Karnataka Assembly Election- 2018

ನರ್ಸ್ ಜಯಲಕ್ಷ್ಮಿ ಪರ ಪ್ರಚಾರಕ್ಕಿಳಿದ ಕ್ರಿಕೆಟ್, ಬಾಲಿವುಡ್ ತಾರೆಯರು

May 2, 2018, 6:13 PM IST

ಪ್ರಚಾರದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ನಾವೇನೂ ಕಡಿಮೆಯಿಲ್ಲ ಎಂಬಂತೆ, ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮುಕಿರುವ ಹೊಸ ಪಕ್ಷ ಎಂಇಪಿಯು ಬಾಲಿವುಡ್, ಕ್ರಿಕೆಟ್ ತಾರೆಯರನ್ನು ಪ್ರಚಾರಕ್ಕೆ ಕರೆತಂದಿದೆ. ಬಿಟಿಎಮ್ ಲೇಔಟ್‌ನಿಂದ ಸ್ಪರ್ಧಿಸುತ್ತಿರುವ ನರ್ಸ್ ಜಯಲಕ್ಷ್ಮಿ ಪರ ಸಲ್ಮಾನ್ ಖಾನ್ ಸಹೋದರರಾದ ಅರ್ಬಾಝ್ ಖಾನ್ ಹಾಗೂ ಸೊಹೈಲ್ ಖಾನ್, ಹಾಗೂ ಕ್ರಿಕೆಟಿಗ ಅಜರ್ ಅಲಿ ಮಂಗಳವಾರ ಪ್ರಚಾರ ನಡೆಸಿದ್ದಾರೆ.