ಮೈಸೂರು : ಮಹಿಷನ ಊರು ಮುಂದೆ ಮೈಸೂರು ಆಯ್ತು.
ಚಿಕ್ಕ ಬಳ್ಳಾಪುರ : ಚಿಕ್ಕ ಅಂದ್ರೆ ಸಣ್ಣ, ಬಳ್ಳ ಅಂದ್ರೆ ಕಾಳುಗಳನ್ನು ಅಳೆಯುವ ಸಾಧನ… ಇವೆರಡು ಸೇರಿ ಈ ಊರಿಗೆ ಚಿಕ್ಕ ಬಳ್ಳಾಪುರ (Chikkaballapura) ಎನ್ನುವ ಹೆಸರು ಬಂತು.
ಕಾರವಾರ : ಈ ಹೆಸರು ಬಂದಿದ್ದು, ಕಡೇ ವಾಡ ಎನ್ನುವ ಕೊಂಕಣಿ ಪದದಿಂದ. ಕಡೆ ಅಂದ್ರೆ ಕೊನೆಯ, ವಾಡ ಅಂದ್ರೆ ಪ್ರದೇಶ. ಹಾಗಾಗಿ ಕಡೇವಾಡ ಕಾರವಾರವಾಯ್ತು.
ತುಮಕೂರು : ತುಂಬೆಗಿಡಗಳು ಹೆಚ್ಚಾಗಿ ಬೆಳೆಯುವ ಊರು ತುಮಕೂರು.
ಕುಂದಾಪುರ : ಕುಂದವರ್ಮ ಆಳ್ವಿಕೆ ಮಾಡಿದ ಊರು ಕುಂದಾಪುರ