ಶ್ರೀನಗರ ಎನ್‌ಕೌಂಟರ್; ಇಬ್ಬರು ಹಿಜ್ಬುಲ್ ಮುಜಾಹೀದ್ದೀನ್ ಉಗ್ರರ ಹತ್ಯೆ!

By Suvarna NewsFirst Published May 19, 2020, 6:13 PM IST
Highlights

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹೀದ್ದೀನ್ ಉಗ್ರ ಸಂಘಟನೆ ಚಟುವಟಿಕೆ ಗರಿಗೆದರುತ್ತಿದ್ದಂತೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್, ಸ್ಫೋಟಕ ತಜ್ಞನ ಹತ್ಯೆ ಬೆನ್ನಲ್ಲೇ ಇದೀಗ ಮತ್ತಿಬ್ಬರು ಉಗ್ರರನ್ನು ಹೊಡೆದುರಳಿಸಲಾಗಿದೆ. ಈ ಎನ್‌ಕೌಂಟ್‌ನಲ್ಲಿ ಓರ್ವ ಪೊಲೀಸ್ ಪೇದೆ ಹುತಾತ್ಮರಾಗಿದ್ದಾರೆ.

ಶ್ರೀನಗರ(ಮೇ.19): ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದ್ದಂತೆ ಭಾರತೀಯ ಸೇನೆ ಉಗ್ರರ ಕ್ಯಾಂಪ್, ಅಡಗುತಾಣಗಳನ್ನು ಗುರುತಿಸಿ ಧ್ವಂಸ ಮಾಡುತ್ತಿದೆ. ಇದೀಗ ಶ್ರೀನಗರದ ನವಾಕಡಲ್ ವಲಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಹಿಜ್ಬುಲ್ ಮಜಾಹೀದ್ದೀನ್ ಉಗ್ಗರು ಹಾಗೂ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕನ ಪುತ್ರ ಹತರಾಗಿದ್ದಾರೆ.

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ನವಕಡಲ್ ವಲಯದ ಮನೆಯೊಂದರಲ್ಲಿ ಉಗ್ರರು ಅವಿತುಕೊಂಡಿರುವ ಮಾಹಿತಿ ಪಡೆದ ಸೇನೆ ರಾತ್ರಿ 2 ಗಂಟೆಗೆ ದಾಳಿ ನಡೆಸಿತ್ತು.  CRPF ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಉಗ್ರರ ಅವಿತುಕೊಂಡಿದ್ದ ಮನೆ ಮೇ ದಾಳಿ ಮಾಡಿದ್ದಾರೆ. ಈ ವೇಳೆ ಉಗ್ರರು ಕೂಡ ಪ್ರತಿ ದಾಳಿ ಮಾಡಿದ್ದಾರೆ.  ಸತತ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದರೆ, ಉಗ್ರರಿಗೆ ಅಶ್ರಯ ನೀಡಿ ಸಲಹಿದ್ದ ಕಾಶ್ಮೀರ ಪ್ರತ್ಯೇಕತವಾದಿ ನಾಯಕನ ಪುತ್ರ ಕೂಡ ಹತ್ಯೆಯಾಗಿದ್ದಾನೆ.

ಭಯೋತ್ಪಾದನಾ ಚಟುವಟಿಕೆ ನಿಲ್ಲಿಸಿ; ಪಾಕ್‌ಗೆ ಎಚ್ಚರಿಕೆ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ

ಈ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮನಾಗಿದ್ದಾರೆ. ಓರ್ವ ಪೊಲೀಸ್ ಹಾಗೂ ಓರ್ವ  CRPF ಜವಾನ ಗಾಯಗೊಂಡಿದ್ದಾರೆ. ಇಷ್ಟೇ ಅಲ್ಲ ಭಯೋತ್ಪಾದರು ಆಶ್ರಯ ಪಡೆದಿದ್ದ 2 ಮನೆಗಳನ್ನು ಧ್ವಂಸ ಮಾಡಲಾಗಿದೆ.  ಮುಂಜಾಗ್ರತ ಕ್ರಮವಾಗಿ ಶ್ರೀನಗರದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಇತ್ತೀಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಝ್ ನೈಕೂ ಹಾಗೂ ಸುಧಾರಿತ ಸ್ಫೋಟಕ ತಯಾರಿಸುತ್ತಿದ್ದ ತಾಹೀರ್ ಭಟ್ ಸೇನಾ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದರು. ಇದೀಗ ಮತ್ತಿಬ್ಬರು ಉಗ್ರ ಹಾಗೂ ಉಗ್ರರಿಗೆ ಸಹಕರಿಸಿ ಕಾಶ್ಮೀರ ಪ್ರತ್ಯೇಕತವಾದಿ ನಾಯಕನ ಪುತ್ರನನ್ನು ಹತ್ಯೆ ಮಾಡಲಾಗಿದೆ.

click me!