ಮದುವೆ ದುಡ್ಡಲ್ಲಿ ಇನ್ನೊಂದು ಜೀವಕ್ಕೆ ಬೆಳಕು ನೀಡಿ, ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗಳು

Published : Feb 18, 2026, 10:58 AM IST

Indian Wedding: ಮದುವೆ ಅಂದರೆ ಶೋ ಆಫ್, ಅದ್ಧೂರಿತನ ಎನ್ನುವ ಜೋಡಿಗಳ ನಡುವೆ, ಸರಳವಾಗಿ ಮದುವೆಯಾಗಿ, ಮದುವೆಗಿಟ್ಟ ಹಣದಲ್ಲಿ ಹಲವು ಜೀವಗಳಿಗೆ ನೆರವಾದ ಜೋಡಿಗಳು ನಮ್ಮ ನಡುವೆ ಅದೆಷ್ಟೋ ಇವೆ. ಇಲ್ಲಿವೆ ನೋಡಿ ಅಂತಹ ಸುಂದರ ಜೋಡಿಗಳ ವಿವರ.

PREV
110
ವಿಭಿನ್ನ ರೀತಿಯಲ್ಲಿ ಮದುವೆಯಾದ ಜೋಡಿಗಳು

ಮದುವೆ ಅಂದ್ರೆ, ಹೆಚ್ಚಾಗಿ ಭವ್ಯತೆಯ ಮೇಲೆ ಕೇಂದ್ರೀಕರಿಸುವ ಜಗತ್ತಿನಲ್ಲಿ, ಈ ಜೋಡಿಗಳು ಹೆಚ್ಚು ಹಣ ಖರ್ಚು ಮಾಡುವುದನ್ನು ಆ ಹಣದಿಂದ ಸಂತ್ರಸ್ತರಿಗೆ ನೆರವು, ಕ್ಯಾನ್ಸರ್ ರೋಗಿಗಳಿಗೆ ನೆರವು, ಮಕ್ಕಳ ದತ್ತು ಸ್ವೀಕಾರ, ಜೀರೋ ವೇಸ್ಟ್ ವೆಡ್ಡಿಂಗ್ ಎನ್ನುವ ಸಮಾಜಕ್ಕೆ ಉಪಕಾರಿಯಾಗುವಂತಹ ಯೋಜನೆಗಳನ್ನು ರೂಪಿಸಿ, ಎಲ್ಲರ ನಡುವೆ ವಿಭಿನ್ನವಾಗಿ ನಿಂತರು.

210
ಸಹಾಯ ಧನ

ಇಡುಕ್ಕಿಯ ಜೋಡಿಗಳಾದ ಕಲೇಶ್ ಕುಮಾರ್ ಮತ್ತು ಸುಜಿತಾ ತಮ್ಮ ಮದುವೆಯ ಉಡುಗೊರೆಯನ್ನು ವಯನಾಡಿನಲ್ಲಿ ಭೂಕುಸಿತದಿಂದ ತೊಂದರೆಗೊಳಗಾದ ಜನರಿಗೆ ನೆರವು ನೀಡಲು ಉಪಯೋಗಿಸಿದರು.

310
11 ಅನಾಥ ಮಕ್ಕಳ ದತ್ತು ಸ್ವೀಕಾರ

ಕಾನ್ಪುರದ ಜೋಡಿಗಳಾದ ಅಮಿತ್ ಮತ್ತು ದೀಕ್ಷಾ ಯಾದವ್ ತಮ್ಮ ಮದುವೆ ದಿನ 11 ಅನಾಥ ಮಕ್ಕಳನ್ನು ದತ್ತು ಪಡೆದು, ಅವರ ವಿದ್ಯಾಭ್ಯಾಸದ ಖರ್ಚು ಭರಿಸುವುದಾಗಿ ಶಪಥ ಮಾಡಿದರು.

410
ಜೀರೋ ವೇಸ್ಟ್

ಬೆಂಗಳೂರಿನ ಡಾ ಪೂರ್ವಿ ಭಟ್ ಮತ್ತು ಶಮಂತ್ ಇವರು ಜೀರೋ ವೇಸ್ಟ್ ಡೆಕೋರೆಶನ್ ಮಾಡಿ ಮದುವೆಯಾದರು. ಇವರ ಮದುವೆ ಮಂಟಪ ಕಬ್ಬಿನ ಜಲ್ಲೆಯಿಂದ ಮಾಡಾಲಾಗಿತ್ತು. ಮದುವೆಯ ಪೂರ್ತಿ ಡೆಕೊರೇಶನ್ ಎಲ್ಲಾ ಸಾಮಾಗ್ರಿಗಳು ಜೀರೋ ವೇಸ್ಟ್ ಆಗಿತ್ತು.

510
ಕ್ಯಾನ್ಸರ್ ರೋಗಿಗಳಿಗೆ ನೆರವು

ಮಧುರೈನ ಜೋಡಿಗಳಾದ ಹರಿಹರನ್ ಮತ್ತು ತೇನ್ ಮೋಳಿ ಮುಯ್ಯಿಗೆ ಬಂದ ಹಣದಲ್ಲಿ 1.91 ಲಕ್ಷ ರೂಪಾಯಿಯನ್ನು ಟರ್ಮಿನಲ್ ಕ್ಯಾನ್ಸರ್ ರೋಗಿಗಳ ಆರೋಗ್ಯ ಮತ್ತು ಆರೈಕೆ ಮತ್ತು ಆಹಾರಕ್ಕಾಗಿ ದೇಣಿಗೆ ನೀಡಿದರು.

610
ಸರಳ ಮದುವೆಯಾದ ಸಿವಿಲ್ ಸರ್ವಿನ್ ಜೋಡಿ

ಸಿವಿಲ್ ಸರ್ವೀನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಶಿವನ್ ತ್ಯಾಗಿ (ಐಪಿಒಎಸ್) ಮತ್ತು ಆರ್ಯ ಆರ್ ನಾಯರ್ (ಐಆರ್’ಎಸ್) ಸರಳ ವಿವಾಹವಾಗಿ ಹಣವನ್ನು 20 ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟರು.

710
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ

ಅಹ್ಮದಾಬಾದಿನ ಜೋಡಿಗಳಾದ ಅಮರ್ ಕಲಾಮ್ಕರ್ ಮತ್ತು ರಾಣಿ ತಮ್ಮ ಮದುವೆಯ ಅತಿಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದಂತಹ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಸಲಹೆ ನೀಡಿದರು. ಆ ಮೂಲಕ ಅಗತ್ಯ ಇರುವ ಮಕ್ಕಳಿಗೆ ಉಚಿತ ಲೈಬ್ರೆರಿ ಮಾಡುವ ಮೂಲಕ ನೆರವಾದರು.

810
20 ಬಡ ಮಕ್ಕಳಿಗೆ ಸಹಾಯ

ಐಆರ್’ಎಸ್ ಜೋಡಿಗಳಾದ ಸೀತಾ ಕೃಷ್ಣಮೂರ್ತಿ ಮತ್ತು ಚಂದನ್ ಕುಮಾರ್ ಜೋಡಿ ತಮ್ಮ ಮನೆಯ ಪೂಜಾ ಕೋಣೆಯಲ್ಲಿ ಮದುವೆಯಾಗಿ, ಮದುವೆಯ ಹಣದಲ್ಲಿ 20 ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು.

910
ಹಣವನ್ನು ಗ್ರಾಮದ ಹೈ ಸ್ಕೂಲ್ ಮತ್ತು ಲೈಬ್ರೆರಿಗೆ ದಾನ

ಪೊಲೀಸ್ ಜೋಡಿಗಳಾದ ಮನೋಜ್ ಪಾಟೀಲ್ ಮತ್ತು ಸರಿತಾ ಲಾಯ್ಕರ್ ತಮ್ಮ ಮದುವೆಯ ಹಣವನ್ನು ತಮ್ಮ ಗ್ರಾಮದ ಪ್ರೌಢ ಶಾಲೆ ಮತ್ತು ಸಾರ್ವಜನಿಕ ಲೈಬ್ರೆರಿಗೆ ದಾನ ನೀಡಿದರು.

1010
ರೈತ ವಿಧವೆಯರಿಗೆ ಹಣದ ನೆರವು

ಬಬ್ಲು ಚೌಧರಿ ಮತ್ತು ಭೂಮಿಕಾ ಪಾಂಡೆ ತಮ್ಮ ಹಣವನ್ನು ಉಳಿಸಿ, ವಿಧಾರ್ಥದ ರೈತ ವಿಧವೆಯರಿಗೆ ಹಣದ ನೆರವನ್ನು ನೀಡಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories