MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಪೀರಿಯಡ್ಸ್‌ ಟೈಮ್‌ನಲ್ಲೂ ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಮಾಡಿದ್ದೆ ಎಂದ ಖ್ಯಾತ ಕಿರುತೆರೆ ನಟಿ!

ಪೀರಿಯಡ್ಸ್‌ ಟೈಮ್‌ನಲ್ಲೂ ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಮಾಡಿದ್ದೆ ಎಂದ ಖ್ಯಾತ ಕಿರುತೆರೆ ನಟಿ!

Actress Prarthana Behere Shares Story of Visiting Temple During Menstruation  ನಟಿ ಪ್ರಾರ್ಥನಾ ಬೆಹೆರೆ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಶಾಲಾ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ.

2 Min read
Author : Santosh Naik
Published : Oct 04 2025, 03:11 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Insstagram

ಇಂದು ಜಗತ್ತು ಬಹಳಷ್ಟು ಬದಲಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ಕೆಲವು ನಂಬಿಕೆಗಳು ಇನ್ನೂ ಹಾಗೆಯೇ ಇವೆ. ಅಂತಹ ಒಂದು ನಂಬಿಕೆಯೆಂದರೆ ಮುಟ್ಟಿನ ಸಮಯದಲ್ಲಿ ದೇವರನ್ನು ಪೂಜಿಸಬಾರದು ಎನ್ನುವುದು. ಮುಟ್ಟಿನ ಬಗ್ಗೆ ಹಲವು ರೀತಿಯ ನಂಬಿಕೆಗಳು ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿವೆ.

27
Image Credit : Instagram

ವಿಶೇಷವಾಗಿ ಪೂಜೆ, ಉಪವಾಸ ಮತ್ತು ದೇವಾಲಯಗಳಿಗೆ ಹೋಗುವುದರ ಬಗ್ಗೆ ಬಹಳ ಕಟ್ಟುನಿಟ್ಟಿನ ನಿಯಮಗಳಿವೆ. ಮುಟ್ಟು ಒಂದು ನೈಸರ್ಗಿಕ ಪ್ರಕ್ರಿಯೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ.

Related Articles

Related image1
ಚಿರು ನೆನಪುಗಳನ್ನೂ ಜೀವಂತವಾಗಿಟ್ಟು ಸುಂದರ ಮನೆಯ ಹೋಮ್‌ ಟೂರ್‌ ಮಾಡಿಸಿದ ಮೇಘನಾ ರಾಜ್‌!
Related image2
ಈಗ ತಾನೆ ಮದ್ವೆ ಆಗಿದ್ದೀನೋ.. ಸಿಟ್ಟಾಗಿದ್ದ ಧ್ರುವ ಸರ್ಜಾಗೆ ಸಮಾಧಾನ ಮಾಡಿದ್ದ ಚಿರಂಜೀವಿ ಸರ್ಜಾ!
37
Image Credit : Instagram

ಈ ನಡುವೆ, ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ಪ್ರಾರ್ಥನಾ ಬೆಹೆರೆ ತಮ್ಮ ಋತುಚಕ್ರದ ಬಗ್ಗೆ ಪ್ರಮುಖ ಹೇಳಿಕೆ ಹೇಳಿದ್ದಾರೆ. ನಟಿ ಪ್ರಾರ್ಥನಾ ಶಾಲಾ ಶಿಕ್ಷಣವನ್ನು ಮುಗಿಸುವಾಗ ಪೀರಿಯಡ್ಸ್‌ ಸಮಯದಲ್ಲಿ ಆಗಿರುವ ಘಟನೆಯನೊಂದನ್ನ ಇತ್ತೀಚೆಗೆ ತಿಳಿಸಿದ್ದಾರೆ.

47
Image Credit : Instagram

ಶಾಲೆ ಪ್ರವಾಸದ ಸಮಯದಲ್ಲಿ ನನಗೆ ಪೀರಿಯಡ್ಸ್ ಆಗಿತ್ತು. ಈ ವೇಳೆ ಕೆಲವರು 'ನೀನು ದೇವಿಯ ದರ್ಶನ ಪಡೆಯೋದು ಸಾಧ್ಯವಿಲ್ಲ' ಎಂದಿದ್ದರು. ಆದರೆ, ನಾನು ದೇವಸ್ಥಾನದ ಒಳಹೊಕ್ಕು ದೇವಿಯ ದರ್ಶನ ಪಡೆದು ಕ್ಷಮೆಯಾಚಿಸಿದ್ದೆ ಎಂದಿದ್ದಾರೆ.

57
Image Credit : Instagram

"ಇಲ್ಲಿ ಒಂದು ಘಟನೆ ಹಂಚಿಕೊಳ್ಳಬೇಕು ಅಂತಾ ನನಗೆ ಆಸೆ ಇದೆ. ನಾನು ದೇವಿಯ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋದಾಗಲೆಲ್ಲಾ, ಅವಳು ನನ್ನ ತಾಯಿ ಅಂತ ನನಗೆ ಅನಿಸುತ್ತದೆ. ನಾನು ಶಾಲೆಯಲ್ಲಿದ್ದಾಗ ಗುಜರಾತ್‌ನ ಚಾಮುಂಡಿ ಮಾತೆಯ ದರ್ಶನಕ್ಕಾಗಿ ಹೋಗಿದ್ದೆವು. ಅಲ್ಲಿ ತುಂಬಾ ಮಜಾ ಮಾಡಿದೆವು. ಅಲ್ಲಿದ್ದಾಗಲೇ ನನಗೆ ಪೀರಿಯಡ್ಸ್ ಆಗಿತ್ತು. ಬಹುಶಃ ಅದು ನನ್ನ ನಾನು ಮೊದಲ ಅಥವಾ ಎರಡನೇ ಪೀರಿಯಡ್ಸ್‌ ಅದಾಗಿತ್ತು. ಇದರ ಬೆನ್ನಲ್ಲಿಯೇ ನನ್ನ ಎಲ ಸ್ನೇಹಿತೆಯರು ಹಾಗಾದರೆ ದೇವಸ್ಥಾನದಲ್ಲಿ ದೇವಿ ದರ್ಶನ ಮಾಡಲು ಸಾಧ್ಯವಿಲ್ಲ ಎಂದಿದ್ದರು.

67
Image Credit : Instagram

'ಆ ಸಮಯದಲ್ಲಿ ನನಗೆ ಸ್ವಲ್ಪ ಮುಜುಗರವಾಯಿತು. ನಾನು ದರ್ಶನಕ್ಕೆ ಹೋಗದಿದ್ದರೆ ಎಲ್ಲರಿಗೂ ತಿಳಿಯುತ್ತದೆ. ಹಾಗಾಗಿ ನಾನು ದರ್ಶನಕ್ಕೆ ಹೋಗಿದ್ದೆ... ನಾನು ನನ್ನ ಸ್ನೇಹಿತರಿಗೆ ಹೇಳಿದೆ, ಅದು ನನಗೆ ಮುಖ್ಯವಲ್ಲ. ನಾನು ದರ್ಶನಕ್ಕೆ ಹೋಗುತ್ತೇನೆ..ಅದು ಒಳ್ಳೆಯದೋ ಕೆಟ್ಟದ್ದೋ ನನಗೆ ಗೊತ್ತಿಲ್ಲ ಆದರೆ ನಾನು ದರ್ಶನಕ್ಕೆ ಹೋಗುತ್ತೇನೆ...' ಎಂದು ತಿಳಿಸಿದ್ದೆ.

77
Image Credit : Instagram

"ದರ್ಶನಕ್ಕೆ ಹೋದ ನಂತರ, ನಾನು ದೇವಿಗೆ ಕ್ಷಮೆಯಾಚಿಸಿದೆ... ದೇವಿ, ನೀನು ನನ್ನ ತಾಯಿ ಮತ್ತು ನೀನು ಕೂಡ ಒಬ್ಬ ಮಹಿಳೆ... ಆದ್ದರಿಂದ ನಿನಗೆ ಈ ನೋವು ಮತ್ತು ಸಂಕಟ ತಿಳಿದಿದೆ... ನೀನು ನನ್ನನ್ನು ಕ್ಷಮಿಸುವೆ ಎಂದು ನನಗೆ ತಿಳಿದಿದೆ... ನಾನು ಏನಾದರೂ ತಪ್ಪು ಮಾಡಿದ್ದರೆ, ನನ್ನನ್ನು ಕ್ಷಮಿಸಿ... ನಾನು ಯಾವುದೇ ದೇವತೆಯ ದರ್ಶನಕ್ಕೆ ಹೋದಾಗಲೆಲ್ಲಾ, ನಾನು ನನ್ನ ತಾಯಿ ಮತ್ತು ನನ್ನ ಅತ್ತೆಯನ್ನು ಅವರಲ್ಲಿ ನೋಡುತ್ತೇನೆ..." ಎಂದು ನಟಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಮನರಂಜನಾ ಸುದ್ದಿ
ಬಾಲಿವುಡ್
ಟಿವಿ ಶೋ
ಸುದ್ದಿ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
ಚಿರು ನೆನಪುಗಳನ್ನೂ ಜೀವಂತವಾಗಿಟ್ಟು ಸುಂದರ ಮನೆಯ ಹೋಮ್‌ ಟೂರ್‌ ಮಾಡಿಸಿದ ಮೇಘನಾ ರಾಜ್‌!
Recommended image2
ಈಗ ತಾನೆ ಮದ್ವೆ ಆಗಿದ್ದೀನೋ.. ಸಿಟ್ಟಾಗಿದ್ದ ಧ್ರುವ ಸರ್ಜಾಗೆ ಸಮಾಧಾನ ಮಾಡಿದ್ದ ಚಿರಂಜೀವಿ ಸರ್ಜಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved