'ವಿಜ್ಞಾನದ ತತ್ವಗಳ ಮೂಲ ವೇದಗಳು..', ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌!

Published : May 25, 2023, 07:21 PM IST
'ವಿಜ್ಞಾನದ ತತ್ವಗಳ ಮೂಲ ವೇದಗಳು..', ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌!

ಸಾರಾಂಶ

ವಿಜ್ಞಾನದ ತತ್ವಗಳ ಮೂಲ ವೇದಗಳಾಗಿದ್ದವು. ಆದರೆ, ಇದೇ ತತ್ವಗಳನ್ನು ಪಾಶ್ಚಿಮಾತ್ಯರು ತಮ್ಮ ಆವಿಷ್ಕಾರ ಎಂದು ಹೇಳುವ ಮೂಲಕ ರೀ ಪ್ಯಾಕೇಜ್‌ ಮಾಡಿ ನಮಗೆ ನೀಡುತ್ತಿದ್ದಾರೆ ಎಂದು ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌ ಹೇಳಿದ್ದಾರೆ.  

ಉಜ್ಜಯನಿ (ಮೇ.25): ಬೀಜಗಣಿತ, ವರ್ಗಮೂಲಗಳು, ಸಮಯದ ಪರಿಕಲ್ಪನೆಗಳು, ವಾಸ್ತುಶಿಲ್ಪ, ಬ್ರಹ್ಮಾಂಡದ ರಚನೆ, ಲೋಹಶಾಸ್ತ್ರ, ವಾಯುಯಾನವು ಮೊಟ್ಟಮೊದಲು ಕಂಡು ಬಂದಿದ್ದು ವೇದಗಳಲ್ಲಿ. ಆದರೆ, ಅರಬ್‌ ದೇಶಗಳ ಮೂಲಕ ಈ ವಿಚಾರಧಾರೆಗಳು ಯುರೋಪ್‌ಗೆ ಪ್ರಯಾಣಿಸಿದವು. ನಂತರ ಪಶ್ಚಿಮ ಪ್ರಪಂಚದ ವಿಜ್ಞಾನಿಗಳಿಂದ ಅವುಗಳು ಆವಿಷ್ಕಾರಗಳಾಗಿ ನಮ್ಮಲ್ಲಿಗೆ ಬಂದವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್‌ ಸೋಮನಾಥ್‌ ಬುಧವಾರ ಹೇಳಿದ್ದಾರೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾದ ಸೋಮನಾಥ್ ಅವರು, ಆ ಕಾಲದ ಭಾರತೀಯ ವಿಜ್ಞಾನಿಗಳು ಬಳಸುತ್ತಿದ್ದ ಭಾಷೆಯಾದ ಸಂಸ್ಕೃತಕ್ಕೆ ಲಿಖಿತ ಲಿಪಿ ಇರಲಿಲ್ಲ. ಆರಂಭದಲ್ಲಿ ಇದು ಕೇಳುವ ಭಾಷೆ ಮಾತ್ರವೇ ಆಗಿತ್ತು. ಹೃದಯದಿಂದ ಮಾತ್ರವೇ ಇದನ್ನು ಕಲಿಯುತ್ತಿದ್ದರು. ಹಾಗಾಗಿಯೇ ಈ ಭಾಷೆ ಉಳಿದುಕೊಂಡಿತು. ಆ ನಂತರವೇ ಜನರು ಸಂಸ್ಕೃತಕ್ಕೆ ದೇವನಾಗರಿ ಲಿಪಿಯನ್ನು ಬಳಸಲು ಆರಂಭ ಮಾಡಿದರು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹರ್ಷಿ ಪಾಣಿನಿ ಸಂಸ್ಕೃತ ಮತ್ತು ವೈದಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಎಸ್‌ ಸೋಮನಾಥ್‌, ಪಾಣಿನಿ ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಬರೆದ ವ್ಯಕ್ತಿ ಎಂದು ನಂಬಲಾಗಿದೆ. ಭಾಷೆಯ ಸಿಂಟ್ಯಾಕ್ಸ್ ಮತ್ತು ರಚನೆಯು "ವೈಜ್ಞಾನಿಕ ಆಲೋಚನೆಗಳು ಮತ್ತು ಪ್ರಕ್ರಿಯೆಗಳನ್ನು ತಿಳಿಸಲು" ಸೂಕ್ತವಾಗಿದೆ ಎಂದು ಸೋಮನಾಥ್ ಹೇಳಿದರು. "ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಸಂಸ್ಕೃತವನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಕಂಪ್ಯೂಟರ್‌ಗಳ ಭಾಷೆಗೆ ಸರಿಹೊಂದುತ್ತದೆ ಮತ್ತು ಕೃತಕ ಬುದ್ಧಿಮತ್ತೆಯನ್ನು ಕಲಿಯುವವರು ಅದನ್ನು ಕಲಿಯುತ್ತಾರೆ. ಸಂಸ್ಕೃತವನ್ನು ಗಣನೆಗೆ ಹೇಗೆ ಬಳಸಬಹುದು ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ." ಖಚಿತವಾಗಿ ಹೇಳುವುದಾದರೆ, ಇದರಲ್ಲಿ ಹೆಚ್ಚಿನವು ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಸಂಸ್ಕೃತದಿಂದ ಇತರ ಪ್ರಯೋಜನಗಳೂ ಇವೆ.ಇವು ವಿಜ್ಞಾನವನ್ನು ಮೀರಿ ವಿಸ್ತರಣೆಯಾಗುವ ಭಾಷೆ ಎಂದು ಹೇಳಿದ್ದಾರೆ.

