ನವದೆಹಲಿ (ಜ.27): ಇಂದು ಭಾರತ ಹಾಗೂ ಯುರೋಪ್ ನಡುವೆ ಮದರ್ ಆಫ್ ಆಲ್ ಡೀಲ್ಸ್ ನಡೆಯುವ ಸಾಧ್ಯತೆ ಇದೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಇಂದು ಅಧಿಕೃತ ಘೋಷಣೆಯಾಗಬಹುದು. ವ್ಯಾಪಾರ ಒಪ್ಪಂದಕ್ಕೆ ಕ್ಯಾತೆ ತೆಗೆದ ಟ್ರಂಪ್ಗೆ ಮೋದಿ ದೊಡ್ಡ ಶಾಕ್ ನೀಡಿದ್ದಾರೆ. ಈ ಒಪ್ಪಂದದಿಂದ ಭಾರತ ಹಾಗೂ ಯುರೋಪ್ ನಡುವೆ ವ್ಯಾಪಾರ, ವಹಿವಾಟು ಇನ್ನಷ್ಟು ಸುಗಮವಾಗಲಿದೆ. ಡೀಲ್ ಮೊತ್ತ ವಿಶ್ವದ ಜಿಡಿಪಿಯ ಶೇ. 25ರಷ್ಟಿದೆ. ಇದು 200 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:20 PM (IST) Jan 27
ಮದ್ವೆಗೆ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಒಂದು ತಿಂಗಳ ಮೊದಲೇ ಎಲ್ಲರಿಗೂ ಖುದ್ದು ಆಮಂತ್ರ ನೀಡಿದ್ದ ಮಹಿಳಾ ಉದ್ಯೋಗಿ, ಮದುವೆ ದಿನ 6 ಟೇಬಲ್ ರಿಸರ್ವ್ ಮಾಡಿದ್ದಳು. ಆದರೆ ಬಂದಿದ್ದು ಒಬ್ಬ ಸಹೋದ್ಯೋಗಿ ಮಾತ್ರ.
10:50 PM (IST) Jan 27
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ, ಹಿಂದೂ ಯುವತಿಗೆ ಆಕೆಯ ಮುಸ್ಲಿಂ ಸ್ನೇಹಿತೆಯರು ಬುರ್ಖಾ ಧರಿಸಲು ಒತ್ತಾಯಿಸಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಸಂಬಂಧ ಐವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
10:03 PM (IST) Jan 27
ಅಭಿಮಾನಿಗಳಿಗೆ ಆಘಾತ, ಖ್ಯಾತ ಗಾಯಕ ಅರಿಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಿನ್ನಲೆಯ ಗಾಯನದಿಂದ ಅರ್ಜಿತ್ ಸಿಂಗ್ ನಿವೃತ್ತಿ ಹೇಳುತ್ತಿದ್ದಾರೆ. ಇದೇ ವೇಳೆ ಸಣ್ಣ ಆಶಾವಾದ ವ್ಯಕ್ತಪಡಿಸಿದ್ದಾರೆ.
09:56 PM (IST) Jan 27
ಶ್ರೀಮಂತರಾಗಿದ್ದರೂ ಸರಳವಾಗಿ ಇರುವವರು ಬಹಳ ಕಡಿಮೆ ಆದರೆ ಮುಕೇಶ್ ಅಂಬಾನಿ ಹಾಗಲ್ಲ, ವ್ಯಕ್ತಿತ್ವದ ವಿಚಾರ ಬಂದಾಗ ಅವರಷ್ಟು ಸಿಂಪಲ್ ವ್ಯಕ್ತಿ ಬೇರಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವೀಡಿಯೋವೊಂದು ವೈರಲ್ ಆಗ್ತಿದ್ದು, ಅನೇಕರು ಮುಕೇಶ್ ಅಂಬಾನಿ ವ್ಯಕ್ತಿತ್ವಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
09:51 PM (IST) Jan 27
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ನಡುವೆಯೇ, ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ. ಆದರೆ, ಈ ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತೇನು?
09:24 PM (IST) Jan 27
ಇಂಪೋರ್ಟೆಡ್ ಬಿಯರ್, ವೋಡ್ಕಾ ವಿಸ್ಕಿ ಬೆಲೆ ಬಾರಿ ಇಳಿಕೆ, ಹೈನೆಕೆನ್, ಆ್ಯಬ್ಸಲ್ಯೂಟ್ ವೋಡ್ಕಾ, ಶಾಂಪೇನ್, ರಿಯೊಜಾ ವೈನ್, ಬಿಯರ್ ಸೇರಿದಂತೆ ಹಲವು ಮದ್ಯಗಳ ಬೆಲೆ ಭಾರಿ ಇಳಿಕೆಯಾಗುತ್ತಿದೆ.
08:00 PM (IST) Jan 27
ಮಧ್ಯಪ್ರದೇಶದ ಧಾಟಿಯಾದಲ್ಲಿ ಅಕ್ರಮ ಮದ್ಯ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಕುಟುಂಬಸ್ಥರು 3 ತಿಂಗಳ ಮಗು ಸೇರಿದಂತೆ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಹಸಿವಿನಿಂದ ಅಳುತ್ತಿದ್ದ ಮಗುವನ್ನು ಪೊಲೀಸರು ನೋಡಿಕೊಳ್ಳುವಂತಾಗಿದೆ.
07:20 PM (IST) Jan 27
ನಿಫಾ ವೈರಸ್ಗೆ ಭಾರತದಲ್ಲಿ 110 ಮಂದಿ ಕ್ವಾರಂಟೈನ್, ಏಷ್ಯಾದಲ್ಲೂ ತೀವ್ರವಾಗಿ ವೈರಸ್ ಹರಡುತ್ತಿದ್ದು, ಕ್ವಾರಂಟೈನ್ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಭಾರತದ 2 ರಾಜ್ಯಗಳನ್ನು ಎಂಡೆಮಿಕ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
07:01 PM (IST) Jan 27
ಹಳದಿ ಲೋಹದ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ಚಿನ್ನ ಖರೀದಿ ಕಷ್ಟಸಾಧ್ಯವಾಗಿದೆ. ಬಲ್ಗೇರಿಯಾದ ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿಯಂತೆ ಜಾಗತಿಕ ಆರ್ಥಿಕತೆಯ ಒತ್ತಡದಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ 3 ವರ್ಷಗಳಲ್ಲಿ ಚಿನ್ನದ ದರ 3 ಪಟ್ಟು ಹೆಚ್ಚಾಗಿದೆ.
06:15 PM (IST) Jan 27
ಲಕ್ಕುಂಡಿಗೂ ಮೊದಲು ಶುರುವಾಗಿತ್ತು ನಿಧಿ ಶೋಧ, ಕಳೆದ ಐದು ವರ್ಷಗಳ ಸತತ ನಿಧಿ ಶೋಧದಲ್ಲಿ ಸೌದಿ ಅರೇಬಿಯಾ ಇದೀಗ ಅಮೆರಿಕ, ಚೀನಾಗೆ ಠಕ್ಕರ್ ನೀಡಲು ಮುಂದಾಗಿದೆ. ಕಾರಣ ಬರೋಬ್ಬರಿ 2.5 ಟ್ರಿಯನ್ ಅಮೆರಿಕನ್ ಡಾಲರ್ ಸಂಪತ್ತು ಪತ್ತೆಯಾಗಿದೆ.
05:44 PM (IST) Jan 27
ತೀವ್ರ ಚಳಿಯಿಂದಾಗಿ ಜಗತ್ಪ್ರಸಿದ್ಧ ನಯಾಗಾರ ಜಲಪಾತವು ಭಾಗಶಃ ಹೆಪ್ಪುಗಟ್ಟಿದೆ. ಧ್ರುವೀಯ ಸುಳಿಗಾಳಿಯ ಪರಿಣಾಮವಾಗಿ, ಜಲಪಾತದ ಸುತ್ತಮುತ್ತಲಿನ ಪ್ರದೇಶಗಳು ಮಂಜುಗಡ್ಡೆಯಿಂದ ಆವೃತವಾಗಿ, ಒಂದು ಅದ್ಭುತ ದೃಶ್ಯಲೋಕವನ್ನೇ ಸೃಷ್ಟಿಸಿವೆ. ಈ ಅಪರೂಪದ ದೃಶ್ಯಗಲ ಹಲವು ವೀಡಿಯೋ ಇಲ್ಲಿದೆ ನೋಡಿ…
05:30 PM (IST) Jan 27
ಈ ಕಂಪನಿಯಲ್ಲಿ ಮದುವೆಯಾಗೋ ಉದ್ಯೋಗಿಗೆ 12 ಲಕ್ಷ, ಕಂಪನಿ ಬಾಸ್ ಈ ಘೋಷಣೆ ಹೊರಡಿಸುತ್ತಿದ್ದಂತೆ ಇದೀಗ ಕಂಪನಿ ಉದ್ಯೋಗಿಗಳು ಮದುವಗೆ ಮುಂದಾಗಿದ್ದರೆ. ಹಲವು ಬ್ಯಾಚುಲರ್ಸ್ ಈ ಕಂಪನಿ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
05:15 PM (IST) Jan 27
04:13 PM (IST) Jan 27
ಮುಂಬೈನ ವಿಕ್ರೋಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಅಳವಡಿಸಿದ್ದ ಲೌಡ್ಸ್ಪೀಕರ್ ಬಿದ್ದು 3 ವರ್ಷದ ಮಗು ಸಾವನ್ನಪ್ಪಿದೆ. ಕಂಬಳಿ ಮಾರುತ್ತಿದ್ದ ಬೀದಿ ವ್ಯಾಪಾರಿಯೊಬ್ಬರ ತಲೆಯ ಮೇಲಿದ್ದ ಮೂಟೆ ಸ್ಪೀಕರ್ ವೈರ್ಗೆ ತಾಗಿ ಈ ದುರಂತ ಸಂಭವಿಸಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
03:56 PM (IST) Jan 27
ಕೇವಲ 48 ಗಂಟೆಯಲ್ಲಿ ಬೆಳ್ಳಿ ಬೆಲೆ 35000 ರೂಪಾಯಿ ಏರಿಕೆ, ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗಿಂತ ಬೆಳ್ಳಿ ಮೇಲೆ ಹೂಡಿಕೆ ಮಾಡವರಿಗೆ ದುಪ್ಪಟ್ಟು ರಿಟರ್ನ್ಸ್ ಬರುತ್ತಿದೆ. ದಾಖಲೆ ಏರಿಕೆ ಬಳಿಕ ಬೆಳ್ಳಿ ಬೆಲೆ ಎಷ್ಟಾಗಿದೆ.
03:22 PM (IST) Jan 27
EU ಟ್ರೇಡ್ ಡೀಲ್ನಿಂದ ಶೇ. 40 ರಷ್ಟು ತೆರಿಗೆ ಕಡಿತ, ಗಣರಾಜ್ಯೋತ್ಸವ ದಿನ ನಡೆದ ಮಹತ್ವದ ಒಪ್ಪಂದ ಮಾತುಕತೆ ಯಶಸ್ವಿಯಾಗಿದ್ದು, ಯೂರೋಪಿಯನ್ ಯೂನಿಯನ್ ಮೇಲಿನ ತರಿಗೆ ಕಡಿತಗೊಳ್ಳುತ್ತಿದೆ. ಇದರ ಪರಿಣಾಮ ಭಾರತದಲ್ಲಿ ಈ ಕಾರುಗಳ ಬೆಲೆ ಭಾರಿ ಇಳಿಕೆ.
02:30 PM (IST) Jan 27
ಉತ್ತರ ಪ್ರದೇಶದ ರಾಂಪುರದಲ್ಲಿ, ಇಬ್ಬರು ಹೆಂಡತಿಯರ ನಿತ್ಯದ ಜಗಳಕ್ಕೆ ಅಂತ್ಯ ಹಾಡಲು ಗ್ರಾಮ ಪಂಚಾಯ್ತಿಯು ವಿಚಿತ್ರ ತೀರ್ಪೊಂದನ್ನು ನೀಡಿದೆ. ಗಂಡನ ಸಮಯವನ್ನು ಇಬ್ಬರು ಪತ್ನಿಯರ ನಡುವೆ ಸಮನಾಗಿ ಹಂಚಿ, ಭಾನುವಾರ ಗಂಡನಿಗೆ ಸ್ವಾತಂತ್ರ ನೀಡಲಾಗಿದೆ...
01:29 PM (IST) Jan 27
ಪ್ರತಿವರ್ಷ ದಾವೋಸ್ನಲ್ಲಿ ನಡೆಯುವ ವಿಶ್ವ ಆರ್ಥಿಕ ಸಮ್ಮೇಳನದ ಸಮಯದಲ್ಲಿ ಸೆ*ಕ್ಸ್ ವರ್ಕ್ಗೆ ಬೇಡಿಕೆ ಗಗನಕ್ಕೇರುತ್ತದೆ. ಪ್ರಖ್ಯಾತ ವ್ಯಕ್ತಿಗಳು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ, ಲೈಂಗಿಕ ಪಾರ್ಟಿಗಳು ಮತ್ತು ವಿಚಿತ್ರ ರೋಲ್-ಪ್ಲೇಗಳಿಗಾಗಿ ಎಸ್ಕಾರ್ಟ್ಗಳನ್ನು ಬುಕ್ ಮಾಡುತ್ತಾರೆ.
12:43 PM (IST) Jan 27
11:24 AM (IST) Jan 27
ಶಿವ ಪಾರ್ವತಿಯ ವಿವಾಹ ನಡೆದ ಸ್ಥಳವೆಂದು ನಂಬಲಾದ ಉತ್ತರಾಖಂಡ್ನ ತ್ರಿಯುಗಿನಾರಾಯಣ ದೇಗುಲದಲ್ಲಿ, ಜೋಡಿಯೊಂದು ತೀವ್ರ ಹಿಮಪಾತದ ನಡುವೆ ವಿವಾಹವಾಗಿದ್ದಾರೆ. ಹಿಮದ ಮಳೆಯ ನಡುವೆ ಈ ಜೋಡಿ ನಡೆದು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
11:17 AM (IST) Jan 27
ಇರಾನ್ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಅಮೆರಿಕ ತನ್ನ ಅಬ್ರಾಹಂ ಲಿಂಕನ್ ವಿಮಾನವಾಹಕ ನೌಕೆಯನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸಿದೆ. ಈ ಸೇನಾ ಜಮಾವಣೆಯು ಇರಾನ್ ಮೇಲಿನ ಒತ್ತಡದ ಭಾಗವಾಗಿದ್ದು, ಅಗತ್ಯವಿದ್ದರೆ ದಾಳಿ ನಡೆಸುವ ಬಗ್ಗೆ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
09:53 AM (IST) Jan 27
ಆಗ್ರಾದಲ್ಲಿ ಚೀಲದಲ್ಲಿ ಪತ್ತೆಯಾದ ಯುವತಿಯ ಶಿರರಹಿತ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರೀತಿಯ ವಿಚಾರದಲ್ಲಿ ಅನುಮಾನಗೊಂಡು, ಸಹೋದ್ಯೋಗಿ ಹಾಗೂ ಪ್ರೇಮಿ ವಿನಯ್ ರಜಪೂತ್ ಎಂಬಾತನೇ ಮಿಂಕಿ ಶರ್ಮಾಳನ್ನು ಬರ್ಬರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
08:32 AM (IST) Jan 27
07:40 AM (IST) Jan 27
ಭಾರತದ ಸಾಂಸ್ಕೃತಿಕ ವೈವಿಧ್ಯ, ಆರ್ಥಿಕ ಪ್ರಗತಿ ಮತ್ತು ಸೈನಿಕ ಶಕ್ತಿಯ ಅನಾವರಣದ ಮೂಲಕ 77ನೇ ಗಣರಾಜ್ಯ ದಿನ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಯುರೋಪಿಯನ್ ಕೌನ್ಸಿಲ್ನ ಅಧ್ಯಕ್ಷ ಆ್ಯಂಟೋನಿಯೋ ಕೋಸ್ಟಾ, ಉರ್ಸುಲಾ ವೊನ್ ಡೇರ್ ಲೆಯೆನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು
07:40 AM (IST) Jan 27
ಯುಜಿಸಿ ಕಳೆದ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದಕ್ಕೀಡಾಗಿದ್ದು, ಉತ್ತರ ಪ್ರದೇಶದ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ, ಈ ನಿಯಮ ವಿರೋಧಿಸಿ ಲಖನೌನ ಮೇಲ್ವರ್ಗದ 11 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ
07:39 AM (IST) Jan 27
‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಸ್ಥಾಗಿತ್ಯಕ್ಕೆ ಭಾರತದ ಅಳಿಯನೂ ಆಗಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಶ್ವೇತಭವನದ ಆರ್ಥಿಕ ಸಲಹೆಗಾರ ಪೀಟರ್ ನವಾರೋ ಮತ್ತು ಸ್ವತಃ ಟ್ರಂಪ್ ಅವರೇ ಕಾರಣ’ ಎಂಬ ಆರೋಪ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದ ಟೆಡ್ ಕ್ರೂಜ್ ಆರೋಪಿಸಿದ್ದಾರೆ.
07:39 AM (IST) Jan 27
ಕಳೆದ ವರ್ಷ ಥಾಯ್ಲೆಂಡ್ - ಕಾಂಬೋಡಿಯಾ ಗಡಿ ವಿವಾದದಲ್ಲಿದ್ದ ವಿಷ್ಣುವಿನ ಪ್ರತಿಮೆಯನ್ನು ತೆರವು ಮಾಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಥಾಯ್ಲೆಂಡ್ ಸರ್ಕಾರ ವಿಷ್ಣುವಿನ ಪ್ರತಿಮೆಯಿದ್ದ ಸ್ಥಳದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದೆ.
07:39 AM (IST) Jan 27
ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
07:38 AM (IST) Jan 27
ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲ್ಪಡುವ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಟ್ರಂಪ್ ನಾನಾ ಕ್ಯಾತೆ ತೆಗೆಯುತ್ತಿರುವ ಹೊತ್ತಿನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.