Published : Oct 04, 2025, 08:19 AM ISTUpdated : Oct 04, 2025, 07:38 PM IST

India Latest News Live: ನವೆಂಬರ್ 15ರಿಂದ ಫಾಸ್ಟ್ಯಾಗ್ ನೀತಿಯಲ್ಲಿ ಮಹತ್ವದ ಬದಲಾವಣೆ, ಪಾವತಿಯಲ್ಲಿ ವಿನಾಯಿತಿ

ಸಾರಾಂಶ

ಬೆಂಗಳೂರು (ಅ.4): ಆಪರೇಷನ್‌ ಸಿಂದೂರ್‌ ವೇಳೆ ಪಾಕಿಸ್ತಾನ ಎಫ್‌-16 ಸೇರಿ 12 ಯುದ್ಧವಿಮಾನವನ್ನ ಭಾರತ ಧ್ವಂಸ ಮಾಡಿದೆ ಎಂದು ಭಾರತೀಯ ಏರ್‌ಫೋರ್ಸ್‌ ತಿಳಿಸಿದೆ. ಅದರೊಂದಿಗೆ ಈ ಕಾರ್ಯಾಚರಣೆಯಲ್ಲಿ ಪಾಕ್‌ನ ಮುಖವಾಡವನ್ನು ಭಾರತ ಬಯಲು ಮಾಡಿದೆ. ಇದೇ ಮೊದಲ ಬಾರಿಗೆ ದಾಳಿಯ ವಿಸ್ತ್ರತ ಚಿತ್ರಣವನ್ನು ವಾಯುಪಡೆಯ ಮುಖ್ಯಸ್ಥರು ಬಹಿರಂಗ ಮಾಡಿದ್ದಾರೆ. ಭಾರತದ ದಾಳಿಯ ಹೊಡೆತಕ್ಕೆ ರಾಡಾರ್‌, ರನ್‌ವೇ ಹಾಗೂ ಹ್ಯಾಂಗರ್‌ ಕೂಡ ನಾಶವಾಗಿದೆ ಎಂದು ಹೇಳಿದ್ದಾರೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

07:38 PM (IST) Oct 04

ನವೆಂಬರ್ 15ರಿಂದ ಫಾಸ್ಟ್ಯಾಗ್ ನೀತಿಯಲ್ಲಿ ಮಹತ್ವದ ಬದಲಾವಣೆ, ಪಾವತಿಯಲ್ಲಿ ವಿನಾಯಿತಿ

ನವೆಂಬರ್ 15ರಿಂದ ಫಾಸ್ಟ್ಯಾಗ್ ನೀತಿಯಲ್ಲಿ ಮಹತ್ವದ ಬದಲಾವಣೆ, ಪಾವತಿಯಲ್ಲಿ ವಿನಾಯಿತಿ ನೀಡಲಾಗಿದೆ. ಹಲವು ಅಪ್‌ಡೇಟ್ ಬಳಿಕ ಇದೀಗ ಪಾವತಿಯಲ್ಲಿ ಮಾಡಿರುವ ವಿನಾಯಿತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನ.15ರಿಂದ ಫಾಸ್ಟ್ಯಾಗ್‌ನಲ್ಲಿ ಬದಲಾವಣೆ ಏನು?

Read Full Story

06:54 PM (IST) Oct 04

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ, ಡೆಂಟಲ್ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ, ಹೈದರಾಬಾದ್ ಡೆಂಟಲ್ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ ಯಾಗಿದೆ. ಬಿಡುವಿನ ವೇಳೆ ಗ್ಯಾಸ್ ಸ್ಟೇಶನ್‌ನಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

 

Read Full Story

06:34 PM (IST) Oct 04

ಮಹಿಳೆಯರಿಗೆ ಸಿಗಲಿದೆ ಬ್ಯಾಂಕ್​ಗಿಂತಲೂ ಅಧಿಕ ಬಡ್ಡಿ - PM Mahila Samman ಯೋಜನೆ ಡಿಟೇಲ್ಸ್​ ಇಲ್ಲಿದೆ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಹಿಳೆಯರಿಗೆ ವಾರ್ಷಿಕ 7.5% ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಡಿ ಗರಿಷ್ಠ 2 ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಎರಡು ವರ್ಷಗಳ ನಂತರ ₹2,32,044 ಹಿಂಪಡೆಯಬಹುದು. ಈ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ.

Read Full Story

06:05 PM (IST) Oct 04

36 ವರ್ಷದ ಪತ್ನಿಯ ಆಸೆ ಈಡೇರಿಸಿದ 18 ವರ್ಷದ ಗಂಡ

18 year old husband 36 year old wife: ಇವರಿಬ್ಬರ 18 ವರ್ಷಗಳ ವಯಸ್ಸಿನ ಅಂತರದಿಂದಾಗಿ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಇವರನ್ನು ತಾಯಿ-ಮಗನ ಸಂಬಂಧಕ್ಕೆ ಹೋಲಿಸಿ ಟೀಕಿಸಿದ್ದಾರೆ.

Read Full Story

04:59 PM (IST) Oct 04

ಒಂದೂ ಮ್ಯಾಚ್ ಸೋಲದೇ ಎರಡು ಐಸಿಸಿ ಟ್ರೋಫಿ ಗೆದ್ರೂ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿಯಿಂದ ಗೇಟ್‌ಪಾಸ್ ನೀಡಿದ್ದೇಕೆ?

ಮುಂಬೈ: ಭಾರತ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಯುಗಾಂತ್ಯವಾಗಿದೆ. ಸತತ ಎರಡು ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ.

 

Read Full Story

04:27 PM (IST) Oct 04

ಇದೇ ಮೊದಲ ಬಾರಿಗೆ ಪ್ರತಿ ಸೆಕೆಂಡ್‌ಗೆ 6 ಬಿಲಿಯನ್ ಟನ್ ಹಿಗ್ಗುತ್ತಿರುವ ಹೊಸ ಗ್ರಹ ಪತ್ತೆ

ಇದೇ ಮೊದಲ ಬಾರಿಗೆ ಪ್ರತಿ ಸೆಕೆಂಡ್‌ಗೆ 6 ಬಿಲಿಯನ್ ಟನ್ ಹಿಗ್ಗುತ್ತಿರುವ ಹೊಸ ಗ್ರಹ ಪತ್ತೆ, ಈ ಗ್ರಹ ಸ್ವತಂತ್ರವಾಗಿ ತೇಲಾಡುತ್ತಿರುವ ಗ್ರಹವಾಗಿದೆ. ಇದರ ಗುಣಲಕ್ಷಣ ನಕ್ಷತ್ರದ ರೀತಿ ಇದ್ದರೂ ಬೆಳೆಯುತ್ತಿರುವ ವೇಗ ಮಾತ್ರ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ.

Read Full Story

03:54 PM (IST) Oct 04

ಭಾರತದ ಟಾಪ್ 5 ಶ್ರೀಮಂತರು ಓದಿದ್ದೆಷ್ಟು? ಡ್ರಾಪ್‌ಔಟ್, ಸೀಟು ಸಿಗದವರಿಗೆ ಅದಾನಿ ಸ್ಪೂರ್ತಿ

ಭಾರತದ ಟಾಪ್ 5 ಶ್ರೀಮಂತರು ಓದಿದ್ದೆಷ್ಟು? ಡ್ರಾಪ್‌ಔಟ್, ಸೀಟು ಸಿಗದವರಿಗೆ ಅದಾನಿ ಸ್ಪೂರ್ತಿ, ಭಾರತದ ಶ್ರೀಮಂತರ ಲಿಸ್ಟ್‌ನಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವರು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ವಿದ್ಯಾಭ್ಯಾಸ ಏನು?

 

Read Full Story

03:44 PM (IST) Oct 04

ರೋಹಿತ್ ಶರ್ಮಾ ಬಿಟ್ಟು ಗಿಲ್‌ಗೆ ಒನ್‌ಡೇ ನಾಯಕತ್ವ ಪಟ್ಟ ಕಟ್ಟಿದ್ದೇಕೆ? ಹೊಸ ಬಾಂಬ್ ಸಿಡಿಸಿದ ಅಜಿತ್ ಅಗರ್ಕರ್!

ಮುಂಬೈ: ಆಸ್ಟ್ರೇಲಿಯಾ ಪ್ರವಾಸಕ್ಕೆ ಇದೀಗ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಆಸೀಸ್ ಪ್ರವಾಸದಲ್ಲಿ ಭಾರತ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ. ಏಕದಿನ ಸರಣಿಗೆ ರೋಹಿತ್ ಕೆಳಗಿಳಿಸಿ ಗಿಲ್‌ಗೆ ನಾಯಕ ಪಟ್ಟ ಕಟ್ಟಿದ್ದೇಕೆ ಎನ್ನುವುದನ್ನು ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ವಿವರಿಸಿದ್ದಾರೆ.

Read Full Story

03:11 PM (IST) Oct 04

ಪೀರಿಯಡ್ಸ್‌ ಟೈಮ್‌ನಲ್ಲೂ ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಮಾಡಿದ್ದೆ ಎಂದ ಖ್ಯಾತ ಕಿರುತೆರೆ ನಟಿ!

Actress Prarthana Behere Shares Story of Visiting Temple During Menstruation  ನಟಿ ಪ್ರಾರ್ಥನಾ ಬೆಹೆರೆ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಶಾಲಾ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ.

Read Full Story

02:59 PM (IST) Oct 04

ಆಸ್ಟ್ರೇಲಿಯಾ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡ ಪ್ರಕಟ; ರೋಹಿತ್ ಶರ್ಮಾಗೆ ಶಾಕ್, ಗಿಲ್ ಹೊಸ ಕ್ಯಾಪ್ಟನ್!

ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ಶುಭ್‌ಮನ್ ಗಿಲ್ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಾಯಕತ್ವದಡಿ ಆಡಲಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ.
Read Full Story

01:24 PM (IST) Oct 04

ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆ ಯಾರು? ವಾರ್ಷಿಕ ಆದಾಯ ಎಷ್ಟು?

ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಮಹಿಳೆ ಎಂದು ಸಂಗೀತಾ ಅವರನ್ನು ಗುರುತಿಸಲ್ಪಡುತ್ತಾರೆ. 45 ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ.

Read Full Story

12:31 PM (IST) Oct 04

ಅಮೆರಿಕ ಮೂಲದ AI ಕಂಪನಿ Anthropic ಸಿಟಿಓ ಆಗಿ ನೇಮಕವಾದ PESIT ಮಾಜಿ ವಿದ್ಯಾರ್ಥಿ, ಉತ್ತರ ಕರ್ನಾಟಕದ ರಾಹುಲ್‌ ಪಾಟೀಲ್‌!

PESIT Alumnus Rahul Patil Appointed CTO of US-based AI Company Anthropic ಅಮೆರಿಕದ ಕೃತಕ ಬುದ್ಧಿಮತ್ತೆ ಕಂಪನಿ ಆಂಥ್ರೊಪಿಕ್‌ನ ನೂತನ ಸಿಟಿಒ ಆಗಿ ಬೆಂಗಳೂರಿನ ರಾಹುಲ್‌ ಪಾಟೀಲ್‌ ನೇಮಕಗೊಂಡಿದ್ದಾರೆ.  ಅವರ ಪಯಣ ಹಲವರಿಗೆ ಸ್ಪೂರ್ತಿದಾಯಕವಾಗಿದೆ.

