ನವದೆಹಲಿ: ಚಿನ್ನ, ಬೆಳ್ಳಿ ದರ ಹೆಚ್ಚಳ ಪರ್ವ ಮುಂದುವರೆದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಿ ದರ ಕೇಜಿಗೆ 3,07,900 ರು.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಮತ್ತೊಂದೆಡೆ ಚಿನ್ನದ ದರವೂ ಹೆಚ್ಚಳ ಕಂಡಿದ್ದು 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 1, 7,550 ರು. ಹಾಗೂ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 1,50,000 ರು.ಗೆ ದರ ದಾಖಲಾಗಿದೆ.
ಶುಕ್ರವಾರಕ್ಕೆ ಹೋಲಿಸಿದರೆ ಚಿನ್ನ, ಬೆಳ್ಳಿ ದರ ಎರಡರಲ್ಲೂ ಏರಿಕೆಯಾಗಿದೆ. ಬೆಳ್ಳಿ ಶುಕ್ರವಾರ 2,98,700 ರು.ಇತ್ತು. ಆದರೆ ಸೋಮವಾರ 9200 ರು. ಹೆಚ್ಚಾಗಿದೆ. ಇನ್ನು 22 ಕ್ಯಾರೆಟ್ 10 ಗ್ರಾಂ ಚಿನ್ನ 1, 35,400 ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 1,47,700 ಇತ್ತು. ಆದರೆ ಸೋಮವಾರ ಕ್ರಮವಾಗಿ 2150, 2300 ರು. ಏರಿಕೆಯಾಗಿದೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ದರ ಏರಿಕೆಯಾಗಿದ್ದು ಬೆಳ್ಳಿ ಒಂದೇ ದಿನ 10,000 ಏರಿಕೆ ಕಂಡು 3,02,600 ರು.ಗೆ ತಲುಪಿದೆ. 10 ಗ್ರಾಂ ಚಿನ್ನ 1900 ರು. ಹೆಚ್ಚಳವಾಗಿ 1,48,100 ರು.ಗೆ ತಲುಪಿದೆ.
ಭರ್ಜರಿ ಏರಿಕೆ: ಕಳೆದ ಒಂದು ವರ್ಷದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 70000 ರು.ನಷ್ಟು ಏರಿಕೆಯಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 2 ಲಕ್ಷ ರು.ನಷ್ಟು ಹೆಚ್ಚಳವಾಗಿದೆ
10:49 PM (IST) Jan 20
ಗೆಳೆಯನ ಹುಟ್ಟುಹಬ್ಬದ ಜಾಲಿ ಮೂಡ್ನಲ್ಲಿದ್ದ ನಾಲ್ವರು ಸ್ನೇಹಿತರು ಜೊತೆಯಾಗಿ ಮಸಣ ಸೇರಿದ್ದಾರೆ. ಕೈಯಲ್ಲಿ ಸಿಗರೇಟ್, ಕಾರಿನೊಳಗೆ ಮ್ಯೂಸಿಕ್ ಕಿವಿಗಡಚಿಕ್ಕುತ್ತಿದ್ದವು. ಡ್ರೈವಿಂಗ್ ಸೀಟ್ನಲ್ಲಿದ್ದವ ಕಾರು 140 ವೇಗಕ್ಕೆ ತಲುಪುವವರೆಗೂ ಆಕ್ಸಿಲರೇಟರ್ ಮೇಲೆ ಕಾಲಿಟ್ಟಿದ್ದ ಮುಂದಾಗಿದ್ದು ದೊಡ್ಡ ಅನಾಹುತ.
10:46 PM (IST) Jan 20
Mystery at Sea: Gujarat Coast Water Boiling, Officials on High Alert ಸರ್ಕಾರ ತನಿಖೆ ಆರಂಭಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ತಂಡವನ್ನು ನಿಯೋಜಿಸಲಾಗಿದೆ.
10:04 PM (IST) Jan 20
Donald Trump: ಗ್ರೀನ್ಲ್ಯಾಂಡ್ನ ಸ್ವಾಧೀನದ ಬಗ್ಗೆ ಅಮೆರಿಕ ಪ್ರತಿಕ್ರಿಯಿಸಿದೆ. ಅಮೆರಿಕದ ಈ ನಿಲುವು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ಅಮೆರಿಕ ಮೊದಲು ನೀತಿಯನ್ನು ಜಗತ್ತಿನ ಅನೇಕ ದೇಶಗಳು ವಿರೋಧಿಸುತ್ತಿವೆ.
09:21 PM (IST) Jan 20
ಸುಮಾರು ಎರಡು ವರ್ಷಗಳ ಬಳಿಕ ಇಶಾನ್ ಕಿಶನ್ ಭಾರತ ತಂಡಕ್ಕೆ ಮರಳಿದ್ದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ. ಗಾಯಗೊಂಡಿರುವ ತಿಲಕ್ ವರ್ಮಾ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್ ಮಾಡಲಿದ್ದಾರೆ.
08:44 PM (IST) Jan 20
ಷೇರು ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಭಾರಿ ಕುಸಿತ ಉಂಟಾಗಿದ್ದು, ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಜಾಗತಿಕ ಮಾರುಕಟ್ಟೆಗಳ ದುರ್ಬಲ ಪ್ರವೃತ್ತಿಯಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆ ಮಟ್ಟದಲ್ಲಿ ಕುಸಿದಿವೆ. ನಾಳೆಯ ವಹಿವಾಟಿನ ಬಗ್ಗೆ ತಜ್ಞರು ಏನ್ ಹೇಳ್ತಾರೆ..
08:38 PM (IST) Jan 20
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ರೀನ್ಲ್ಯಾಂಡ್ನ ಭದ್ರತಾ ಮಹತ್ವವನ್ನು ಒತ್ತಿಹೇಳಿ ನ್ಯಾಟೋ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಅಮೆರಿಕ ಮತ್ತು ಡೆನ್ಮಾರ್ಕ್ ಎರಡೂ ಗ್ರೀನ್ಲ್ಯಾಂಡ್ಗೆ ಸೇನಾ ಪಡೆಗಳನ್ನು ನಿಯೋಜಿಸಿದೆ.
07:00 PM (IST) Jan 20
ಕಮಿಟ್ಮೆಂಟ್ಗೆ ಹೆದರುವ ಸಂಗಾತಿಯೊಂದಿಗೆ ಸಂಬಂಧವನ್ನು ಮುಂದುವರಿಸುವುದು ಸವಾಲಿನ ಸಂಗತಿ. ಭವಿಷ್ಯದ ಬಗ್ಗೆ ಮಾತನಾಡಲು ಹಿಂಜರಿಯುವುದು, ಅಸ್ಪಷ್ಟ ಉತ್ತರಗಳನ್ನು ನೀಡುವುದು, ಮತ್ತು ಹಳೆಯ ಸಂಬಂಧಗಳು ಬೇಗನೆ ಮುರಿದುಬಿದ್ದಿರುವುದು ಅವರ ಪ್ರಮುಖ ಲಕ್ಷಣಗಳಾಗಿವೆ.
06:38 PM (IST) Jan 20
ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅನೇಕ ಮಹಿಳೆಯರು ತಮ್ಮ ಅಗತ್ಯಗಳನ್ನು ಮತ್ತು ವ್ಯಕ್ತಿತ್ವವನ್ನು ಕಡೆಗಣಿಸುತ್ತಾರೆ. ಈ ವರ್ತನೆಯು ತಿರಸ್ಕಾರದ ಭಯ ಮತ್ತು ಸಾಮಾಜಿಕ ಒತ್ತಡದಿಂದ ಉಂಟಾಗಿದ್ದು, ಇದು ಅವರ ಮಾನಸಿಕ ನೆಮ್ಮದಿ ಮತ್ತು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
06:13 PM (IST) Jan 20
ಪ್ರತಿದಿನ ಬ್ರೆಡ್-ಆಮ್ಲೆಟ್ ತಿನ್ನುವುದು ಆರೋಗ್ಯಕರವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಬಳಸುವ ಬ್ರೆಡ್ನ ವಿಧ ಮತ್ತು ಅಡುಗೆ ಮಾಡುವ ವಿಧಾನವನ್ನು ಅವಲಂಬಿಸಿ ಇದು ಆರೋಗ್ಯಕ್ಕೆ ಒಳ್ಳೆಯದು ಅಥವಾ ಕೆಟ್ಟದ್ದಾಗಬಹುದು.
05:00 PM (IST) Jan 20
ಮೇಡಮ್ ಮಗಳಿಗೆ ಹೊಡೀಬೇಡಿ ಟೀಚರ್, ಆಕೆಗೆ ತಾಯಿ ಇಲ್ಲ, ನಾನು ಏಕಾಂಗಿಯಾಗಿ ಬೆಳೆಸಿದ್ದೇನೆ ಎಂದು ಮಗಳ ಅಪ್ಪಿಕೊಂಡು ಟೀಚರ್ ಮುಂದೆ ತಂದೆಯ ಕಣ್ಮೀರಿನ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.
04:42 PM (IST) Jan 20
ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಮೂರು ವರ್ಷಗಳ ಕಾಲ ಹನಿಟ್ರ್ಯಾಪ್ ಜಾಲ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ. ಮಹಿಳೆ ಸೋಶಿಯಲ್ ಮೀಡಿಯಾ ಮೂಲಕ 100 ಕ್ಕೂ ಹೆಚ್ಚು ಪುರುಷರಿಗೆ ಆಮಿಷವೊಡ್ಡಿದ್ದರೆ, ಆಕೆಯ ಪತಿ ಅವರ ಆತ್ಮೀಯ ಭೇಟಿಯನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಾನೆ.
04:25 PM (IST) Jan 20
ಪತ್ನಿಗೆ ಜೀವನಾಂಶ ನೀಡುವುದನ್ನು ತಪ್ಪಿಸಲು ಸಿಂಗಾಪುರದಲ್ಲಿನ ತನ್ನ ಅಧಿಕ ಸಂಬಳದ ಕೆಲಸವನ್ನು ತೊರೆದ ವ್ಯಕ್ತಿಗೆ ನ್ಯಾಯಾಲಯವು ಶಾಕ್ ನೀಡಿದೆ. ಆತನ ಬೇಜವಾಬ್ದಾರಿ ನಿರ್ಧಾರವನ್ನು ಖಂಡಿಸಿದ ನ್ಯಾಯಾಲಯ, ಸುಮಾರು 4 ಕೋಟಿ ರೂಪಾಯಿಗಳಷ್ಟು ಹಿಂದಿನ ನಿರ್ವಹಣಾ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿದೆ.
02:14 PM (IST) Jan 20
02:12 PM (IST) Jan 20
ಮಧ್ಯಪ್ರದೇಶದ ಇಂದೋರ್ನಲ್ಲಿ ಭಿಕ್ಷಾಟನೆ ನಿರ್ಮೂಲನಾ ಅಭಿಯಾನದ ವೇಳೆ ಮಂಗೀಲಾಲ್ ಎಂಬ ಭಿಕ್ಷುಕ ಕೋಟ್ಯಾಧಿಪತಿ ಎಂಬ ಸತ್ಯ ಬಯಲಾಗಿದೆ. ಹಲವು ಮನೆ, ವಾಹನಗಳನ್ನು ಹೊಂದಿರುವ ಈತ, ಬಡ್ಡಿಗೆ ಸಾಲ ನೀಡುವ ವ್ಯವಹಾರವನ್ನೂ ನಡೆಸುತ್ತಿದ್ದು, ಈತನ ಶ್ರೀಮಂತಿಕೆ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
01:46 PM (IST) Jan 20
ಕೇಂದ್ರ ಬಜೆಟ್ 2026, ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರ ಬಜೆಟ್ನಲ್ಲಿ ಮದುವೆಯಾದ ಜೋಡಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆ ಇದೆ. ಜೋಡಿಗಳ ಟ್ಯಾಕ್ಸ್ ಉಳಿತಾಯಕ್ಕೆ ಮಹತ್ವದ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.
01:39 PM (IST) Jan 20
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬೆನ್ನಲ್ಲೇ, ಟೀಂ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಬಿಸಿಸಿಐ ಶಾಕ್ ನೀಡಲು ಮುಂದಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ಇಬ್ಬರು ಆಟಗಾರ ಹಿಂಬಡ್ತಿ ನೀಡಲು ಸಲಹೆ ನೀಡಿದೆ.
01:12 PM (IST) Jan 20
12:52 PM (IST) Jan 20
ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ಆರೋಪಿಸಿ, ಭಾಷಣ ಮಾಡದೆ ಸದನದಿಂದ ಹೊರನಡೆದಿದ್ದಾರೆ.. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜ್ಯಪಾಲರು ಸದನದ ಸಂಪ್ರದಾಯಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
12:07 PM (IST) Jan 20
ನಟ ಅಕ್ಷಯ್ ಕುಮಾರ್ ಪ್ರಯಾಣದ ವೇಳೆ ಬೆಂಗಾವಲು ಕಾರು ಭೀಕರ ಅಪಘಾತ, ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಆಟೋ ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ನಟ ಅಕ್ಷಯ್ ಹಾಗೂ ಪತ್ನಿ ಟ್ವಿಂಕಲ್ ಖನ್ನಾಗೆ ಏನಾಗಿದೆ.
11:59 AM (IST) Jan 20
ಜೈಪುರದ ಉದ್ಯಮಿ ಶಿವ್ ಜೊಹರಿ ತಮ್ಮ ಮಗಳ ಮದುವೆಗೆ 25 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಬೆಳ್ಳಿಯಿಂದ ಮಾಡಿದ ವಿಶಿಷ್ಟ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ. ಸುಮಾರು 3 ಕೆಜಿ ತೂಕದ ಈ ಪೆಟ್ಟಿಗೆಯಾಕಾರದ ಕಾರ್ಡ್, 65 ದೇವತೆಗಳ ಕೆತ್ತನೆ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.
10:42 AM (IST) Jan 20
10:07 AM (IST) Jan 20
09:24 AM (IST) Jan 20
ವಡೋದರಾ: ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಅಜೇಯವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಇದರ ಬೆನ್ನಲ್ಲೇ ಆರ್ಸಿಬಿ ಫ್ಯಾನ್ಸ್ ಇನ್ನೊಂದು ಸಲ ಕಪ್ ನಮ್ದೇ ಎನ್ನುತ್ತಿದ್ದಾರೆ.
08:52 AM (IST) Jan 20
ಮುಸ್ತಾಫಿಜರ್ ರಹಮಾನ್ ವಿವಾದದಿಂದಾಗಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ ನಿರಾಕರಿಸುತ್ತಿದೆ. ಆದರೆ, ಐಸಿಸಿ ಈ ಬೇಡಿಕೆಯನ್ನು ತಿರಸ್ಕರಿಸಿ, ಪಂದ್ಯಾವಳಿಯಲ್ಲಿ ಭಾಗವಹಿಸಲು ಅಂತಿಮ ಗಡುವು ನೀಡಿದ್ದು, ತಪ್ಪಿದರೆ ಟೂರ್ನಿಯಿಂದ ಹೊರಹಾಕುವ ಎಚ್ಚರಿಕೆ ನೀಡಿದೆ.