ನ್ಯಾಷನಲ್ ಹೆರಾಲ್ಡ್ ಪ್ರಕರಣ ಕಾಂಗ್ರೆಸ್ನ ಗಾಂಧಿ ಕುಟುಂಬಕ್ಕೆ ಕುಣಿಕೆಯಾಗಿ ಸುತ್ತಿಕೊಂಡಿರುವ ಹೊತ್ತಿನಲ್ಲಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ದೆಹಲಿ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಹಣಕಾಸು ವಿನಿಮಯದ ಮಾಹಿತಿಗಳನ್ನು ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರಿಗೆ ಮಾಹಿತಿ ಇರಬಹುದು ಎಂಬ ಶಂಕೆಯ ಮೇಲೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ನ.29ರಂದು ಈ ನೋಟಿಸ್ ಕಳಿಸಿದೆ. ಅದರಲ್ಲಿ, ಡಿ.19ರ ಒಳಗೆ ತನ್ನೆದುರು ಹಾಜರಾಗಿ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಪಕ್ಷದೊಂದಿಗಿನ ಒಡನಾಟ, ಅವರು ಅಥವಾ ಅವರಿಗೆ ಸೇರಿದ ಸಂಸ್ಥೆಗಳಿಂದ ಯಂಗ್ ಇಂಡಿಯಾಗೆ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ನೀಡಲು ನಿರ್ದೇಶಿಸಲಾಗಿದೆ. ಜತೆಗೆ, ಆ ವ್ಯವಹಾರಕ್ಕೆ ಸಂಬಂಧಿಸಿದ ಆದಾಯ ತೆರಿಗೆ ದಾಖಲೆ, ಹಣಕಾಸು ಹೇಳಿಕೆ ಮತ್ತು ದೇಣಿಗೆಯ ಪ್ರಮಾಣಪತ್ರಗಳನ್ನೂ ಸಲ್ಲಿಸುವಂತೆ ಸೂಚಿಸಿದೆ .

10:58 PM (IST) Dec 06
ಇತ್ತೀಚೆಗೆ ನಡೆದ ಅಂಧರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಜಯ ಸಾಧಿಸಿ, ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಸ್ಯಾಂಡಲ್ವುಡ್ ದಿಗ್ಗಜ ಡಾ. ರಾಜ್ಕುಮಾರ್ ಅವರ ನಿವಾಸದಲ್ಲಿ ಅಭೂತಪೂರ್ವ ಸ್ವಾಗತ ಸನ್ಮಾನ ಗೌರವ ಲಭಿಸಿತು.
10:57 PM (IST) Dec 06
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ರಜತ್ ಅವರನ್ನು ನೋಡಿದಾಗೆಲ್ಲ ಕಿಚ್ಚ ಸುದೀಪ್ ಅವರು, “ವಿಡಿಯೋ ಪ್ಲೇ ಮಾಡಲಾ?” ಎಂದು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಕಳೆದ ವೀಕೆಂಡ್ ಎಪಿಸೋಡ್ನಲ್ಲಿ ಕೂಡ ಕೇಳಿದ್ದುಂಟು. ಈ ವಿಡಿಯೋ ಹಿಂದಿನ ಕಥೆ ಏನು?
10:49 PM (IST) Dec 06
ವಾಸ್ತು ಶಾಸ್ತ್ರವು ವಾಸ್ತು ದೋಷಗಳನ್ನು ತೆಗೆದುಹಾಕಲು ಅನೇಕ ಪರಿಹಾರಗಳನ್ನು ಒದಗಿಸುವ ವಿಜ್ಞಾನ. ವಾಸ್ತು ಶಾಸ್ತ್ರದ ಪ್ರಕಾರ, ದಾನವು ಬಹಳ ಮುಖ್ಯ, ನೀವು ಏನನ್ನಾದರೂ ದಾನ ಮಾಡಿದಾಗ, ಅದರ ಪುಣ್ಯ ಸಿಗುತ್ತದೆ ಮತ್ತು ನಿಮ್ಮ ದೋಷಗಳು ನಿವಾರಣೆಯಾಗುತ್ತವೆ.
