Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​

Published : Feb 04, 2026, 08:13 PM IST

ಕರ್ಣ ಸೀರಿಯಲ್ ರೋಚಕ ಹಂತ ತಲುಪಿದ್ದು, ರಮೇಶನ ದುಷ್ಟತನವನ್ನು ಅರಿತ ಕರ್ಣ ಪ್ರತೀಕಾರಕ್ಕೆ ಇಳಿದಿದ್ದಾನೆ. ಪೂಜೆಯ ನೆಪದಲ್ಲಿ ರಮೇಶ್‌ಗೆ ಉಪವಾಸ ಮಾಡಿಸಿ, ಹಸಿವಿನಿಂದ ತಲೆತಿರುಗಿ ಪತ್ನಿಯ ಕಾಲಿಗೆ ಬೀಳುವಂತೆ ಮಾಡುವ ಮೂಲಕ ತನ್ನ ಆಟವನ್ನು ಶುರುಮಾಡಿದ್ದಾನೆ.

PREV
16
ರೋಚಕ ಹಂತ

ಕರ್ಣ ಸೀರಿಯಲ್​ ಇದೀಗ ರೋಚಕ ಹಂತ ತಲುಪಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಕರ್ಣನ ಒಳ್ಳೆಯತನ ಅತಿಯಾಗಿ ಅದು ಅವನಿಗೇ ಮುಳುವಾಗಿತ್ತು. ಸಮಯ ಬಂದಾಗ ಒಳ್ಳೆಯದ್ದನ್ನು ಮಾಡುವುದಕ್ಕಾಗಿಯಾದರೂ ಸ್ವಲ್ಪ ಕೆಟ್ಟವರೂ ಆಗುವ ಅಗತ್ಯ ಇದೆ ಎಂದು ಕರ್ಣ ಸೀರಿಯಲ್​ ತೋರಿಸುತ್ತಿದೆ.

26
ಕರ್ಣನ ಆಟ

ರಮೇಶನ ದುರ್ಗಣ ಕರ್ಣನಿಗೆ ತಿಳಿಯುತ್ತಲೇ ಅವನು ಆಟ ಶುರುವಿಟ್ಟುಕೊಂಡಿದ್ದಾರೆ. ನಿಧಿ, ನಿತ್ಯಾ ಮತ್ತು ತನ್ನ ಬಾಳಿನಲ್ಲಿ ಮಾತ್ರವಲ್ಲದೇ ಅಮ್ಮನಿಗೂ ನೀಡ್ತಿರೋ ದೌರ್ಜನ್ಯದ ಬಗ್ಗೆ ಆತನಿಗೆ ತಿಳಿಯುತ್ತಲೇ ತಕ್ಕಶಾಸ್ತಿ ಮಾಡಲು ಶುರು ಮಾಡಿದ್ದಾನೆ.

36
ಪೂಜೆಯ ನೆಪದಲ್ಲಿ ಪಾಠ

ಇದೀಗ ಪೂಜೆಯ ನೆಪದಲ್ಲಿ ಪೂಜೆಗೆ ಕುಳಿತುಕೊಳ್ಳುವವರು ಉಪವಾಸ ಇರಬೇಕು ಎಂದಿದ್ದಾನೆ. ಮನೆಯವರ ಒಳ್ಳೆಯತನಕ್ಕಾಗಿ ತಾನು ಒಳ್ಳೆಯವನಂತೆ ಪೋಸ್​​ ಕೊಡುವುದು ರಮೇಶ್​ಗೆ ಅನಿವಾರ್ಯವಾಗಿದೆ.

46
ರಮೇಶ್​ಗೆ ಹಸಿವು

ಉಪವಾಸ ಇರುವುದು ಎಂದರೆ ಸುಮ್ನೇನಾ? ರಮೇಶ್​ಗೆ ಬಾಯಾರಿಕೆ ಆಗಿದೆ. ಆದರೆ ಕರ್ಣ ಅವನ ಎದುರೇ ಎಲ್ಲರಿಗೂ ಜ್ಯೂಸ್​ ತಂದುಕೊಟ್ಟಿದ್ದಾನೆ. ಹೇಳಲು ಆಗದೇ, ಬಿಡಲೂ ಆಗದ ಸ್ಥಿತಿ ರಮೇಶ್​ದ್ದು.

56
ಪತ್ನಿ ಕಾಲಕೆಳಗೆ

ಆರತಿ ಮಾಡುವ ಸಮಯದಲ್ಲಿ ಹಸಿವೆಯಿಂದ ತಲೆತಿರುಗಿ ಬಿದ್ದ ರಮೇಶ್​, ಸೀದಾ ಪತ್ನಿಯ ಕಾಲ ಕೆಳಗೆ ಬಿದ್ದಿದ್ದಾನೆ. ಇಬ್ಬರೂ ಸೇರಿ ಆರತಿ ಮಾಡುತ್ತಿದ್ದರಿಂದ ಇದನ್ನು ಮೊದಲೇ ಊಹಿಸಿ ಕರ್ಣ ಪ್ಲ್ಯಾನ್​ ಮಾಡಿದ್ದ.

66
ಹೆಜ್ಜೆಹೆಜ್ಜೆಗೂ ಪ್ರತಿಕಾರ

ಅವನು ಪತ್ನಿಯ ಕಾಲ ಕೆಳಗೆ ಬಿದ್ದದ್ದರಿಂದ ಕರ್ಣ, ಮನಸ್ಸಿನಲ್ಲಿಯೇ ತಕ್ಕ ಶಾಸ್ತಿಯಾಯ್ತು ಎಂದಿದ್ದಾನೆ. ಪತ್ನಿ ಸೇರಿದಂತೆ ಎಲ್ಲರೂ ಗಾಬರಿಯಾಗಿದ್ದಾರೆ. ಆಕೆ ಪತಿಯನ್ನು ಎತ್ತಲು ಹೋಗಿದ್ದಾಳೆ. ಅಲ್ಲಿಗೆ ಕರ್ಣ ಹೆಜ್ಜೆಹೆಜ್ಜೆಗೂ ಪ್ರತಿಕಾರ ತೆಗೆದುಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories