Acidity home remedy: ಇಂದು ಅನೇಕರು ಅಸಿಡಿಟಿ, ಹೊಟ್ಟೆಯುಬ್ಬರ ಹಾಗೂ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ರೀತಿಯ ಜೀರ್ಣಕ್ರಿಯೆ ತೊಂದರೆಗಳಿಂದ ಮುಕ್ತಿ ಪಡೆಯಲು ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಶುಂಠಿ ಮತ್ತು ಧನಿಯಾದಿಂದ ತಯಾರಿಸುವ ಸರಳ ಮನೆಮದ್ದು ಇಲ್ಲಿದೆ.
ಹೊಟ್ಟೆ ಉಬ್ಬರಕ್ಕೆ ಪರಿಹಾರ ಇಂದಿನ ಧಾವಂತದ ಬದುಕಿನಲ್ಲಿ ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು ಹಾಗೂ ಜಂಕ್ ಫುಡ್ ಸೇವನೆಯಿಂದಾಗಿ ಗ್ಯಾಸ್ಟ್ರಿಕ್, ಅಸಿಡಿಟಿ ಮತ್ತು ಹೊಟ್ಟೆ ಉಬ್ಬರ (ಗ್ಯಾಸ್) ಸಾಮಾನ್ಯವಾಗಿದೆ. ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಲು ಅಡುಗೆಮನೆಯಲ್ಲಿ ಸಿಗುವ ಶುಂಠಿ ಮತ್ತು ಧನಿಯಾದಿಂದ ತಯಾರಿಸಬಹುದಾದ ಸರಳ ಮನೆಮದ್ದು ಇಲ್ಲಿದೆ.
27
ಆಹಾರ ಕ್ರಮದಲ್ಲಿ ಬದಲಾವಣೆ
ಆಹಾರ ಕ್ರಮದಲ್ಲಿ ಬದಲಾವಣೆ ಇಂದಿನ ಬಿಡುವಿಲ್ಲದ ದಿನಚರಿಯಲ್ಲಿ ಪೌಷ್ಟಿಕ ಆಹಾರದ ಕೊರತೆ ಮತ್ತು ಜಂಕ್ ಫುಡ್ಗಳ ಅತಿಯಾದ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಹೆಚ್ಚುತ್ತಿವೆ. ಅದರಲ್ಲೂ ಮುಂಜಾನೆ ಎದ್ದ ತಕ್ಷಣ ಗ್ಯಾಸ್ಟ್ರಿಕ್, ಎದೆಯುರಿ, ಹೊಟ್ಟೆ ಉಬ್ಬರ ಅಥವಾ ಮಲಬದ್ಧತೆಯಿಂದ ಬಳಲುವವರ ಸಂಖ್ಯೆ ದೊಡ್ಡದಿದೆ. ಒಂದು ಸಣ್ಣ ಆಹಾರ ಕ್ರಮದ ಬದಲಾವಣೆ ಹಾಗೂ ಈ ನೈಸರ್ಗಿಕ ಪಾನೀಯದಿಂದ ಹೊಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.
37
ಬೇಕಾಗುವ ಸಾಮಗ್ರಿಗಳು
ಬೇಕಾಗುವ ಸಾಮಗ್ರಿಗಳು ಧನಿಯಾ (ಕೊತ್ತಂಬರಿ ಬೀಜ) - 1 ಚಮಚ ಹಸಿ ಶುಂಠಿ - 1 ಸಣ್ಣ ತುಂಡು ಜೇನುತುಪ್ಪ - ಅರ್ಧ ಚಮಚ ನೀರು - 1 ಲೋಟ
ತಯಾರಿಸುವ ವಿಧಾನ *ಮೊದಲು ಒಂದು ಚಮಚ ಧನಿಯಾವನ್ನು ಬಾಣಲೆಯಲ್ಲಿ ಹಾಕಿ ಹಗುರವಾಗಿ ಹುರಿದುಕೊಳ್ಳಿ. *ನಂತರ ಹುರಿದ ಧನಿಯಾವನ್ನು ಮಾಮೂಲಿ ಟೀ ಪಾತ್ರೆಗೆ ಹಾಕಿ, ಇದಕ್ಕೆ ಒಂದು ಲೋಟ ನೀರು ಮತ್ತು ಜಜ್ಜಿದ ಸಣ್ಣ ಶುಂಠಿ ತುಂಡನ್ನು ಸೇರಿಸಿ ಚೆನ್ನಾಗಿ ಕುದಿಸಿ. 3-4 ನಿಮಿಷ ಕುದಿಸಿದರೆ ಉತ್ತಮ. *ನೀರು ಚೆನ್ನಾಗಿ ಕುದಿ ಬಂದ ನಂತರ ಅದನ್ನು ಸೋಸಿ, ಉಗುರುಬೆಚ್ಚಗಾಗಲು ಬಿಡಿ. *ಈ ಉಗುರುಬೆಚ್ಚಗಿನ ಕಷಾಯಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ.
57
ಸೇವಿಸುವ ಕ್ರಮ ಮತ್ತು ಪ್ರಯೋಜನಗಳು
ಸೇವಿಸುವ ಕ್ರಮ ಮತ್ತು ಪ್ರಯೋಜನಗಳು *ಈ ಮಿಶ್ರಣವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ. *ಇದನ್ನು ನಿಯಮಿತವಾಗಿ 2-3 ದಿನಗಳ ಕಾಲ ಸೇವಿಸಿದರೆ ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. *ಧನಿಯಾ ಮತ್ತು ಶುಂಠಿಯಲ್ಲಿರುವ ಜೀರ್ಣಕಾರಿ ಗುಣಗಳು ಹೊಟ್ಟೆಯನ್ನು ತಂಪಾಗಿಸಿ, ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.
67
ಸೇವಿಸುವ ಕ್ರಮ ಮತ್ತು ಪ್ರಯೋಜನಗಳು
ಸೇವಿಸುವ ಕ್ರಮ ಮತ್ತು ಪ್ರಯೋಜನಗಳು *ಈ ಮಿಶ್ರಣವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ. *ಇದನ್ನು ನಿಯಮಿತವಾಗಿ 2-3 ದಿನಗಳ ಕಾಲ ಸೇವಿಸಿದರೆ ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. *ಧನಿಯಾ ಮತ್ತು ಶುಂಠಿಯಲ್ಲಿರುವ ಜೀರ್ಣಕಾರಿ ಗುಣಗಳು ಹೊಟ್ಟೆಯನ್ನು ತಂಪಾಗಿಸಿ, ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.
77
ಮುನ್ನೆಚ್ಚರಿಕೆ:
ಮುನ್ನೆಚ್ಚರಿಕೆ *ಯಾವುದೇ ಮನೆಮದ್ದನ್ನು ಅತಿಯಾಗಿ ಸೇವಿಸಬಾರದು, ಮಿತವಾಗಿರಲಿ. *ಜೇನುತುಪ್ಪವನ್ನು ಕುದಿಯುವ ನೀರಿಗೆ ಅಥವಾ ಹೆಚ್ಚು ಬಿಸಿಯಿರುವಾಗ ಹಾಕಬಾರದು. ನೀರು ಉಗುರುಬೆಚ್ಚಗಾದ ನಂತರವೇ (Lukewarm) ಜೇನುತುಪ್ಪವನ್ನು ಸೇರಿಸಬೇಕು. *ಧನಿಯಾವನ್ನು ತುಂಬಾ ಕರಿಯಾಗದಂತೆ ಹಗುರವಾಗಿ ಹುರಿದುಕೊಂಡರೆ ಕಷಾಯದ ರುಚಿ ಮತ್ತು ಗುಣಮಟ್ಟ ಹೆಚ್ಚುತ್ತದೆ. (ಸೂಚನೆ: ಈ ಮಾಹಿತಿಯು ಸಾಮಾನ್ಯ ಅರಿವಿಗಾಗಿ ಮಾತ್ರ. ತೀವ್ರತರವಾದ ಗ್ಯಾಸ್ಟ್ರಿಕ್ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ).
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.