ಆರಂಭದಲ್ಲಿ ವಿನಯ್ ಅವರಿಗೆ ಒಂದೇ ಒಂದು ಅವಕಾಶವೇ ಸಿಗುತ್ತಿರಲಿಲ್ಲ. ಇದಕ್ಕಾಗಿ ವಿನಯ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. “ಪೌರಾಣಿಕ ಧಾರಾವಾಹಿಯ ಆಡಿಷನ್ಗೆ ಹೋದಾಗ ಏಜೆನ್ಸಿಯವರು ಬಾಯಿಗೆ ಬಂದಹಾಗೆ ಮಾತನಾಡಿದರು, ಶರ್ಟ್ ತೆಗೆಸಿ ಫಿಟ್ನೆಸ್ ನೋಡಿದರು, ಶೇವ್ ಕೂಡ ಮಾಡಿ ಲುಕ್ ಟೆಸ್ಟ್ ಮಾಡಿದರು. ಆಮೇಲೆ ಫೋನ್ ಬಂದು, ಕಿಚ್ಚ ಸುದೀಪ್ ಥರ ವಾಯ್ಸ್ ಬೇಕು, ಆಪರೇಶನ್ ಮಾಡಿಸಿಕೊಳ್ಳಿ ಎಂದು ಹೇಳಿದ್ದರಂತೆ. ಅದಾದ ಬಳಿಕ ಏಜೆನ್ಸಿಯವರು, ಶೇವ್ ಮಾಡಿಸಿಕೊಳ್ಳೋರು ಡೀಲ್ ಮಾಡಿಕೊಂಡು ಬ್ಯುಸಿನೆಸ್ ಮಾಡ್ತಿದ್ದಾರೆ ಎಂದು ಆಮೇಲೆ ಗೊತ್ತಾಯಿತು. ಆಪರೇಶನ್ ಮಾಡಿಸಿಕೊಳ್ಳದೆ ನಾನು ಬಚಾವ್ ಆದೆ” ಎಂದು ವಿನಯ್ ಕಶ್ಯಪ್ ಅವರೇ ಹೇಳಿದ್ದಾರೆ.