ಅಲ್ಲಿಗೆ ರಮೇಶನೇ ದುಡ್ಡು ಕೊಟ್ಟು ಜ್ಯೋತಿಷಿ ಬಳಿ ಸುಳ್ಳು ಹೇಳಿಸಿರುವುದು ತಿಳಿಯುತ್ತದೆ. ಪದೇ ಪದೇ ಜ್ಯೋತಿಷಿಗಳನ್ನು ಈ ರೀತಿಯಾಗಿ ಸೀರಿಯಲ್ಗಳಲ್ಲಿ ತೋರಿಸುವುದಕ್ಕೆ ಭಾರಿ ಆಕ್ರೋಶ, ಅಸಮಾಧಾನ ಹೊರ ಹಾಕಲಾಗುತ್ತಿದೆ. ಇದೇ ಮಾರ್ಗ ಬೇಕಾ? ಬೇರೆಯ ರೀತಿಯಲ್ಲಿ ಇದೇ ದೃಶ್ಯಗಳನ್ನು ತೋರಿಸಬಹುದಲ್ವಾ, ಎಲ್ಲಾ ಸೀರಿಯಲ್ಗಳಲ್ಲಿಯೂ ಜ್ಯೋತಿಷಿಗಳನ್ನು ವಿಲನ್ಗಳಂತೆ ಬಿಂಬಿಸುವುದು ಏಕೆ ಎನ್ನುವ ಪ್ರಶ್ನೆ ಮೂಡಿಬರುತ್ತಿದೆ.