ಮನೆ, ಮಕ್ಕಳನ್ನು ನೋಡಿಕೊಳ್ಳುವ ಮಹಿಳೆ ಸಂಬಳವಿಲ್ಲದೆ ದುಡಿಯುತ್ತಾಳೆ. ಆಕೆಗೆ ಬರೀ ಗೃಹಿಣಿ ಪಟ್ಟ ಸಿಕ್ಕಿದ್ರೆ ಅದು ಸೂಕ್ತವಲ್ಲ. ಆಕೆ ಕೆಲಸ ರಾಷ್ಟ್ರ ನಿರ್ಮಾಣದ ಕೆಲಸ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗೃಹಿಣಿಯರ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಪ್ರಬಲ ಸಂದೇಶ ನೀಡಿದೆ. ಮನೆ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವ ಮಹಿಳೆಯರ ಕೊಡುಗೆಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಆದ್ರೆ ಅವರ ಕೆಲಸವು ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅವರನ್ನು ಗೃಹಿಣಿ ಬದಲು ರಾಷ್ಟ್ರ ನಿರ್ಮಾಪಕರೆನ್ನಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
27
ಗೃಹಿಣಿ ಕುಟುಂಬದ ನಿಜವಾದ ಶಕ್ತಿ
ಗೃಹಿಣಿಯೊಬ್ಬಳ ಪಾತ್ರವು ಸುವ್ಯವಸ್ಥೆ ಮತ್ತು ಬಲವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವರು ಅಡುಗೆ ಮಾಡುವುದು ಅಥವಾ ಮನೆ ಸ್ವಚ್ಛಗೊಳಿಸುವುದಕ್ಕೆ ಸೀಮಿತವಾಗಿಲ್ಲ. ಮಕ್ಕಳು, ಅವರ ಶಿಕ್ಷಣ, ವೃದ್ಧರ ಆರೈಕೆ ಮತ್ತು ಇಡೀ ಕುಟುಂಬದ ಅಗತ್ಯಗಳನ್ನು ಸಹ ನೋಡಿಕೊಳ್ಳುತ್ತಾರೆ. ಅವರ ನಿರಂತರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸೋದಿಲ್ಲ. ಅವರು ಕುಟುಂಬದ ಯಶಸ್ಸಿನ ಮೂಲ ಎಂದು ಕೋರ್ಟ್ ಹೇಳಿದೆ.
37
ಅವರ ಕೊಡುಗೆ ದೊಡ್ಡದು
ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್. ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್ ನೇತೃತ್ವದ ಪೀಠ ಮಹಿಳೆಯನ್ನು ಗೃಹಿಣಿ ಎಂದು ಕರೆಯುವುದರಿಂದಲೇ ಆಕೆಯ ನಿಜವಾದ ಕೊಡುಗೆ ಸಂಪೂರ್ಣವಾಗಿ ಪ್ರತಿಫಲಿಸುವುದಿಲ್ಲ ಎಂದಿದೆ. ಗೃಹಿಣಿ ಭವಿಷ್ಯದ ಪೀಳಿಗೆಯನ್ನು ಸಿದ್ಧಪಡಿಸುತ್ತಾಳೆ. ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುತ್ತಾಳೆ. ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ಸೃಷ್ಟಿಸುವಲ್ಲಿ ಪಾತ್ರ ವಹಿಸುತ್ತಾಳೆ. ಅವರನ್ನು ಗೃಹಿಣಿ ಎನ್ನುವ ಬದಲು ʻʻರಾಷ್ಟ್ರ ನಿರ್ಮಾಪಕ" ಎಂಬ ಪದ ಬಳಕೆ ಹೆಚ್ಚು ಸೂಕ್ತ ಎಂದಿದೆ.
ಮನೆ ಕೆಲಸವನ್ನು ವೇತನ ರಹಿತ ಕೆಲಸವೆಂದು ಪರಿಗಣಿಸಲಾಗುತ್ತದೆ. ಮನೆಯ ಪ್ರತಿ ಕೆಲಸಕ್ಕೆ ಪ್ರತ್ಯೇಕ ಉದ್ಯೋಗಿಗಳನ್ನು ನೇಮಿಸಿದರೆ, ಅದಕ್ಕೆ ಗಮನಾರ್ಹ ಹಣ ಖರ್ಚಾಗುತ್ತದೆ. ಆದ್ದರಿಂದ, ಗೃಹಿಣಿ ಆರ್ಥಿಕವಾಗಿ ಕೊಡುಗೆ ನೀಡುವುದಿಲ್ಲ ಎಂದು ಊಹಿಸುವುದು ಅವಾಸ್ತವಿಕವಾಗಿದೆ ಎಂದು ಕೋರ್ಟ್ ಹೇಳಿದೆ.
57
ತಿಂಗಳು 30 ಸಾವಿರಕ್ಕೆ ಸಮ
ಅಪಘಾತ ಪರಿಹಾರ ಪ್ರಕರಣವೊಂದರ ವಿಚಾರಣೆ ವೇಳೆ ಮಹಿಳೆ ಮಾಡುವ ನಿತ್ಯದ ಕೆಲಸ ಪ್ರತಿ ತಿಂಗಳ 30 ಸಾವಿರ ಸಂಬಳಕ್ಕೆ ಸಮ ಎಂದು ಕೋರ್ಟ್ ಹೇಳಿದೆ. ಮನೆಯೊಳಗೆ ನಿರ್ವಹಿಸುವ ಕೆಲಸವು ಹೊರಗೆ ಮಾಡುವ ವೃತ್ತಿಪರ ಕೆಲಸದಷ್ಟೇ ಮುಖ್ಯ ಎಂಬುದನ್ನು ಕೋರ್ಟ್ ಒತ್ತಿ ಹೇಳಿದೆ.
67
ಅಪಘಾತ ಪ್ರಕರಣಗಳಲ್ಲಿ ಹೆಚ್ಚಿನ ನ್ಯಾಯ
ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡುವ ವೇಳೆ ಗೃಹಿಣಿಯನ್ನು ಕಡಿಮೆ ಅಂದಾಜು ಮಾಡಲಾಗುತ್ತದೆ. ಆಕೆ ಸಂಬಳ ಪಡೆಯುವ ಉದ್ಯೋಗಿಯಲ್ಲ ಎನ್ನುವ ಪಟ್ಟಿಗೆ ಸೇರಿಸಲಾಗುತ್ತದೆ. ಇದ್ರಿಂದ ಕಡಿಮೆ ಪರಿಹಾರ ನೀಡಲಾಗುತ್ತದೆ. ಆದ್ರೆ ಅದು ತಪ್ಪು. ಮನೆಕೆಲಸ ಮತ್ತು ಕುಟುಂಬ ಕೆಲಸದ ನಷ್ಟವನ್ನು ಪರಿಹಾರಕ್ಕಾಗಿ ಪ್ರತ್ಯೇಕ ಮಾನದಂಡವೆಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.
77
ಪರಿಹಾರ ಹೀಗೆ ನಿರ್ಧರಿಸಿ
ಪರಿಹಾರಕ್ಕೆ ಸಂಬಳ ಮಾತ್ರವಲ್ಲ ವಯಸ್ಸು, ಶಿಕ್ಷಣ, ಕೌಶಲ್ಯ, ಕುಟುಂಬದ ಜವಾಬ್ದಾರಿಗಳು ಮತ್ತು ಆರ್ಥಿಕ ಸಂದರ್ಭಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಪ್ರತಿ ಪ್ರಕರಣದಲ್ಲಿ ಹೆಚ್ಚು ಸಮತೋಲಿತ ಮತ್ತು ನ್ಯಾಯಯುತ ನಿರ್ಧಾರಕ್ಕೆ ಅವಕಾಶ ನೀಡುತ್ತದೆ. 2001 ರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆಕೆಯ ಪತಿ ಮತ್ತು ಮೂವರು ಮಕ್ಕಳಿಗೆ ಎಂಟು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಮಹತ್ವದ ಹೇಳಿಕೆ ನೀಡಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.