Karnataka Assembly Election- 2018

ಟೀ ಮಾರಿ ಮತಬೇಟೆಗಿಳಿದ ಕೋಟ್ಯಾಧಿಪತಿ ಅಭ್ಯರ್ಥಿ!

Apr 29, 2018, 4:38 PM IST

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿವುಳಿದಿವೆ. ಅಭ್ಯರ್ಥಿಗಳು ಮತದಾರರನ್ನು ಓಲೈಸಲು ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಅನಿಲ್ ಕುಮಾರ್ ಟೀ ಮಾರುವ ಮೂಲಕ ಜನರ ಮತಬೇಟೆಗಿಳಿದಿದ್ದಾರೆ. 339 ಕೋಟಿಯ ಒಡೆಯರಾಗಿರುವ ಅನಿಲ್ ಕುಮಾರ್  ಟೀ ಮಾರಾಟದಿಂದಲೇ ತಮ್ಮ ವೃತ್ತಿ ಬದುಕನ್ನು ಆರಂಭಿಸಿದವರು. ಇದೀಗ ಚುನಾವಣೆಯಲ್ಲಿ ಅವರ ಚಿಹ್ನೆಯು ಕೂಡಾ ಟೀ ಕಪ್ ಆಗಿದೆ.