ರೇಪ್‌ ಆರೋಪಿ, ತಮಿಳುನಾಡಿನ ಮಾಜಿ ಸಚಿವ ಬೆಂಗಳೂರಿನಲ್ಲಿ ಸೆರೆ!

By Suvarna NewsFirst Published Jun 21, 2021, 8:50 AM IST
Highlights

* ಮಲೇಷ್ಯಾ ಮೂಲದ ನಟಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪ 

* ರೇಪ್‌ ಆರೋಪಿ, ತಮಿಳುನಾಡಿನ ಮಾಜಿ ಸಚಿವ ಬೆಂಗ್ಳೂರಲ್ಲಿ ಸೆರೆ

* ಎಐಎಡಿಎಂಕೆ ನಾಯಕ ಮಣಿಕಂಠನ್‌ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ

ಚೆನ್ನೈ(ಜೂ.21): ಮಲೇಷ್ಯಾ ಮೂಲದ ನಟಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ತಮಿಳುನಾಡಿನ ಮಾಜಿ ಸಚಿವ, ಎಐಎಡಿಎಂಕೆ ನಾಯಕ ಮಣಿಕಂಠನ್‌ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

‘ಮಣಿಕಂಠನ್‌ ಜೊತೆ ನಾನು ಕೆಲ ವರ್ಷಗಳಿಂದ ಸಂಬಂಧ ಹೊಂದಿದ್ದೆ. ಅವರು ನನ್ನನ್ನು ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಹಲವು ಬಾರಿ ಬೆದರಿಕೆ ಹಾಕಿ ಗರ್ಭಪಾತ ಮಾಡಿಸಿದ್ದರು. ಇದೀಗ ನನ್ನನ್ನು ದೂರ ಮಾಡಿದ್ದಾರೆ’ ಎಂದು ಕೆಲ ದಿನಗಳ ಹಿಂದೆ ಮಲೇಷ್ಯಾ ಮೂಲದ ಮಹಿಳೆಯೊಬ್ಬರು ತಮಿಳುನಾಡಿನ ಅಡ್ಯಾರ್‌ನಲ್ಲಿ ದೂರು ದಾಖಲಿಸಿದ್ದರು.

ಈ ಆರೋಪವನ್ನು ನಿರಾಕರಿಸಿದ್ದ ಮಣಿಕಂಠನ್‌, ನಿರೀಕ್ಷಣಾ ಜಾಮೀನಿಗೆ ಯತ್ನಿಸಿದ್ದರಾದರೂ ಅದರಲ್ಲಿ ವಿಫಲಾಗಿದ್ದರು. ಬಳಿಕ ಅವರು ನಾಪತ್ತೆಯಾಗಿದ್ದರು. ಈ ನಡುವೆ ಅವರು ಬೆಂಗಳೂರಿನಲ್ಲಿ ಇರುವ ಸುಳಿವು ಪಡೆದ ಪೊಲೀಸರು, ಐಟಿ ಸಿಟಿಗೆ ಧಾವಿಸಿ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ.

click me!