"ಸಂಸ್ಕೃತದಲ್ಲಿ ಬರೆದ ಭಾರತೀಯ ಸಾಹಿತ್ಯವು ಅದರ ಮೂಲ ಮತ್ತು ತಾತ್ವಿಕ ರೂಪದಲ್ಲಿ ಅತ್ಯಂತ ಶ್ರೀಮಂತವಾಗಿದೆ. ಇದು ವೈಜ್ಞಾನಿಕ ರೂಪದಲ್ಲಿಯೂ ಮುಖ್ಯವಾಗಿದೆ. ಸಂಸ್ಕೃತದಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಅಧ್ಯಯನದ ಪ್ರತ್ಯೇಕತೆಯಿಲ್ಲ" ಎಂದು ಅವರು ಹೇಳಿದರು.

ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಪಯಣದಲ್ಲಿ ಸಂಸ್ಕೃತದಲ್ಲಿ ವಿಜ್ಞಾನಿಗಳ ಕೊಡುಗೆಯ ಛಾಪನ್ನು ಕಾಣಬಹುದು. "ಖಗೋಳಶಾಸ್ತ್ರ, ವೈದ್ಯಕೀಯ, ವಿಜ್ಞಾನ, ಭೌತಶಾಸ್ತ್ರ, ರಾಸಾಯನಿಕ ವಿಜ್ಞಾನ ಮತ್ತು ವೈಮಾನಿಕ ವಿಜ್ಞಾನಗಳ ಸಂಶೋಧನೆಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಆದರೆ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ ಮತ್ತು ಸಂಶೋಧನೆ ಮಾಡಲಾಗಿಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  8 ನೇ ಶತಮಾನದ ಡೇಟಾಗಳಿಗೆ ಖಗೋಳಶಾಸ್ತ್ರದ ಬಗ್ಗೆ ನಂಬಲಾದ ಸೂರ್ಯ ಸಿದ್ಧಾಂತದ ಪುಸ್ತಕವನ್ನು ಉದಾಹರಣೆಯಾಗಿ ನೀಡಿದರು. "ರಾಕೆಟ್ ವಿಜ್ಞಾನಿಯಾಗಿರುವ ನಾನು ಸೌರವ್ಯೂಹ, ಸಮಯದ ಪ್ರಮಾಣ ಮತ್ತು ಭೂಮಿಯ ಗಾತ್ರ ಮತ್ತು ಸುತ್ತಳತೆಯ ಬಗ್ಗೆ ಮಾತನಾಡುವ ಸಂಸ್ಕೃತದ ಈ ಪುಸ್ತಕದಿಂದ ಆಕರ್ಷಿತನಾಗಿದ್ದೆ" ಎಂದು ಅವರು ಹೇಳಿದರು.

ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವ

ಚಂದ್ರಯಾನ-3 ಚಂದ್ರಯಾನ, ಮತ್ತು ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ-1 ಮಿಷನ್ ಸೇರಿದಂತೆ ಹಲವಾರು ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಇಸ್ರೋ ಕಾರ್ಯನಿರ್ವಹಿಸುತ್ತಿದೆ.

ಇಸ್ರೋದಿಂದ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಯಶಸ್ವಿ ಪ್ರಯೋಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು