Published : Aug 07, 2025, 07:32 AM ISTUpdated : Aug 07, 2025, 07:18 PM IST

India Latest News Live: ಭಾರತ, ಚೀನಾ ಸೇರಿದಂತೆ ಎಲ್ಲ ದೇಶಗಳಿಗೆ ಸುಂಕ ಬೆದರಿಕೆ ಹಾಕುವ ಟ್ರಂಪ್, ಬಯಸಿದ್ರೂ ಈ ದೇಶಗಳ ಮೇಲೆ ಸುಂಕ ವಿಧಿಸಲು ಸಾಧ್ಯವಿಲ್ಲ!

ಸಾರಾಂಶ

ನವದೆಹಲಿ: ನಿಷೇಧಿತ ಉಗ್ರ ಸಂಘಟನೆ ಅಲ್‌ ಖೈದಾ ವಿಚಾರಗಳನ್ನು ಹರಡುತ್ತಿದ್ದ ಆರೋಪದ ಮೇಲೆ ಜು.29ರಂದು ಬೆಂಗಳೂರಿನಲ್ಲಿ ಬಂಧಿತಳಾದ ಶಮಾ ಪರ್ವೀನ್ ಅನ್ಸಾರಿ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿ, ಮುಸ್ಲಿಂ ಪ್ರದೇಶಗಳನ್ನೆಲ್ಲ ಏಕೀಕರಿಸುವಂತೆ ಪಾಕ್ ಸೇನಾ ಮುಖ್ಯಸ್ಥ ಜ. ಅಸೀಮ್ ಮುನೀರ್‌ಗೆ ಮನವಿ ಮಾಡಿದ್ದಳು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಹೊರಬಿದ್ದಿದೆ.

Donald Trump

07:18 PM (IST) Aug 07

ಭಾರತ, ಚೀನಾ ಸೇರಿದಂತೆ ಎಲ್ಲ ದೇಶಗಳಿಗೆ ಸುಂಕ ಬೆದರಿಕೆ ಹಾಕುವ ಟ್ರಂಪ್, ಬಯಸಿದ್ರೂ ಈ ದೇಶಗಳ ಮೇಲೆ ಸುಂಕ ವಿಧಿಸಲು ಸಾಧ್ಯವಿಲ್ಲ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದು ಜಾಗತಿಕ ವ್ಯಾಪಾರದಲ್ಲಿ ಒಡಕು ಮೂಡಿಸಿದೆ. ಭಾರತ ಸೇರಿದಂತೆ ಹಲವು ದೇಶಗಳು ಈ ಕ್ರಮವನ್ನು ವಿರೋಧಿಸಿದ್ದು, ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ.

Read Full Story

06:23 PM (IST) Aug 07

ಮನೆಕೆಲಸದಾಕೆಯ ಮೊಮ್ಮಗಳಿಗೆ ಐಷಾರಾಮಿ ಮನೆಯ ವಿಲ್‌ ಬರೆದ ಟಾಟಾ ಕಂಪನಿ ಮಾಜಿ ಉದ್ಯೋಗಿ!

ತನ್ನ ಕೊನೆಯ ದಿನಗಳಲ್ಲಿ ಯುವತಿಯನ್ನು ಮಗಳಂತೆ ನೋಡಿಕೊಂಡ ೮೯ ವರ್ಷದ ಎಂಜಿನಿಯರ್, ತನ್ನ ಫ್ಲಾಟ್‌ಅನ್ನು ಆಕೆಗೆ ಉಯಿಲು ಬರೆದಿದ್ದಾರೆ. ಈ ಹೃದಯಸ್ಪರ್ಶಿ ಕಥೆಯು ರಕ್ತ ಸಂಬಂಧಗಳನ್ನು ಮೀರಿದ ಪ್ರೀತಿ ಮತ್ತು ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ನ್ಯಾಯಾಲಯವು ಯುವತಿಗೆ ಆಸ್ತಿಯನ್ನು ನೀಡಿದೆ.
Read Full Story

06:17 PM (IST) Aug 07

ನಿನ್ನೆ ಸುಪ್ರೀಂ, ಇಂದು ಚುನಾವಣಾ ಆಯೋಗ.. ರಾಹುಲ್ ಗಾಂಧಿ ಯಾರನ್ನ ನಂಬುತ್ತಾರೆ? ಕಿರಣ್ ರಿಜಿಜು ಕಿಡಿ

ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಪದೇ ಪದೇ ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ. 

Read Full Story

05:07 PM (IST) Aug 07

Sanatani Terror Remark - ಸನಾತನ ಸಂಸ್ಥೆಯನ್ನು 'ಭಯೋತ್ಪಾದಕ' ಎಂದು ಕರೆದ ಕಾಂಗ್ರೆಸ್‌ ಮುಖಂಡನಿಗೆ ₹10 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್!

ಮಾಜಿ ಸಿಎಂ ಪೃಥ್ವಿರಾಜ್ ಚವಾಣ್‌ಗೆ ಸನಾತನ ಸಂಸ್ಥೆ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್ ಜಾರಿ. 'ಸನಾತನ ಭಯೋತ್ಪಾದನೆ' ಹೇಳಿಕೆ ವಿವಾದಕ್ಕೆ ಕಾರಣ.
Read Full Story

03:55 PM (IST) Aug 07

ಮನೆ ಬಿಟ್ಟು ಹೋದವ 10 ವರ್ಷದ ನಂತರ ಸಾಧುವಿನ ವೇಷದಲ್ಲಿ ಬಂದು ಹೆಂಡ್ತಿಯ ಕೊಂದ

10 ವರ್ಷಗಳ ಹಿಂದೆ ಹೆಂಡತಿ ಮಕ್ಕಳನ್ನು ತೊರೆದು ಹೋಗಿದ್ದ ಪತಿ, ಸಾಧುವಿನ ವೇಷದಲ್ಲಿ ಬಂದು ಹೆಂಡತಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾದಂತಹ ಘಟನೆ ನಡೆದಿದೆ.

Read Full Story

03:38 PM (IST) Aug 07

ಆಗಸ್ಟ್‌ ತಿಂಗಳ ಕೊನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತ ಭೇಟಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಸ್ಟ್ ಕೊನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯು ಉಕ್ರೇನ್ ಯುದ್ಧದ ನಂತರ ಪುಟಿನ್ ಅವರ ಮೊದಲ ಭಾರತ ಭೇಟಿಯಾಗಿದ್ದು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
Read Full Story

03:24 PM (IST) Aug 07

ಬಿಜೆಪಿ ಜೊತೆ ಸೇರಿ ಚುನಾವಣೆ ಕಳ್ಳತನಕ್ಕೆ ಇಳಿದ ಚುನಾವಣಾ ಆಯೋಗ, ಕರ್ನಾಟಕದಲ್ಲೂ ಮೋಸ - ರಾಹುಲ್‌ ಗಾಂಧಿ ಭಾರೀ ಆರೋಪ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಅಕ್ರಮಗಳ ಕುರಿತು ಮಾಧ್ಯಮಗಳಿಗೆ ಪಿಪಿಟಿ ಪ್ರೆಸೆಂಟೇಷನ್ ನೀಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಕಲಿ ಮತದಾರರು, ನಕಲಿ ವಿಳಾಸಗಳು ಮತ್ತು ಅಕ್ರಮ ಫೋಟೋಗಳನ್ನು ಬಳಸಿ ಮತಗಳ ಕಳ್ಳತನವಾಗಿದೆ ಎಂದು ಆರೋಪಿಸಿದರು.

Read Full Story

02:27 PM (IST) Aug 07

ತನ್ನ 23,000 ಉದ್ಯೋಗಿಗಳಿಗೆ 400-500 ಕೋಟಿ ರೂಪಾಯಿ ಷೇರು ಗಿಫ್ಟ್‌ ನೀಡಲಿರುವ ಮಹೀಂದ್ರಾ!

