Karnataka Assembly Election- 2018

ಬಾದಾಮಿಯಲ್ಲಿ ಮಾಜಿ ಸಿಎಂ v/s ಹಾಲಿ ಸಿಎಂ? ‘ಕಣಕ್ಕಿಳಿಯಲು ನಾ ರೆಡಿ’ ಎಂದ ಯಡಿಯೂರಪ್ಪ

Apr 22, 2018, 9:35 PM IST

ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ನಡುವೆ ಸಿಎಂಗೆ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಯತ್ನಿಸುತ್ತಿದೆ. ಶ್ರೀರಾಮುಲುಗೆ ಬಾದಾಮಿಯಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ನಡುವೆ, ಹೈಕಮಾಂಡ್ ಒಪ್ಪಿದರೆ ತಾನು ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಯಲು ತಾನು ಸಿದ್ಧ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೂಡಾ ಹೇಳಿದ್ದಾರೆ.