10:26 PM (IST) Dec 06
ಕಾರ್ಮಿಕ ಸಚಿವ ಸಂತೋಷ್ ಲಾಡ್, ಮೋದಿ-ಪುಟಿನ್ ಸ್ನೇಹ ಮತ್ತು ಆರ್ಥಿಕ ನೀತಿಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದರೊಂದಿಗೆ, ಹುಬ್ಬಳ್ಳಿ ನಗರದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು 6 ಸಾವಿರ ಕೋಟಿ ವೆಚ್ಚದ ಹೊಸ ಯೋಜನೆ ಚರ್ಚಿಸಲಾಗಿದೆ ಎಂದಿದ್ದಾರೆ.
09:57 PM (IST) Dec 06
ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಗೆ ವೇಗ ನೀಡಲು ಸೂಚಿಸಲಾಗಿದ್ದು, ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರಿಗೆ ಮುಂದೆ ಯಾವುದೇ ಕಾಮಗಾರಿಯನ್ನೂ ನೀಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
09:53 PM (IST) Dec 06
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಸೋಮಣ್ಣ ಅವರು ಹೇಗೆ ಉಳಿದುಕೊಂಡಿದ್ದಾರೆ ಎಂದು ಕೆಲ ಸ್ಪರ್ಧಿಗಳು ಹೇಳಿದ್ದೂ ಇದೆ. ಈಗ ವೀಕ್ಷಕರು ಕೂಡ ಇದೇ ಅಭಿಪ್ರಾಯಪಟ್ಟಿದ್ದರು. ಕಿಚ್ಚ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
09:15 PM (IST) Dec 06
ನಾನು ಯಾರಿಂದಲೂ ಒಂದು ಪೈಸೆ ಲಂಚ ಪಡೆದಿಲ್ಲ. ನಾನು ಲಂಚ ಪಡೆದಿರುವುದು ಸಾಬೀತುಪಡಿಸಿದರೆ ಆ ಕ್ಷಣವೇ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
09:01 PM (IST) Dec 06
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ನೀಡಿ ಎಂಬುದನ್ನು ಸಮಯ ಬಂದಾಗ ಕೇಳುವೆ, ಆದರೆ ಎಲ್ಲೊ ನಿಂತು ಮಾಧ್ಯಮದವರ ಮುಂದೆ ಇದನ್ನ ಪ್ರಶ್ನಿಸಲಾಗಲ್ಲ. ಕಾಲ ಕೂಡಿ ಬಂದಾಗ ಎಲ್ಲವೂ ಆಗುತ್ತೆ ಎಂದು ಸಚಿವ ಮಹದೇವಪ್ಪ ಹೇಳಿದರು.
08:51 PM (IST) Dec 06
ಕೆಎಸ್ಡಿಎಲ್ ಭ್ರಷ್ಟಾಚಾರ ಕುರಿತು ಶಾಸಕ ಎಚ್.ಟಿ.ಮಂಜು ಮಾಡಿರುವ ಆರೋಪ ಸುಳ್ಳಾಗಿದ್ದರೆ, ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
08:44 PM (IST) Dec 06
ಸೀನು ದೇಹದಲ್ಲಿ ನಡೆಯುವ ಅತ್ಯಂತ ಸಹಜ ಪ್ರಕ್ರಿಯೆ. ಸಾಮಾನ್ಯವಾಗಿ ಸೀನು ಬಂದರೆ ಅದೊಂದು ಅನಾರೋಗ್ಯ ಎಂದು ಭಾವಿಸುತ್ತೇವೆ. ಆದರೆ ಸೀನು ಒಂದು ವೇಗದ ರಕ್ಷಣಾ ವ್ಯವಸ್ಥೆ. ಅಷ್ಟಕ್ಕೂ ಸೀನು ಯಾಕೆ ಬರುತ್ತೆ, ಅದರ ಹಿಂದಿನ ವೈಜ್ಞಾನಿಕ ಕಾರಣ ಏನು ಅಂತ ನೋಡೋಣ.
07:54 PM (IST) Dec 06
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ, ರಾಜ್ಯದಲ್ಲಿ ನಾಯಿ ದಾಳಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ದಾವಣಗೆರೆಯಲ್ಲ ನಾಯಿ ದಾಳಿಗೆ ಮಹಿಳೆ ಮೃತಪಟ್ಟ ಬೆನ್ನಲ್ಲೇ ಈ ಘಟನೆ ನಡೆದಿದೆ.
07:50 PM (IST) Dec 06
ಮ್ಯೂಟೆಂಟ್ ರಘು ಅವರು ಗಿಲ್ಲಿ ನಟನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಎತ್ತರ ಮತ್ತು ದೇಹದ ಬಗ್ಗೆ ನಿರಂತರವಾಗಿ ಮಾತನಾಡಿ, ಕೋಟ್ಯಂತರ ಜನರ ಮುಂದೆ ತನ್ನ ವರ್ಚಸ್ಸನ್ನು ಹಾಳುಮಾಡುತ್ತಿದ್ದಾನೆ ಎಂದು ರಘು ಆಕ್ರೋಶ ವ್ಯಕ್ತಪಡಿಸಿದ್ದಾರೆ.
07:43 PM (IST) Dec 06
ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪುಗಳನ್ನು ಮಾಡಿದ್ದಾರೆ. ಎರಡು ಚಿತ್ರಗಳ ವಿಷಯದಲ್ಲಿ ಚರಣ್ ತೆಗೆದುಕೊಂಡ ನಿರ್ಧಾರವು ಹಿನ್ನಡೆಯಾಯಿತು. ಅದೇನು ಎಂದು ಈ ಲೇಖನದಲ್ಲಿ ತಿಳಿಯಿರಿ.
07:24 PM (IST) Dec 06
ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಈಕೆ, 10 ಭಾಷೆಗಳಲ್ಲಿ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 50 ವರ್ಷವಾದರೂ ಇನ್ನೂ ಮದುವೆಯಾಗದೆ ಒಂಟಿ ಜೀವನ ನಡೆಸುತ್ತಿರುವ ಈ ನಟಿ ಯಾರು ಗೊತ್ತಾ?
07:19 PM (IST) Dec 06
ಹಾವೇರಿ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾರೆ. ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದ ಅವರ ದೇಹವನ್ನು ಕೈಯಲ್ಲಿದ್ದ ಉಂಗುರ ಮತ್ತು ಕಾರ್ ನಂಬರ್ ಪ್ಲೇಟ್ನಿಂದ ಪತ್ತೆಹಚ್ಚಲಾಗಿತ್ತು.
06:51 PM (IST) Dec 06
ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಹೇಗೆ ಕಲ್ಪಿಸಬಹುದು ಎಂಬುದರ ಕುರಿತಂತೆ ಅಂತಾರಾಷ್ಟ್ರೀಯ ಸ್ಯಾಂಡ್ವಿಚ್ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲು ಗಂಭೀರ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
06:37 PM (IST) Dec 06
ಹೆಚ್ಚುತ್ತಿರುವ ಮನೋವೈದ್ಯಕೀಯ ಮತ್ತು ಮಾನಸಿಕ ಅಸ್ವಸ್ಥತೆಗಳ ಸವಾಲು ಎದುರಿಸಲು ವಿಶೇಷ ನವೀಕೃತ ಮತ್ತು ನಾವೀನ್ಯತಾ ಪ್ರಯತ್ನಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
05:58 PM (IST) Dec 06
ಮುಂಗಡವಾಗಿ ಪಾಸ್ ಪಡೆದುಕೊಂಡವರಿಗೆ ಮಾತ್ರ ಚಿತ್ರಮಂದಿರ ಪ್ರವೇಶ ದೊರೆಯಲಿದೆ. ಅರ್ಜುನ್ ಜನ್ಯ ನಿರ್ದೇಶಿಸಿ, ರಮೇಶ್ ರೆಡ್ಡಿ ನಿರ್ಮಿಸಿರುವ ‘45’ ಚಿತ್ರವು ಡಿ.25ರಂದು ತೆರೆಗೆ ಬರುತ್ತಿದೆ.
