ.

4. ಜಂಟಿ ವಕ್ತಾರರ ನೇಮಕ

ಮಾಧ್ಯಮದೊಂದಿಗೆ ಸಂವಹನಕ್ಕಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ತಲಾ ಒಬ್ಬ ವಕ್ತಾರರ ನೇಮಕ. ಈ ವಕ್ತಾರರು ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಎಲ್ಲಾ ಸಂದರ್ಭಗಳಲ್ಲೂ ಜಂಟಿಯಾಗಿ ಮಾಧ್ಯಮಗಳಿಗೆ ವಿವರ ನೀಡುವುದು.

5. ನಿಗಮ, ಮಂಡಳಿ ಹಂಚಿಕೆ

ನಿಗಮ, ಮಂಡಳಿಗಳ ಅಧಿಕಾರವನ್ನು ಕಾಂಗ್ರೆಸ್‌ 3ನೇ 2 ಹಾಗೂ ಜೆಡಿಎಸ್‌ 3ನೇ 1 ಭಾಗದಷ್ಟುಹಂಚಿಕೊಳ್ಳುವುದು. ನೇಮಕಾತಿಗಳನ್ನು ಮೈತ್ರಿಕೂಟದ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿಯ ಅವಗಾಹನೆ ಮೂಲಕ ನಡೆಸುವುದು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದನದಲ್ಲಿ ಹೆಸರು ತಪ್ಪಾಗಿ ಹೇಳಿದರೆ ದಂಡ ಫಿಕ್ಸ್‌!
'ಬೆಳಗಾವಿ ಜಿಲ್ಲೆ ವಿಭಜನಗೆ ಅಂತಲೇ ಸಿಎಂ ಬಂದಿದ್ದರು' ಸಿದ್ದರಾಮಯ್ಯ ಮನಸಲ್ಲಿದ್ದ ಬಿಗ್ ಪ್ಲಾನ್ ಬಿಚ್ಚಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!