ಮಹೀಂದ್ರಾ & ಮಹೀಂದ್ರಾ ಕಂಪನಿಯು ತನ್ನ 23,000 ಉದ್ಯೋಗಿಗಳಿಗೆ ಉದ್ಯೋಗಿ ಷೇರು ಮಾಲೀಕತ್ವ ಯೋಜನೆಯನ್ನು (ESOP) ಪ್ರಾರಂಭಿಸುತ್ತಿದೆ. ಕಾರ್ಖಾನೆಯ ಫ್ಲೋರ್‌ ವರ್ಕರ್‌ಗಳಿಗೂ ಈ ಯೋಜನೆ ಅನ್ವಯಿಸುತ್ತದೆ. ಈ ಉಪಕ್ರಮವು ಕಂಪನಿಯ ಬೆಳವಣಿಗೆಗೆ ನೌಕರರ ಕೊಡುಗೆಯನ್ನು ಗುರುತಿಸುವ ಉದ್ದೇಶ ಹೊಂದಿದೆ.
Read Full Story

02:22 PM (IST) Aug 07

ತನ್ನ ರೋಗಿಯನ್ನೇ ಪ್ರೀತಿಸಿ ಮದ್ವೆಯಾಗಿದ್ದ ಮಾನಸಿಕ ತಜ್ಞ ವೈದ್ಯೆ ಸಾವಿಗೆ ಶರಣು

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೋಗಿಯನ್ನು ಪ್ರೀತಿಸಿ ಮದುವೆಯಾದ ವೈದ್ಯೆ, ಗಂಡನ ಕಿರುಕುಳ ತಾಳಲಾರದೆ ಸಾವಿಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 

Read Full Story

11:54 AM (IST) Aug 07

ಜಮ್ಮು ಕಾಶ್ಮೀರದಲ್ಲಿ ಕಣಿವೆಗೆ ಬಿದ್ದ 23 ಸಿಆರ್‌ಪಿಎಫ್‌ ಸಿಬ್ಬಂದಿ ಇದ್ದ ಬಸ್‌!

ಉಧಂಪುರದಲ್ಲಿ ಸಿಆರ್‌ಪಿಎಫ್ ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಟ್ಟು 23 ಸಿಬ್ಬಂದಿ ವಾಹನದಲ್ಲಿದ್ದರು.
Read Full Story

11:26 AM (IST) Aug 07

'ರೈತರ ರಕ್ಷಣೆಗೆ ಭಾರೀ ಬೆಲೆ ತೆರಲು ಸಿದ್ಧ..' ಟ್ರಂಪ್‌ ತೆರಿಗೆ ಯುದ್ಧಕ್ಕೆ ಮೋದಿ ತಿರುಗೇಟು

ಅಮೆರಿಕದ ತೆರಿಗೆ ಏರಿಕೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತ ಸಿದ್ಧ ಎಂದು ಘೋಷಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದೆ.
Read Full Story

10:22 AM (IST) Aug 07

ಕಡಿಮೆ ಸ್ಕೋರ್​ ಇದ್ರೂ ಕ್ರೆಡಿಟ್​ ಕಾರ್ಡ್​ ಪಡೆಯೋದು ಹೇಗೆ? ಇಲ್ಲಿದೆ ಸುಲಭದ ಟಿಪ್ಸ್​...

ಕ್ರೆಡಿಟ್​ ಕಾರ್ಡ್​ ಪಡೆಯಲು ಕಡಿಮೆ ಸ್ಕೋರ್​ ಇದೆ ಎನ್ನೋ ಚಿಂತೆ ಇದ್ಯಾ? ಹಾಗಿದ್ದರೆ ನೀವು ಮಾಡಬೇಕಿರುವುದು ಏನು? ಇಲ್ಲಿದೆ ಸುಲಭದ ಟಿಪ್ಸ್​​

 

Read Full Story

More Trending News