Read Full Story

12:23 PM (IST) Oct 04

ಜಿಯೋ, ಏರ್‌ಟೈಲ್, ವೊಡಾಫೋನ್‌ಗೆ ಗುನ್ನಾ ಕೊಟ್ಟ BSNL - ಅಚ್ಚರಿಯ ಸೇವೆಗೆ ಗ್ರೀನ್ ಸಿಗ್ನಲ್

Amazing service from BSNL: ಈ ಸೌಲಭ್ಯವು ಸೆಲ್ಯುಲಾರ್ ಕವರೇಜ್ ಕಡಿಮೆ ಇರುವ ಪ್ರದೇಶಗಳಲ್ಲಿ ವೈ-ಫೈ ನೆಟ್‌ವರ್ಕ್ ಮೂಲಕ ಸ್ಪಷ್ಟವಾದ ವಾಯ್ಸ್ ಕಾಲ್‌ಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಈ ಹೊಸ ಹೆಜ್ಜೆಯು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ನೀಡುವ BSNLನ ಪ್ರಯತ್ನವಾಗಿದೆ.

Read Full Story

11:49 AM (IST) Oct 04

ದಾಂಪತ್ಯ ಕಲಹದ ಭಯಾನಕ ತಿರುವು - ಗಂಡನ ಖಾಸಗಿ ಭಾಗಕ್ಕೆ ಬ್ಲೇಡ್ ಹಾಕಿದ ಹೆಂಡ್ತಿ

Sambhal crime news: ಪತಿಯೊಂದಿಗೆ ಜಗಳವಾಡಿದ ಪತ್ನಿ ಆತನ ಖಾಸಗಿ ಭಾಗವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read Full Story

11:44 AM (IST) Oct 04

"ನಾವಿದ್ದೇವೆ ಅಣ್ಣನಾಗಿ!" - ಹುತಾತ್ಮ ಸೈನಿಕನ ತಂಗಿ ಮದುವೆಯಲ್ಲಿ ಅಣ್ಣನ ಕರ್ತವ್ಯ ನಿಭಾಯಿಸಿದ ಯೋಧರು, ಕಣ್ಣೀರಿಟ್ಟ ವಧು

Soldiers Fulfill Brother Duty at Martyr Ashish Kumar Sister Wedding Gift FD ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ಹುತಾತ್ಮನಾದ ಸೈನಿಕ ಆಶಿಶ್ ಕುಮಾರ್ ಅವರ ತಂಗಿ ಆರಾಧನಾ ಅವರ ವಿವಾಹದಲ್ಲಿ, ಸಹ ಸೈನಿಕರು ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಿದ್ದಾರೆ.

Read Full Story

11:35 AM (IST) Oct 04

ಇಂಗ್ಲೆಂಡ್‌ನ ಟಾಪ್ 5 ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್ಸ್, ಈ ಆಟಗಾರ್ತಿಯರಿಗೆ ಫ್ಯಾನ್ಸ್ ಫಿದಾ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಭರ್ಜರಿ ಶುಭಾರಂಭ ಮಾಡಿದೆ. ಬನ್ನಿ ನಾವಿಂದು ಇಂಗ್ಲೆಂಡ್ ತಂಡದಲ್ಲಿರುವ ಟಾಪ್ 5 ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್ಸ್ ಯಾರು ಎನ್ನುವುದನ್ನು ನೋಡೋಣ.

Read Full Story

11:17 AM (IST) Oct 04

ಜಿಎಸ್‌ಟಿ ಇಳಿಕೆ ಪ್ರಭಾವ, ನವರಾತ್ರಿ ಸಮಯದಲ್ಲಿ ಕಳೆದ 10 ವರ್ಷದಲ್ಲೇ ದಾಖಲೆ ಹಬ್ಬದ ಮಾರಾಟ!

Navratri Sales Soar 10-Year High Driven by GST Cuts ಮೋದಿ ಸರ್ಕಾರದ ಜಿಎಸ್‌ಟಿ ಸುಧಾರಣೆಗಳಿಂದಾಗಿ ತೆರಿಗೆ ದರಗಳು ಕಡಿಮೆಯಾಗಿ, ಈ ಬಾರಿಯ ನವರಾತ್ರಿಯಲ್ಲಿ ಭಾರತದ ಗ್ರಾಹಕ ಆರ್ಥಿಕತೆಯು ದಶಕದ ಅತಿ ಹೆಚ್ಚು ಮಾರಾಟವನ್ನು ಕಂಡಿದೆ. 

Read Full Story

10:28 AM (IST) Oct 04

'ನರಕ ತೋರಿಸ್ತೀವಿ..' ಟ್ರಂಪ್‌ ವಾರ್ನಿಂಗ್‌ ಬೆನ್ನಲ್ಲೇ ಇಸ್ರೇಲ್‌ನ ಎಲ್ಲಾ ಒತ್ತೆಯಾಳುಗಳನ್ನು ರಿಲೀಸ್‌ ಮಾಡಲು ಹಮಾಸ್‌ ಒಪ್ಪಿಗೆ!

Hamas Agrees to Release All Hostages Following Trump's Hell Warning ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಪ್ರಸ್ತಾಪಕ್ಕೆ ಹಮಾಸ್ ಉಗ್ರಗಾಮಿ ಸಂಘಟನೆ ಭಾಗಶಃ ಒಪ್ಪಿಗೆ ಸೂಚಿಸಿದೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ಹೇಳಿದೆ.

Read Full Story

10:07 AM (IST) Oct 04

ಆಪರೇಷನ್‌ ಸಿಂದೂರ ವೇಳೆ ಎಫ್‌-16 ಸೇರಿ ಪಾಕಿಸ್ತಾನದ 12 ಯುದ್ಧವಿಮಾನ ಉಡೀಸ್‌!

IAF Chief Reveals 12 Pak Jets Destroyed in Operation Sindoor ‘ಆಪರೇಷನ್‌ ಸಿಂದೂರದ ವೇಳೆ ತನಗೇನೂ ಹಾನಿ ಆಗಿಲ್ಲ. ಎಲ್ಲ ಹಾನಿಯೂ ಭಾರತಕ್ಕೇ ಆಗಿದೆ. ನಾವೇ ಯುದ್ಧ ಗೆದ್ದಿದ್ದು’ ಎಂದು ಸುಳ್ಳು ಹೇಳುವ ಪಾಕಿಸ್ತಾನದ ನಿಜಚಿತ್ರಣವನ್ನು ಭಾರತ ಮತ್ತೊಮ್ಮೆ ಬಯಲು ಮಾಡಿದೆ.

 

Read Full Story

08:47 AM (IST) Oct 04

ಆಸೀಸ್ ಸರಣಿಗೆ ಇಂದು ಭಾರತ ತಂಡ ಪ್ರಕಟ; ತಂಡದಲ್ಲಿ ಮೇಜರ್ ಚೇಂಜ್?

ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಶೀಘ್ರದಲ್ಲೇ ಪ್ರಕಟವಾಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಸರಣಿಗೆ ಮರಳುವ ನಿರೀಕ್ಷೆಯಿದ್ದು, ಗಿಲ್ ಮತ್ತು ಬುಮ್ರಾಗೆ ವಿಶ್ರಾಂತಿ ಹಾಗೂ ಗಾಯಾಳು ಪಾಂಡ್ಯ ಅಲಭ್ಯರಾಗುವ ಸಾಧ್ಯತೆಯಿದೆ.
Read Full Story

08:21 AM (IST) Oct 04

ಬೈಕ್‌ಗಿಂತ ಕಾರೇಕೆ ಹೆಚ್ಚು ಭಾರ?: ಎಂಜಿನಿಯರ್‌ಗಳಿಗೇ ರಾಗಾ ಪ್ರಶ್ನೆ

ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಲಾಭಗಳ ಕುರಿತು ಕೊಲಂಬಿಯಾ ವಿವಿಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ವಿವರಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸಿದ ಉದಾಹರಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ನಗೆಪಾಟಲಿಗೆ ಈಡಾಗಿದೆ.

