LIVE NOW
Published : Jan 20, 2026, 07:04 AM ISTUpdated : Jan 20, 2026, 10:07 AM IST

India Latest News Live: 2027ರ ವಿಶ್ವಕಪ್‌ ತಂಡದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ಕನ್ಫರ್ಮ್‌! ಆದ್ರೆ ರೋಹಿತ್ ಶರ್ಮಾ ಸ್ಥಾನ?

ಸಾರಾಂಶ

ನವದೆಹಲಿ: ಚಿನ್ನ, ಬೆಳ್ಳಿ ದರ ಹೆಚ್ಚಳ ಪರ್ವ ಮುಂದುವರೆದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಿ ದರ ಕೇಜಿಗೆ 3,07,900 ರು.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಮತ್ತೊಂದೆಡೆ ಚಿನ್ನದ ದರವೂ ಹೆಚ್ಚಳ ಕಂಡಿದ್ದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1, 7,550 ರು. ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1,50,000 ರು.ಗೆ ದರ ದಾಖಲಾಗಿದೆ.

ಶುಕ್ರವಾರಕ್ಕೆ ಹೋಲಿಸಿದರೆ ಚಿನ್ನ, ಬೆಳ್ಳಿ ದರ ಎರಡರಲ್ಲೂ ಏರಿಕೆಯಾಗಿದೆ. ಬೆಳ್ಳಿ ಶುಕ್ರವಾರ 2,98,700 ರು.ಇತ್ತು. ಆದರೆ ಸೋಮವಾರ 9200 ರು. ಹೆಚ್ಚಾಗಿದೆ. ಇನ್ನು 22 ಕ್ಯಾರೆಟ್‌ 10 ಗ್ರಾಂ ಚಿನ್ನ 1, 35,400 ಮತ್ತು 24 ಕ್ಯಾರೆಟ್‌ ಚಿನ್ನ 10 ಗ್ರಾಂಗೆ 1,47,700 ಇತ್ತು. ಆದರೆ ಸೋಮವಾರ ಕ್ರಮವಾಗಿ 2150, 2300 ರು. ಏರಿಕೆಯಾಗಿದೆ.

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ದರ ಏರಿಕೆಯಾಗಿದ್ದು ಬೆಳ್ಳಿ ಒಂದೇ ದಿನ 10,000 ಏರಿಕೆ ಕಂಡು 3,02,600 ರು.ಗೆ ತಲುಪಿದೆ. 10 ಗ್ರಾಂ ಚಿನ್ನ 1900 ರು. ಹೆಚ್ಚಳವಾಗಿ 1,48,100 ರು.ಗೆ ತಲುಪಿದೆ.

ಭರ್ಜರಿ ಏರಿಕೆ: ಕಳೆದ ಒಂದು ವರ್ಷದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 70000 ರು.ನಷ್ಟು ಏರಿಕೆಯಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 2 ಲಕ್ಷ ರು.ನಷ್ಟು ಹೆಚ್ಚಳವಾಗಿದೆ

10:07 AM (IST) Jan 20

2027ರ ವಿಶ್ವಕಪ್‌ ತಂಡದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ಕನ್ಫರ್ಮ್‌! ಆದ್ರೆ ರೋಹಿತ್ ಶರ್ಮಾ ಸ್ಥಾನ?

ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು 2027ರ ವಿಶ್ವಕಪ್ ಆಡುವ ಸಾಧ್ಯತೆ ಹೆಚ್ಚಿದೆ. ಆದರೆ, ಸಾಧಾರಣ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ ಅವರ ಸ್ಥಾನವು ಮುಂಬರುವ ಸರಣಿಗಳ ಪ್ರದರ್ಶನವನ್ನು ಅವಲಂಬಿಸಿದೆ. ಏಕದಿನ ವಿಶ್ವಕಪ್ ಗೆಲ್ಲುವ ಕನಸು ಹೊತ್ತಿರುವ ರೋಹಿತ್‌ಗೆ ಮುಂದಿನ ಹಾದಿ ಸವಾಲಿನದ್ದಾಗಿದೆ.
Read Full Story

09:24 AM (IST) Jan 20

WPL ಸತತ 5 ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ! ಇನ್ನೊಂದು ಕಪ್‌ ನಮ್ದೇ ಎಂದ ಫ್ಯಾನ್ಸ್

ವಡೋದರಾ: ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಅಜೇಯವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಫ್ಯಾನ್ಸ್ ಇನ್ನೊಂದು ಸಲ ಕಪ್ ನಮ್ದೇ ಎನ್ನುತ್ತಿದ್ದಾರೆ.

 

Read Full Story

08:52 AM (IST) Jan 20

ಭಾರತಕ್ಕೆ ಬರದಿದ್ದರೇ ಟಿ20 ವಿಶ್ವಕಪ್‌ನಿಂದ ಔಟ್, ಈ ತಂಡಕ್ಕೆ ಚಾನ್ಸ್! ಬಾಂಗ್ಲಾದೇಶಕ್ಕೆ ಐಸಿಸಿ ಖಡಕ್ ಎಚ್ಚರಿಕೆ

ಮುಸ್ತಾಫಿಜರ್‌ ರಹಮಾನ್‌ ವಿವಾದದಿಂದಾಗಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ ನಿರಾಕರಿಸುತ್ತಿದೆ. ಆದರೆ, ಐಸಿಸಿ ಈ ಬೇಡಿಕೆಯನ್ನು ತಿರಸ್ಕರಿಸಿ, ಪಂದ್ಯಾವಳಿಯಲ್ಲಿ ಭಾಗವಹಿಸಲು ಅಂತಿಮ ಗಡುವು ನೀಡಿದ್ದು, ತಪ್ಪಿದರೆ ಟೂರ್ನಿಯಿಂದ ಹೊರಹಾಕುವ ಎಚ್ಚರಿಕೆ ನೀಡಿದೆ.

Read Full Story

More Trending News