05:42 PM (IST) Dec 06
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಇಬ್ಬರು ಸೇರಿ ರಾಜ್ಯ ಲೂಟಿ ಮಾಡುತ್ತಿದ್ದಾರೆ. ಕೈಗಾರಿಕೆ ತರುವುದು ಸೇರಿದಂತೆ ಯಾವುದೇ ಅಭಿವೃದ್ದಿ ಬಗ್ಗೆ ಮಾತಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
05:39 PM (IST) Dec 06
ಸಾಂಸಾರಿಕ ಜೀವನ ಶಾಂತಿಯುತವಾಗಿರಬೇಕಾದ್ರೆ ಎಂತಹ ಹೆಣ್ಣನ್ನು ಮದುವೆ ಮಾಡಿಕೊಳ್ಳಬೇಕು ಎಂಬುದನ್ನು ಚಾಣಕ್ಯರು ತಿಳಿಸಿದ್ದಾರೆ. ತಮ್ಮ ನೀತಿಯಲ್ಲಿ 6 ರೀತಿಯ ಮಹಿಳೆಯರನ್ನು ಮದುವೆ ಆಗಬಾರದು ಎಂದು ಹೇಳಿದ್ದಾರೆ.
05:23 PM (IST) Dec 06
ಅರ್ಯನ್ ಖಾನ್ ಕನ್ನಡಿಗರ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿಲ್ಲ. ಆ ಘಟನೆ ನಡೆದಾಗ ನಾನು ಅಲ್ಲಿಯೇ ಇದ್ದೇ ಅವರು ತಮ್ಮ ಮ್ಯಾನೇಜರ್ ಕಮ್ ಸ್ನೇಹಿತನಿಗೆ ಸನ್ನೆ ಮಾಡಿದ್ದು ಜನರಿಗಲ್ಲ ಎಂದು ನಟ ಝೈದ್ ಖಾನ್ ಹೇಳಿದ್ದಾರೆ.
04:56 PM (IST) Dec 06
ಕೆಲವೇ ಗಂಟೆಗಳಲ್ಲಿ ಡೆವಿಲ್ ಟ್ರೇಲರ್ ಮೂರು ಮಿಲಿಯನ್ ವೀಕ್ಷಣೆ ಕಂಡಿದೆ. ದರ್ಶನ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ, ಪವರ್ಫುಲ್ ಡೈಲಾಗ್ಗಳಿಂದ ತುಂಬಿರುವ ಚಿತ್ರದ ಟ್ರೇಲರನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
04:44 PM (IST) Dec 06
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಅವರು, ರಾಜ್ಯಕ್ಕೆ ಆಗುತ್ತಿರುವ ಜಿಎಸ್ಟಿ ನಷ್ಟದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
04:42 PM (IST) Dec 06
'ಕಾಂತಾರ' ಚಿತ್ರದ ದೈವದ ಸೀನ್ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅಪಮಾನ ಮಾಡಿದ್ದಾರೆ ಎನ್ನಲಾದ ವಿವಾದಕ್ಕೆ ನಟಿ ಸಪ್ತಮಿ ಗೌಡ ಪ್ರತಿಕ್ರಿಯಿಸಿದ್ದಾರೆ. ದೈವಾರಾಧನೆ ಅಥವಾ ಸಂಸ್ಕೃತಿಗೆ ನೋವಾಗಬಾರದು ಎಂದರು. ಜೊತೆಗೆ ತಮ್ಮ ಮುಂಬರುವ 'ರೈಸ್ ಆಫ್ ಅಶೋಕ' ಚಿತ್ರದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
04:25 PM (IST) Dec 06
ನೋಡಪ್ಪಾ ನಾನು ಎಷ್ಟು ವಾಚ್ ಬೇಕಾದ್ರು ನನ್ನ ದುಡ್ಡಲ್ಲಿ ತೆಗೆದುಕೊಳ್ಳುವ ಶಕ್ತಿ ನನಗಿದೆ. ಯಾರು ಪ್ಯಾಂಟ್ ಹಾಕ್ತಾರೆ, ವಾಚ್ ಹಾಕ್ತಾರೆ, ಕನ್ನಡಕ ಹಾಕೋತಾರೆ ನಾನು ಪ್ರಶ್ನೆ ಮಾಡೋಕೆ ಹೋಗೊಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
04:10 PM (IST) Dec 06
ನಿಧಾನ ಕತೆಯ ಹರಿವಿನ ಜೊತೆ ಪದೇ ಪದೇ ಬರುವ ಗಿಡುಗನನ್ನೂ ಸಹಿಸಬೇಕು. ಕೊನೆಯ ಭಾಗ ಕಾವ್ಯದ ಹಾಗೆ ಮನಸ್ಸಲ್ಲುಳಿಯುತ್ತದೆ. ಪುರಾಣ ಕಾಲದ ಕರ್ಣ ನೆನಪಾಗುತ್ತಾನೆ. ಆ ಹೊತ್ತಿನ ಹಾಡೂ ಮನಸ್ಸಲ್ಲುಳಿಯುತ್ತದೆ.
04:08 PM (IST) Dec 06
ಪತ್ನಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕ್ಕಿ ಅತುಲ್ ಸುಭಾಷ್ ಸ್ಮರಣಾರ್ಥ ಬೆಂಗಳೂರಿನ ಫ್ರೀಡಮ್ ಪಾರ್ಕ್ನಲ್ಲಿ 'STOP killing Men' ಎಂಬ ಶೀರ್ಷಿಕೆಯಡಿ ಪ್ರತಿಭಟನೆ ನಡೆಯಿತು. ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ಈ ಪ್ರತಿಭಟನೆ ಆಯೋಜಿಸಿತ್ತು.
04:00 PM (IST) Dec 06
BBK 12 Gilli Nata: ಗಿಲ್ಲಿ ನಟ ಅವರು ಊರಿನಲ್ಲಿದ್ದಾಗಲೇ ಸ್ಕ್ರಿಪ್ಟ್ ಬರೆದು, ನಟಿಸಿ, ನಿರ್ದೇಶನ ಮಾಡಿರುವ ಸಿರೀಸ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ಕಾಮಿಡಿ ವಿಡಿಯೋಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅದಾದ ನಂತರ ಅವರು ರಿಯಾಲಿಟಿ ಶೋಗಳಲ್ಲಿ ಭಾಗಿಯಾದರು.
03:38 PM (IST) Dec 06
Actress Alia Bhatt Home: ನಟಿ ಆಲಿಯಾ ಭಟ್, ರಣಬೀರ್ ಕಪೂರ್ ಅವರು ಕೆಲ ಸಮಯದಿಂದ ಸಿನಿಮಾದ ಜೊತೆಗೆ ಹೊಸ ಮನೆ ಕಟ್ಟಡದ ಕಡೆಗೆ ಗಮನ ಕೊಡುತ್ತಲಿದ್ದರು. ಈಗ ಮನೆ ರೆಡಿ ಆಗಿದ್ದು, ಗೃಹ ಪ್ರವೇಶವೂ ಆಗಿದೆ. ಮುಂಬೈನ ಹೊಸ ಬಂಗಲೆಯೊಳಗಿನ ಅಪರೂಪದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
03:15 PM (IST) Dec 06
KN Rajanna on DK Shivakumar: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ. ಅಲ್ಲದೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ತಾನು ಸಚಿವನಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
03:11 PM (IST) Dec 06
Bigg Boss Kannada 12: ಈ ವಾರ ಯಾವೆಲ್ಲ ವಿಷಯಗಳು ಚರ್ಚೆ ಆಗಲಿವೆ ಎಂಬ ಪ್ರಶ್ನೆ ಇತ್ತು. ಈಗ ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿದ್ದು ಧ್ರುವಂತ್ ಹಾಗೂ ರಜತ್ ಅವರ ನಡುವೆ ವಾದ-ವಿವಾದ ಆಗಿವೆ. ಆಗ ಒಂದಿಷ್ಟು ಪ್ರಶ್ನೆಗಳು ಇವೆ ಎಂದು ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಹೇಳಿದ್ದಾರೆ.
03:10 PM (IST) Dec 06
ಕ್ರೈಸ್ಟ್ಚರ್ಚ್ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ನೀಡಿದ 531 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್, ಸೋಲಿನ ದವಡೆಯಿಂದ ಪಾರಾಗಿ ಪಂದ್ಯವನ್ನು ರೋಚಕವಾಗಿ ಡ್ರಾ ಮಾಡಿಕೊಂಡಿತು.
03:06 PM (IST) Dec 06
CT Ravi: ಬಿಜೆಪಿ ಮುಖಂಡ ಸಿ.ಟಿ. ರವಿ, ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರ ಸಂಕಷ್ಟಗಳಿಗೆ ಸ್ಪಂದಿಸದೆ, ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗಿಲಿಗಿಲಿಯಂತಾ ಸೌಂಡ್ ಮಾಡಿಸ್ಕೊಂಡು ಕರ್ಕೊಂಡು ಬರ್ತಾರೆ ಎಂದರು.
02:59 PM (IST) Dec 06
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ , ದೈವದ ಹರಕೆ ತೀರಿಸಲು ರಿಷಬ್ ಶೆಟ್ಟಿ ಕುಟುಂಬ ಸಮೇತ ತಮ್ಮ ವೆಲ್ಫೈರ್ ಕಾರಿನಲ್ಲಿ ಆಗಮಿಸಿದ್ದಾರೆ. ಬ್ಲಾಕ್ ಎಡಿಶನ್ ವೆಲ್ಫೈರ್ ಕಾರು ಮಿನಿ ವಿಮಾನ ಎಂದೇ ಕರೆಯಲಾಗುತ್ತದೆ.
02:46 PM (IST) Dec 06
Luxury Watch Row: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ದುಬಾರಿ ವಾಚ್ಗಳ ಕುರಿತ ಬಿಜೆಪಿ ಟೀಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರ ಮನೆಗಳನ್ನು ಮೊದಲು ಪರಿಶೀಲಿಸಲಿ ಎಂದು ಸವಾಲು ಹಾಕಿದ ಅವರು, ಇದು 'ಚಿಲ್ಲರ್ ಕೆಲಸ' ಎಂದಿದ್ದಾರೆ.
01:44 PM (IST) Dec 06
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (BSWML), ಮಿಟ್ಟಗಾನಹಳ್ಳಿ ಮತ್ತು ಕಣ್ಣೂರು ಪ್ರದೇಶಗಳಲ್ಲಿ ಶೇಖರಣೆಯಾಗಿರುವ 2,878 ಮಿಲಿಯನ್ ಲೀಟರ್ ಲೀಚೆಟ್ (ದ್ರವ ತ್ಯಾಜ್ಯ) ಸಂಸ್ಕರಿಸಲು ಮುಂದಾಗಿದೆ. ಇದಕ್ಕಾಗಿ ₹474.89 ಕೋಟಿ ಮೊತ್ತದ ಟೆಂಡರ್ ಅನ್ನು 'ಮುಕ್ಕ ಪ್ರೋಟಿನ್ಸ್ ಲಿಮಿಟೆಡ್'ಗೆ ನೀಡಿದೆ.
01:30 PM (IST) Dec 06
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್ಪೋರ್ಟ್ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ, ದೇಶಾದ್ಯಂತ ಇಂಡಿಗೋ ವಿಮಾನ ರದ್ದಾಗಿರುವ ಕಾರಣ ಕೋಲಾಹಲ ಸೃಷ್ಟಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಲೋಕಲ್ ಮಾರ್ಕೆಟ್ ರೀತಿ ಬದಲಾಗಿದೆ.
01:29 PM (IST) Dec 06
01:26 PM (IST) Dec 06
BBK 12 Episode Update: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ವಯಸ್ಸಿನ ಬಗ್ಗೆ ದೊಡ್ಡ ಚರ್ಚೆ ಆಗಿದೆ. ಆರಂಭದ ವೀಕೆಂಡ್ ಎಪಿಸೋಡ್ನಲ್ಲಿ ಚೈತ್ರಾ ಕುಂದಾಪುರ ವಯಸ್ಸಿನ ಬಗ್ಗೆ ಗಿಲ್ಲಿ ನಟ ಕಾಮಿಡಿ ಮಾಡಿದ್ದರು. ಅದನ್ನು ಚೈತ್ರಾ ಪ್ರಶ್ನೆ ಮಾಡಿದ್ದಾರೆ.
01:24 PM (IST) Dec 06