 

Read Full Story

08:21 AM (IST) Oct 04

ಇಂದಿನಿಂದ ಒಂದೇ ದಿನದಲ್ಲಿ ಬ್ಯಾಂಕ್‌ಗಳಲ್ಲಿ ಚೆಕ್‌ ಕ್ಲಿಯರ್‌

ಇನ್ನು ಮುಂದೆ ಗ್ರಾಹಕರು ನೀಡಿದ ಚೆಕ್‌ ಕ್ಲಿಯರ್‌ ಆಗಲು ಎರಡು ದಿನ ಕಾಯಬೇಕಿಲ್ಲ. ಬದಲಾಗಿ ಅಂದು ನೀಡಿದ ಚೆಕ್‌ ಅಂದೇ ಕ್ಲಿಯರ್‌ ಆಗಲಿದೆ. ಚೆಕ್‌ ನೀಡಿದ ಕೆಲವೇ ಗಂಟೆಗಳಲ್ಲಿ ಹಣ ಪಾವತಿಯಾಗಲಿದೆ!

 

Read Full Story

08:20 AM (IST) Oct 04

ಶಬರಿಮಲೆ ವಿಗ್ರಹದಿಂದ 4 ಕೆಜಿ ಚಿನ್ನ ನಾಪತ್ತೆ

ಈ ಹಿಂದೆ ದೇಗುಲದ ಗರ್ಭಗುಡಿಗೆ ಸ್ತ್ರೀಯರ ಪ್ರವೇಶದ ವಿಚಾರವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಇದೀಗ ದೇವಸ್ಥಾನದ ಚಿನ್ನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಮತ್ತೆ ಸುದ್ದಿಯಲ್ಲಿದೆ.

 

Read Full Story

08:20 AM (IST) Oct 04

ಭಾರತದ ಮೇಲಿನ ತೆರಿಗೆ ದಾಳೀಲಿ ಸಿಕ್ಕ ಹಣ ಜನರ ಖಾತೆಗೆ : ಟ್ರಂಪ್‌!

ಭಾರತ ಸೇರಿ ವಿವಿಧ ದೇಶಗಳ ಮೇಲಿನ ತೆರಿಗೆ ಹೇರಿಕೆಯಿಂದ ಸಂಗ್ರಹವಾದ ಆದಾಯದ ಒಂದು ಪಾಲನ್ನು ಲಾಭಾಂಶ (ಡಿವಿಡೆಂಡ್) ದ ರೂಪದಲ್ಲಿ ಜನರಿಗೆ ಹಂಚಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಮೆರಿಕನ್ನರಿಗೆ ಗರಿಷ್ಠ 1.77 ಲಕ್ಷ ರುಪಾಯಿವರೆಗೂ ಹಣ ಹಂಚಿಕೆ

 

Read Full Story

08:20 AM (IST) Oct 04

ಕರೂರು ಕಾಲ್ತುಳಿತ ತನಿಖೆಗೆ ಎಸ್ಐಟಿ ರಚನೆ

ತಮಿಳುನಾಡಿನ ಕರೂರಿನಲ್ಲಿ 41 ಜನರ ಸಾವಿಗೆ ಕಾರಣವಾದ ನಟ ವಿಜಯ್‌ರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಮಾವೇಶದ ವೇಳೆ ಸಂಭವಿಸಿದ ಕಾಲ್ತುಳಿತ ತನಿಖೆಗೆ ಮದ್ರಾಸ್‌ ಹೈಕೋರ್ಟ್‌ ಎಸ್‌ಐಟಿ ರಚಿಸಿದೆ. ಹಿರಿಯ ಐಪಿಎಸ್‌ ಅಧಿಕಾರಿ ಅಸ್ರಾ ಗಾರ್ಗ್‌ ಅವರ ನೇತೃತ್ವದಲ್ಲಿ ತನಿಖಾ ದಳ ರಚಿಸಿ ಆದೇಶ ಹೊರಡಿಸಿದೆ.

 

 

Read Full Story

08:19 AM (IST) Oct 04

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನೌಷಧ ಬೇಡ : ಕೇಂದ್ರ

ಅತ್ತ ಕೇಂದ್ರ ಸರ್ಕಾರ ಕಾಫ್‌ಸಿರಪ್‌ನಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ಆರೋಪವನ್ನು ತಿರಸ್ಕರಿಸಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಘಟನೆ ಕುರಿತು ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.

 

Read Full Story

More Trending News